Advertisement
ಅನುಕ್ರಮ

ರಾಮ ನವಮಿ | ರಾಮ ಎಂದರೆ ಸರ್ವಸ್ವ | ರಾಮ ಎಂದರೆ ಆದರ್ಶ |

Share

ನಾವು ಮನಸಾ ಸ್ಮರಿಸುವುದು ರಾಮ ಎಂದೇ. ಬಾಲ್ಯದಲ್ಲಿ ‌ ಕೇಳಿದ ರಾಮ ನಾಮ ಮರೆಯುವುದುಂಟೇ. ದೀಪವಿಲ್ಲದೆ ಕತ್ತಲೆಯಲ್ಲಿ ನೆರಳಿನಾಟಕ್ಕೆ ಹೆದರಿದಾಗ ಅಜ್ಜಿ ಹೇಳಿಕೊಟ್ಟ ಧೈರ್ಯ ಮಂತ್ರ ರಾಮ. ಶಾಲೆಗೆ ಹೋಗುವಾಗ ಗುಡುಗು, ಸಿಡಿಲು, ಗಾಳಿ ಮಳೆ ಬಂದಾಗ ಜಪಿಸಲು ಅಮ್ಮ ಹೇಳಿಕೊಟ್ಟ ಶಕ್ತಿ ಮಂತ್ರ ರಾಮ ನಾಮ. ದೂರದೂರಿನಲಿ ವಿಧ್ಯಾಭ್ಯಾಸಕ್ಕೆ ತೆರಳುವಾಗ ಅಪ್ಪ ಹೇಳಿಕೊಟ್ಟ ಸೂತ್ರವೂ ರಾಮನಾಮವೇ.

ಬದುಕಿನ ಒಂದೊಂದು ಮೆಟ್ಟಿಲು ಹತ್ತುವಾಗಲೂ ಜೊತೆಗಿದ್ದು ಶಕ್ತಿ ನೀಡುವ ಒಂದು ಟ್ಯಾಬೆಲ್ಟ್ ಇದೆಯೆಂದರೆ ಅದು ರಾಮ ನಾಮವೇ. ನಮಗೆ ಅನಿರೀಕ್ಷಿತ ಆಘಾತವಾದಾಗ ಹೇಗೆ ಅಮ್ಮನನ್ನು ನೆನೆಯುತ್ತೇವೆಯೋ ಹಾಗೆ ರಾಮನಾಮವೂ ಜೊತೆಯಾಗುವುದು ಸಹಜವೆಂದರೆ ತಪ್ಪಲ್ಲ. ಅದು ನಮಲ್ಲಿ ರಕ್ತಗತವಾಗಿರುವಂತಹುದು.

ಮಕ್ಕಳು ಬಿದ್ದಾಗ ಸಾಮಾನ್ಯವಾಗಿ ಅಯ್ಯೋ ಎಂಬ ಶಬ್ದ ಬಂದುಬಿಡುತ್ತದೆ. ಹಾಗನ್ನಬಾರದು ರಾಮ ರಾಮ ಅನ್ನು ನೋವೇ ತಿಳಿದು., ಅಪಾಯವೂ ಆಗದು ಎಂಬುದು ಹಿರಿಯರ ಮಾತು. ಎಷ್ಟೋ ಬಾರಿ ನಿಜವೆನಿಸುತ್ತವೆ.

ರಾಮನೆಂದರೆ ನಮಗೆ ಒಂದು ಮೂರ್ತಿಯಲ್ಲ, ಪೂಜಿಸುವ ದೇವನಾಗಿ ಮಾತ್ರ ಉಳಿದಿಲ್ಲ. ರಾಮನೆಂದರೆ ನಮಗೆ ಸರ್ವಸ್ವ. ರಾಮ ಯಾವಾಗಲೂ ನಮ್ಮ ನೈತಿಕತೆಯ ಪ್ರತೀಕ. ರಾಮನವಮಿಯೆಂದರೆ ರಾಮ ಹುಟ್ಟಿದ ದಿನ. ಇದು ಯಾವಾಗಲೂ ಯುಗಾದಿ ಕಳೆದು ಎಂಟನೇಯ ದಿನ ಬರುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದಂದು ಆಚರಿಸಲಾಗುತ್ತದೆ.

ರಾಮನ ಹುಟ್ಟಿದ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ.‌ ರಾಮನ ಬಾಲಲೀಲೆಯಾಗಿರಲಿ, ವಿದ್ಯಾಭ್ಯಾಸದ‌, ಸಂಧರ್ಭವಾಗಿರಲಿ ಹೋರಾಟದ ಬದುಕಾಗಿರಲಿ ಎಲ್ಲವೂ ಜನಸಾಮಾನ್ಯರು ಅನುಭವಿಸುವಂತದ್ದೇ ಆಗಿತ್ತು . ರಾಮ ಮನಸಿಗೆ ಹತ್ತಿರವಾಗುವುದು ಇದೇ ವಿಷಯಕ್ಕೆ. ರಾಮಾಯಣವನ್ನು ಎಲ್ಲಾ ವಯಸ್ಸಿನವರೂ ಓದಬಹುದು. ಹಿರಿಯರು ಯಾವತ್ತೂ ಹೇಳುತ್ತಾರೆ, ರಾಮಾಯಣ ಓದಿ ಕೆಟ್ಟವರಿಲ್ಲ, ಅಲ್ಲಿನ ಪ್ರತಿಯೊಂದು ವಿಷಯಗಳು ಸಾರ್ವಕಾಲಿಕ ಸತ್ಯ.

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲು ಪೊಲೀಸ್…

9 hours ago

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆ | ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಆರೋಗ್ಯಾಧಿಕಾರಿ ಎಚ್ಚರಿಕೆ

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…

1 day ago

ಕೃಷಿಕರ ಜೀವನಾಡಿ ‘ಕ್ಯಾಂಪ್ಕೊ’ ವಿಟ್ಲ ಶಾಖೆಗೆ ನೂತನ ಕಟ್ಟಡ | ಮಾರ್ಚ್ 27ರಂದು ಶಂಕುಸ್ಥಾಪನೆ

ವಿಟ್ಲದಲ್ಲಿ ₹12 ಕೋಟಿ ವೆಚ್ಚದ ಕ್ಯಾಂಪ್ಕೊ ನೂತನ ಕಟ್ಟಡಕ್ಕೆ ಮಾರ್ಚ್ 27ರಂದು ಶಂಕುಸ್ಥಾಪನೆ…

1 day ago

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

2 days ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

3 days ago