ಮಳೆಗಾಲ ಆರಂಭವಾಗುತ್ತಿದೆ.ಜೂನ್.1 ರ ಬಳಿಕ ಮಳೆಗಾಲವೇ. ಈ ಬಾರಿ ಅದೇ ಸಮಯಕ್ಕೆ ಮಳೆ ಆರಂಭವಾಗುತ್ತಿದೆ. ಆದರೆ ಈಚೆಗೆ ಮುಂಗಾರು ಪೂರ್ವ ಮಳೆಯೂ ಉತ್ತಮವಾಗುತ್ತಿದೆ. ಕಾಡು ಹೊಂದಿರುವ ಪ್ರದೇಶಗಳಲ್ಲಿ ಈ ಬಾರಿಯೂ ಇದುವರೆಗೆ ಉತ್ತಮ ಮಳೆಯಾಗಿದೆ. ಸುಳ್ಯ ತಾಲೂಕಿನ ಕಲ್ಲಾಜೆಯಲ್ಲಿ 2022 ರ ಮೇ ವರೆಗೆ 1108 ಮಿಮೀ ಮಳೆಯಾಗಿದೆ. ಮೇ ತಿಂಗಳಲ್ಲಿಯೇ ಈ ಬಾರಿ 708 ಮಿಮೀ ಮಳೆಯಾಗಿದೆ.
ಮಳೆ ದಾಖಲು ಮಾಡುವ ಕೃಷಿಕರು ದಕ್ಷಿಣ ಕನ್ನಡ ಹಾಗೂ ವಿವಿಧ ಜಿಲ್ಲೆಗಳಲ್ಲಿ ಇದ್ದಾರೆ. ಹವಾಮಾನ ವೀಕ್ಷಣೆ ಹಾಗೂ ಮಳೆ ಬೀಳುವ ಲೆಕ್ಕಾಚಾರ, ಬೀಳುವ ಮಳೆಯ ಲೆಕ್ಕ ಇದರ ಆಧಾರದಲ್ಲಿ ಕೃಷಿ ಕಾರ್ಯವನ್ನು ನಿರ್ಧರಿಸುವ ಯುವ ಕೃಷಿಕರೂ ಇದ್ದಾರೆ. ಕೃಷಿಕ ಪಿ ಜಿ ಎಸ್ ಎನ್ ಪ್ರಸಾದ್ ಅವರ ನೆರವಿನೊಂದಿಗೆ ಅನೇಕರು ಮಳೆ ಲೆಕ್ಕ ಆರಂಭಿಸಿದ್ದಾರೆ. ಕಳೆದ ಕೆಲವು ಸಮಯಗಳ ವೀಕ್ಷಣೆಯ ಪ್ರಕಾರ ಕಾಡಂಚಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಕೊಲ್ಲಮೊಗ್ರ, ಸುಬ್ರಹ್ಮಣ್ಯ, ಕಲ್ಲಾಜೆ, ಬಳ್ಪ, ಕಲ್ಮಡ್ಕ, ಎಣ್ಮೂರು, ಕಡಬ ಮೊದಲಾದ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತದೆ.ಕಳೆದ ವರ್ಷಕ್ಕಿಂತ ಈ ವರ್ಷ ಮಳೆ ಬಿದ್ದ ಪ್ರಮಾಣ ಹೆಚ್ಚಾಗಿದೆ.
ಈ ವರ್ಷ ಸುಳ್ಯ ತಾಲೂಕಿನ ಕಲ್ಲಾಜೆಯಲ್ಲಿ ಮೇ ತಿಂಗಳ ಅಂತ್ಯದವರೆಗೆ 1108 ಮಿಮೀ ಮಳೆಯಾಗಿದೆ. ಮೆಟ್ಟಿನಡ್ಕದಲ್ಲಿ 944 ಮಿಮೀ, ಎಣ್ಮೂರು 909 ಮಿಮೀ, ಬಳ್ಪ ಕೋಡಿಗದ್ದೆಯಲ್ಲಿ 904 ಮಿಮೀ, ಬಾಳಿಲದಲ್ಲಿ 826 ಮಿಮೀ, ಕಮಿಲ ಪುಚ್ಚಪ್ಪಾಡಿಯಲ್ಲಿ 807 ಮಿಮೀ , ಕಡಬ ಕೋಡಿಂಬಾಳದಲ್ಲಿ 698 ಮಿಮೀ, ಬೆಳ್ಳಾರೆ ಕಾವಿನಮೂಲೆಯಲ್ಲಿ 630 ಮಿಮೀ, ಕೋಡಪದವಿನಲ್ಲಿ 361 ಮಿಮೀ. , ಮಳೆಯಾಗಿದೆ.
ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…
ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…
ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…
ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…
ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…
ದಕ್ಷಿಣ ಕನ್ನಡದ ಮಲೆನಾಡು ತಪ್ಪಲಿನ ಸುಬ್ರಹ್ಮಣ್ಯ, ಸುಳ್ಯ, ಕಡಬ ಸೇರಿದಂತೆ ಹಲವು ಪ್ರದೇಶಗಳಲ್ಲಿ…