Advertisement
MIRROR FOCUS

ಭರ್ಜರಿ ಗಾಳಿ ಮಳೆಗೆ ಕೃಷಿಗೆ ಹಾನಿ | ಕಲ್ಲಾಜೆಯಲ್ಲಿ ದಾಖಲೆಯ 95 ಮಿಮೀ ಮಳೆ |

Share

ಬುಧವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಸುಳ್ಯ ತಾಲೂಕು ಸೇರಿದಂತೆ ವಿವಿದೆಡೆಯ ಕೃಷಿಕರಿಗೆ ಅಪಾರ ನಷ್ಟವಾಗಿದೆ. ಗಾಳಿ ಮಳೆಗೆ ವಿವಿದೆಡೆ ಮನೆಗೆ, ಅಂಗಡಿಗಳಿಗೆ ಹಾನಿಯಾಗಿದೆ. ಪುತ್ತೂರು ಜಾತ್ರಾ ಉತ್ಸವದ ಪ್ರಯುಕ್ತ ಹಾಕಿದ್ದ ಅಂಗಡಿಗಳಿಗೂ ಮಳೆಯಿಂದ ಹಾನಿಯಾಗಿದೆ.  ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಸುಳ್ಯ ತಾಲೂಕಿನ ವಿವಿದೆಡೆ ಅಡಿಕೆ ಮರಗಳು ಉರುಳಿದೆ. ಕಳೆದ 3 ದಿನದ ಗಾಳಿ ಮಳೆಗೆ ಅಪಾರ ಪ್ರಮಾಣದಲ್ಲಿ ಅಡಿಕೆ ಮರಗಳು ನಾಶವಾಗಿದೆ. ಬುಧವಾರ ಕಲ್ಲಾಜೆಯಲ್ಲಿ 95 ಮಿಮೀ ದಾಖಲೆಯ ಮಳೆಯಾಗಿದೆ. 1994 ರಲ್ಲಿ ಎಪ್ರಿಲ್‌ ತಿಂಗಳಲ್ಲಿ ದಾಖಲೆಯ ಮಳೆಯಾಗಿತ್ತು ಎಂದು ಮಳೆ ದಾಖಲೆ ಸಂಗ್ರಹಗಾರ ಪಿ ಜಿ ಎಸ್‌ ಎನ್‌ ಪ್ರಸಾದ್‌  ಮಾಹಿತಿ ನೀಡಿದ್ದಾರೆ.

Advertisement
Advertisement

ಕಳೆದ ಒಂದು ವಾರದಿಂದ ಸುಳ್ಯ ತಾಲೂಕಿನಲ್ಲಿ ಮಳೆಯ ಅಬ್ಬರ ಇದೆ. ಅದರಲ್ಲೂ ಗಾಳಿ ಮಳೆಗೆ ಅಪಾರ ಪ್ರಮಾಣದ ಕೃಷಿ ಹಾನಿಯಾಗುತ್ತಿದೆ. ಬುಧವಾರ ದ ಕ ಜಿಲ್ಲೆಯ ವಿವಿದೆಡೆ ಗಾಳಿಯ ಅಬ್ಬರವೂ ಕಂಡುಬಂದಿತ್ತು. ಸುಳ್ಯ ಸೇರಿದಂತೆ ಪುತ್ತೂರು, ಬೆಳ್ತಂಗಡಿಯ ವಿವಿಧ ಕೃಷಿಕರ ತೋಟದಲ್ಲಿ ಅಡಿಕೆ ಮರಗಳು ಧರೆಗೆ ಉರುಳಿದೆ. ಸುಳ್ಯ ತಾಲೂಕಿನ ಕಲ್ಮಡ್ಕದ ಕೃಷಿಕ ಸುರೇಶ್ಚಂದ್ರ ಅವರ ತೋಟದಲ್ಲಿ ಕಳೆದ ಮೂರು ದಿನಗಳ ಗಾಳಿಗೆ ಒಟ್ಟು ಸುಮಾರು 200 ಕ್ಕೂ ಅಧಿಕ ಅಡಿಕೆ ಮರ ಧರೆಗೆ ಉರುಳಿದೆ. ಆಸುಪಾಸಿನ ಕೃಷಿಕರ ತೋಟದಲ್ಲೂ ಕೃಷಿ ನಾಶವಾಗಿದೆ. ಪಂಜ, ಕರಿಕಳದಲ್ಲೂ ಕೃಷಿ ನಾಶವಾಗಿದೆ. ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ಗಾಳಿಯ ಅಬ್ಬರದಿಂದ ಕೃಷಿಕರು ನಷ್ಟ ಅನುಭವಿಸಿದರು.

Advertisement

ಎಲ್ಲೆಲ್ಲಿ ಎಷ್ಟು ಮಳೆಯಾಯಿತು...?
Advertisement

ಕಲ್ಲಾಜೆ 95 ಮಿಮೀ, ಕಮಿಲ 51 ಮಿಮೀ, ಮಡಪ್ಪಾಡಿ 47 ಮಿಮೀ,ಬಂಗಾರಡ್ಕ ಆರ್ಯಾಪು 47 ಮಿಮೀ, ಸುಬ್ರಹ್ಮಣ್ಯ 46 ಮಿಮೀ, ಬಳ್ಪ 43 ಮಿಮೀ, ದೊಡ್ಡತೋಟ 44 ಮಿಮೀ, ಕೇನ್ಯ 41ಮಿಮೀ, ನೆಲ್ಯಾಡಿ 39, ಕಂದ್ರಪ್ಪಾಡಿ 36 ಮಿಮೀ,  ಕೈಲಾರು 36 ಮಿಮೀ,  ಮಂಜಿ 35 ಮಿಮೀ, ಬೆಳ್ತಂಗಡಿ 35 ಮಿಮೀ, ಮುಂಡೂರು 35 ಮಿಮೀ, ನೆಕ್ರಕಜೆ 35 ಮಿಮೀ, ಬಲ್ನಾಡು 34 ಮಿಮೀ,  ಮೆಟ್ಟಿನಡ್ಕ 34 ಮಿಮೀ, ಕೊಳ್ತಿಗೆ 34 ಮಿಮೀ,  ಕೆಲಿಂಜ 30 ಮಿಮೀ, ಕೈರಂಗಳ 25 ಮಿಮೀ, ಉರುವಾಲು 28 ಮಿಮೀ, ಮರ್ಧಾಳ 26 ಮಿಮೀ, ಉಪ್ಪಿನಂಗಡಿ 26 ಮಿಮೀ, ಹರಿಹರ 25 ಮಿಮೀ,  ಕೋಡಿಂಬಾಳ 24 ಮಿಮೀ, ಪಾಂಡೇಶ್ವರ 22 ಮಿಮೀ, ಕೊಲ್ಲಮೊಗ್ರ 22 ಮಿಮೀ, ಚೊಕ್ಕಾಡಿ 20 ಮಿಮೀ, ಮುರುಳ್ಯ 19 ಮಿಮೀ,  ಎಣ್ಮೂರು 18 ಮಿಮೀ , ಬೆಳ್ಳಾರೆ ಕಾವಿನಮೂಲೆ 18 ಮಿಮೀ, ಕಡಬ 18 ಮಿಮೀ, ಕರಿಕಳ 18 ಮಿಮೀ, , ಅಯ್ಯನಕಟ್ಟೆ 16 ಮಿಮೀ, ಬಾಳಿಲ 16 ಮಿಮೀ, ಸುಳ್ಯ 16 ಮಿಮೀ ಮಳೆಯಾಗಿದೆ. ಕಾಸರಗೋಡಿನಲ್ಲಿ ದಾಖಲೆಯ ಮಳೆಯಾಗಿದೆ. ರಾತ್ರಿ ಇಡೀ ವರ್ಷಧಾರೆಯಾಗಿದ್ದು ಕಳೆದ 24 ಗಂಟೆಯಲ್ಲಿ 138 ಮಿಮೀ ಮಳೆಯಾಗಿದೆ.

Advertisement

 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಛಾತಿ ಇಲ್ಲದ ನಾಗರಿಕರನ್ನು ರೂಪಿಸುತ್ತಿರುವ ಶಿಕ್ಷಣ

ನಮ್ಮ ಮುಂದಿನ ಮಕ್ಕಳನ್ನು ಸ್ವಾವಲಂಬಿಗಳಾಗಿ ಮಾಡಬೇಕೇ ಹೊರತು ಪರಾವಲಂಬಿಗಳಾಗಿ ಮಾಡಬಾರದು. ಜನರು ಆತ್ಮಾಭಿಮಾನದಿಂದ…

19 hours ago

ಮೇ.11 ವಳಲಂಬೆಯಲ್ಲಿ ಯಕ್ಷಗಾನ ಬಯಲಾಟ | ಕಲಾವಿದ ಉಬರಡ್ಕ ಉಮೇಶ್‌ ಶೆಟ್ಟಿಯವರಿಗೆ ಗೌರವಾರ್ಪಣೆ |

ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ-ಗುತ್ತಿಗಾರು ಇವರ ವತಿಯಿಂದ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್‌…

19 hours ago

ಮಲೆನಾಡು ಕಳೆದು ಹೋಗಿದೆ….! | ಯಾರಾದರೂ “ಮಲೆನಾಡಿಗೆ” ಈ ಮೊದಲಿನ “ಮಳೆಗಾಲ” ತಂದು ಕೊಡುವಿರಾ…. !

ಮಲೆನಾಡಿನ ಸೊಗಬು ಕಣ್ಮರೆಯಾಗುತ್ತಿರುವುದು ಏಕೆ? ಈ ಬಗ್ಗೆ ಬರೆದಿದ್ದಾರೆ ಪ್ರಬಂಧ ಅಂಬುತೀರ್ಥ.

23 hours ago

Karnataka Weather | 07-05-2024 | ಮಳೆಯ ಸೂಚನೆ ಬಂದೇ ಬಿಟ್ಟಿದೆ |ಹಲವು ಕಡೆ ಗುಡುಗು-ಸಿಡಿಲು ಇರಬಹುದು, ಇರಲಿ ಎಚ್ಚರಿಕೆ |

ಮೇ 9ರಿಂದ ಉತ್ತರ ಒಳನಾಡು ಭಾಗಗಳಲ್ಲಿಯೂ ಮಳೆಯಾಗುವ ಲಕ್ಷಣಗಳಿವೆ.ಕರಾವಳಿ ಭಾಗಗಳಲ್ಲಿ ಈಗಾಗಲೇ ಮಳೆ…

23 hours ago

ಆಹಾರ ಬದಲಾವಣೆಯಿಂದ ವಾತಾವರಣದ ತಾಪಮಾನ ಏರಿಕೆಯ ಸಮಸ್ಯೆಗೂ ಪರಿಹಾರ…! | ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಖಾದರ್ ಪ್ರತಿಪಾದನೆ |

ಆಹಾರ ಬದಲಾವಣೆಯ ಕಾರಣದಿಂದ ವಾತಾವರಣದ ತಾಪಮಾನ ನಿಯಂತ್ರಣ ಸಾಧ್ಯ..ಹೀಗೆಂದು ಹೇಳಿದಾಗ, ಎಲ್ಲರೂ ಅಚ್ಚರಿ…

1 day ago

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |

ಮೇ 7 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ…

2 days ago