ಮತ್ತೆ ಕೈಕೊಟ್ಟ ಹವಾಮಾನ | ಹಲವು ಕಡೆ ಮಳೆ-ತುಂತುರು ಮಳೆ | ಧನುರ್ಮಾಸದಲ್ಲಿ ವರುಣಾಗಮನ..! |

January 3, 2024
9:07 AM

ಮಳೆಗಾಲದಲ್ಲಿ ನಿರೀಕ್ಷೆಯಷ್ಟು ಮಳೆ ಬರದೇ ಹೋಯಿತು. ಬರದ ಛಾಯೆ ಆವರಿಸಿತು. ಚಳಿಗಾಲ ಬಂದಾಗಲೂ ಚಳಿ ದೂರವಾಯಿತು. ಈ ಬಾರಿ 18 ಡಿಗ್ರಿಗಿಂತ ಕಡಿಮೆ ಚಳಿ ಇಲ್ಲದೇ ಹೋಯಿತು. ಈಗ ಮತ್ತೆ ಮಳೆ ಶುರುವಾಗಿದೆ. ಕೆಲವು ಕಡೆ ಉತ್ತಮ ಮಳೆ, ಇನ್ನೂ ಕೆಲವು ಕಡೆ ತುಂತುರು ಮಳೆ ಕರಾವಳಿ ಪ್ರದೇಶದಲ್ಲಿ ಕಾಣಿಸಿದೆ. ಒಟ್ಟಾರೆ ಈ ಬಾರಿ ಹವಾಮಾನ ಕೈಕೊಟ್ಟಿದೆ. ಕೃಷಿ, ಗ್ರಾಮೀಣ ಭಾಗ ಸಂಕಷ್ಟಕ್ಕೆ ಸಿಲುಕುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಕಡಬ ,ಪುತ್ತೂರು, ಸುಳ್ಯ, ಬಂಟ್ವಾಳ ಭಾಗದಲ್ಲಿ ಬುಧವಾರ ಮುಂಜಾನೆ ಸುಮಾರು ಒಂದು ಗಂಟೆಗಳ ಕಾಲ ಮಳೆ ಸುರಿದಿದೆ. ಮಂಗಳವಾರ ಸಂಜೆಯಿಂದಲೇ ತುಂತುರು ಮಳೆಯ ಸಿಂಚನವಾಗುತ್ತಿದ್ದು ಮೋಡ ಕವಿದ ವಾತಾವರಣವಿತ್ತು.ಕಾಸರಗೋಡು ಕಡೆ 2 ಮಿಮೀ ವರೆಗೆ ಮಳೆಯಾದರೆ ಬಂಟ್ವಾಳ ಪ್ರದೇಶದಲ್ಲಿ 5 ಮಿಮೀ ಮಳೆಯಾಗಿದೆ.

ಧನುರ್ಮಾಸದಲ್ಲಿ ವಿಪರೀತ ಚಳಿ ಇರುವುದು ಪದ್ಧತಿ. ಆದರೆ ಈಗ ಅಕಾಲಿಕ ಮಳೆ ಕೃಷಿಕರಿಗೂ ಸಂಕಷ್ಟ.  ಅಡಿಕೆ ಬೆಳೆ ಸಹಿತ ಎಲ್ಲಾ ಕೃಷಿಕರಿಗೂ ಸಂಕಷ್ಟ. ಅಡಿಕೆ ಒಣಗಿಸಲು ಹರಸಾಹಸ, ರಬ್ಬರ್‌ ಇಳುವರಿ ಕುಂಠಿತವಾಗಿದೆ. ಮುಂದಿನ ಅಡಿಕೆ ಫಸಲಿಗೂ ಇದೇ ಸಂಕಷ್ಟದ ಮಳೆ. ಚಳಿಯ ಕೊರತೆ, ಮಳೆಯ ಆಗಮನ ಇದೆರಡೂ ಈಗ ಸಮಸ್ಯೆ, ಕೃಷಿಗೂ ಸಂಕಷ್ಟ.

ಉತ್ತರಾಯಣ ಆರಂಭವಾಗಿರುವ ಕಾರಣ ಹಲವು ಮನೆಗಳಲ್ಲಿ ಶುಭಕಾರ್ಯಗಳು, ಭೂತಾರಾದನೆಯಂತಹ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಅಕಾಲಿಕ ಮಳೆಗೆ ಕಾರ್ಯಕ್ರಮ ನಡೆಯುವ ಮನೆಗಳಲ್ಲಿ ಚಿಂತೆ ಉಂಟಾಗಿದೆ.

ಗ್ರಾಮೀಣ ಭಾಗಗಳು ಸೇರಿದಂತೆ ಈಗ ಅಭಿವೃದ್ಧಿ ಕಾರ್ಯಗಳು ಆರಂಭವಾಗುವ ಸಮಯ. ಈಗ ಅಕಾಲಿಕ ಮಳೆಯು ಅಭಿವೃದ್ಧಿ ಕಾರ್ಯಗಳೂ ವಿಳಂಬಕ್ಕೂ ಕಾರಣವಾಗುತ್ತಿದೆ.

RM ನ್ಯೂಸ್‌, ಕೊಕ್ಕಡ -ನೆಲ್ಯಾಡಿ

Belthangady, Kadaba ,Puttur, Sullia, Bantwal area of ​​Dakshina Kannada district received rain for about an hour on Wednesday morning.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆ | ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಆರೋಗ್ಯಾಧಿಕಾರಿ ಎಚ್ಚರಿಕೆ
March 27, 2026
6:50 AM
by: ದ ರೂರಲ್ ಮಿರರ್.ಕಾಂ
ವೈಜ್ಞಾನಿಕ ಬೆಂಬಲ ಬೆಲೆ ಮತ್ತು ವರ್ಷಪೂರ್ತಿ ಖರೀದಿ ಕೇಂದ್ರಕ್ಕೆ ವರ್ಷಪೂರ್ತಿ ಖರೀದಿ ಕೇಂದ್ರಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ
March 27, 2026
6:45 AM
by: ದ ರೂರಲ್ ಮಿರರ್.ಕಾಂ
ಕೃಷಿಕರ ಜೀವನಾಡಿ ‘ಕ್ಯಾಂಪ್ಕೊ’ ವಿಟ್ಲ ಶಾಖೆಗೆ ನೂತನ ಕಟ್ಟಡ | ಮಾರ್ಚ್ 27ರಂದು ಶಂಕುಸ್ಥಾಪನೆ
March 27, 2026
6:34 AM
by: ದ ರೂರಲ್ ಮಿರರ್.ಕಾಂ
ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!
March 26, 2026
7:04 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror