The Rural Mirror ವಾರದ ವಿಶೇಷ

ಹವಾಮಾನ ಕುತೂಹಲ | ಕಲ್ಲಾಜೆಯಲ್ಲಿ ಇದುವರೆಗೆ 1108 ಮಿಮೀ ಮಳೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
News Summary
| ಕೃಷಿ ಬೆಳವಣಿಗೆಗೆ ಮಳೆ ಅಗತ್ಯ. ಹಾಗಿದ್ದರೆ ನಮ್ಮಲ್ಲಿ ಎಷ್ಟು ಮಳೆಯಾಗುತ್ತದೆ ? ಈ ಲೆಕ್ಕವನ್ನು ಈಗ ಕೃಷಿಕರು ಹಾಕುತ್ತಿದ್ದಾರೆ. ಅಂತಹದೊಂದು ಲೆಕ್ಕದ ಪ್ರಕಾರ ಸುಳ್ಯ ಕಲ್ಲಾಜೆಯಲ್ಲಿ ಇದುವರೆಗೆ ಉತ್ತಮ ಮಳೆ ಬಿದ್ದಿದೆ. |

ಮಳೆಗಾಲ ಆರಂಭವಾಗುತ್ತಿದೆ.ಜೂನ್.‌1 ರ ಬಳಿಕ ಮಳೆಗಾಲವೇ. ಈ ಬಾರಿ ಅದೇ ಸಮಯಕ್ಕೆ ಮಳೆ ಆರಂಭವಾಗುತ್ತಿದೆ. ಆದರೆ ಈಚೆಗೆ ಮುಂಗಾರು ಪೂರ್ವ ಮಳೆಯೂ ಉತ್ತಮವಾಗುತ್ತಿದೆ. ಕಾಡು ಹೊಂದಿರುವ ಪ್ರದೇಶಗಳಲ್ಲಿ ಈ ಬಾರಿಯೂ ಇದುವರೆಗೆ ಉತ್ತಮ ಮಳೆಯಾಗಿದೆ. ಸುಳ್ಯ ತಾಲೂಕಿನ ಕಲ್ಲಾಜೆಯಲ್ಲಿ  2022 ರ ಮೇ ವರೆಗೆ 1108 ಮಿಮೀ ಮಳೆಯಾಗಿದೆ. ಮೇ ತಿಂಗಳಲ್ಲಿಯೇ ಈ ಬಾರಿ 708 ಮಿಮೀ ಮಳೆಯಾಗಿದೆ.

Advertisement

ಮಳೆ ದಾಖಲು ಮಾಡುವ ಕೃಷಿಕರು ದಕ್ಷಿಣ ಕನ್ನಡ ಹಾಗೂ ವಿವಿಧ ಜಿಲ್ಲೆಗಳಲ್ಲಿ ಇದ್ದಾರೆ. ಹವಾಮಾನ ವೀಕ್ಷಣೆ ಹಾಗೂ ಮಳೆ ಬೀಳುವ ಲೆಕ್ಕಾಚಾರ, ಬೀಳುವ ಮಳೆಯ ಲೆಕ್ಕ ಇದರ ಆಧಾರದಲ್ಲಿ  ಕೃಷಿ ಕಾರ್ಯವನ್ನು ನಿರ್ಧರಿಸುವ ಯುವ ಕೃಷಿಕರೂ ಇದ್ದಾರೆ. ಕೃಷಿಕ ಪಿ ಜಿ ಎಸ್‌ ಎನ್‌ ಪ್ರಸಾದ್‌ ಅವರ ನೆರವಿನೊಂದಿಗೆ ಅನೇಕರು ಮಳೆ ಲೆಕ್ಕ ಆರಂಭಿಸಿದ್ದಾರೆ.  ಕಳೆದ ಕೆಲವು ಸಮಯಗಳ ವೀಕ್ಷಣೆಯ ಪ್ರಕಾರ ಕಾಡಂಚಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಕೊಲ್ಲಮೊಗ್ರ, ಸುಬ್ರಹ್ಮಣ್ಯ, ಕಲ್ಲಾಜೆ, ಬಳ್ಪ, ಕಲ್ಮಡ್ಕ, ಎಣ್ಮೂರು, ಕಡಬ ಮೊದಲಾದ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತದೆ.ಕಳೆದ ವರ್ಷಕ್ಕಿಂತ ಈ ವರ್ಷ ಮಳೆ ಬಿದ್ದ ಪ್ರಮಾಣ ಹೆಚ್ಚಾಗಿದೆ.

ಈ ವರ್ಷ ಸುಳ್ಯ ತಾಲೂಕಿನ ಕಲ್ಲಾಜೆಯಲ್ಲಿ  ಮೇ ತಿಂಗಳ ಅಂತ್ಯದವರೆಗೆ 1108 ಮಿಮೀ ಮಳೆಯಾಗಿದೆ. ಮೆಟ್ಟಿನಡ್ಕದಲ್ಲಿ 944 ಮಿಮೀ, ಎಣ್ಮೂರು 909 ಮಿಮೀ, ಬಳ್ಪ ಕೋಡಿಗದ್ದೆಯಲ್ಲಿ 904 ಮಿಮೀ, ಬಾಳಿಲದಲ್ಲಿ 826 ಮಿಮೀ, ಕಮಿಲ ಪುಚ್ಚಪ್ಪಾಡಿಯಲ್ಲಿ 807 ಮಿಮೀ , ಕಡಬ ಕೋಡಿಂಬಾಳದಲ್ಲಿ 698 ಮಿಮೀ,   ಬೆಳ್ಳಾರೆ ಕಾವಿನಮೂಲೆಯಲ್ಲಿ 630 ಮಿಮೀ, ಕೋಡಪದವಿನಲ್ಲಿ 361 ಮಿಮೀ.  ,  ಮಳೆಯಾಗಿದೆ.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಪ್ಪ ಅಮ್ಮ ಇಲ್ಲದ ಪರೀಕ್ಷಾ ನಿಯಮಗಳು

ಉದ್ಯೋಗದ ಪರೀಕ್ಷೆಗಳಿಗೂ ಧಾರ್ಮಿಕ ಸಂಕೇತಗಳಿಗೂ ಯಾಕೆ ಹೊಂದಿ ಬರುವುದಿಲ್ಲ? ಇದೊಂದು ಮಿಲಿಯನ್ ಡಾಲರ್…

35 minutes ago

ಮೇ 2- 6 | ಮಂಗಳೂರಿನಲ್ಲಿ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ

ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ ಮೇ ತಿಂಗಳ 2 ರಿಂದ…

4 hours ago

ಜೋಗ ಜಲಪಾತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಮುಕ್ತಾಯ | ಪ್ರವಾಸಿಗರಿಗೆ ಪ್ರವೇಶಕ್ಕೆ ಅವಕಾಶ | ಜೋಗ ಇನ್ನು ಮತ್ತಷ್ಟು ಆಕರ್ಷಕ |

ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ  ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರ  ವಿವಿಧ…

4 hours ago

ಹವಾಮಾನ ವರದಿ | 30-04-2025 | ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ |

ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…

22 hours ago

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…

1 day ago

ಗುಡುಗು ಸಿಡಿಲಿನ ಮುನ್ಸೂಚನೆ ಬಗ್ಗೆ ಆಪ್‌ನಲ್ಲಿ ಮಾಹಿತಿ

ಸಾರ್ವಜನಿಕರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವರುಣ ಮಿತ್ರ ಸಹಾಯವಾಣಿ 9243345433…

1 day ago