ನಾವು ಮನಸಾ ಸ್ಮರಿಸುವುದು ರಾಮ ಎಂದೇ. ಬಾಲ್ಯದಲ್ಲಿ ಕೇಳಿದ ರಾಮ ನಾಮ ಮರೆಯುವುದುಂಟೇ. ದೀಪವಿಲ್ಲದೆ ಕತ್ತಲೆಯಲ್ಲಿ ನೆರಳಿನಾಟಕ್ಕೆ ಹೆದರಿದಾಗ ಅಜ್ಜಿ ಹೇಳಿಕೊಟ್ಟ ಧೈರ್ಯ ಮಂತ್ರ ರಾಮ. ಶಾಲೆಗೆ ಹೋಗುವಾಗ ಗುಡುಗು, ಸಿಡಿಲು, ಗಾಳಿ ಮಳೆ ಬಂದಾಗ ಜಪಿಸಲು ಅಮ್ಮ ಹೇಳಿಕೊಟ್ಟ ಶಕ್ತಿ ಮಂತ್ರ ರಾಮ ನಾಮ. ದೂರದೂರಿನಲಿ ವಿಧ್ಯಾಭ್ಯಾಸಕ್ಕೆ ತೆರಳುವಾಗ ಅಪ್ಪ ಹೇಳಿಕೊಟ್ಟ ಸೂತ್ರವೂ ರಾಮನಾಮವೇ.
ಬದುಕಿನ ಒಂದೊಂದು ಮೆಟ್ಟಿಲು ಹತ್ತುವಾಗಲೂ ಜೊತೆಗಿದ್ದು ಶಕ್ತಿ ನೀಡುವ ಒಂದು ಟ್ಯಾಬೆಲ್ಟ್ ಇದೆಯೆಂದರೆ ಅದು ರಾಮ ನಾಮವೇ. ನಮಗೆ ಅನಿರೀಕ್ಷಿತ ಆಘಾತವಾದಾಗ ಹೇಗೆ ಅಮ್ಮನನ್ನು ನೆನೆಯುತ್ತೇವೆಯೋ ಹಾಗೆ ರಾಮನಾಮವೂ ಜೊತೆಯಾಗುವುದು ಸಹಜವೆಂದರೆ ತಪ್ಪಲ್ಲ. ಅದು ನಮಲ್ಲಿ ರಕ್ತಗತವಾಗಿರುವಂತಹುದು.
ಮಕ್ಕಳು ಬಿದ್ದಾಗ ಸಾಮಾನ್ಯವಾಗಿ ಅಯ್ಯೋ ಎಂಬ ಶಬ್ದ ಬಂದುಬಿಡುತ್ತದೆ. ಹಾಗನ್ನಬಾರದು ರಾಮ ರಾಮ ಅನ್ನು ನೋವೇ ತಿಳಿದು., ಅಪಾಯವೂ ಆಗದು ಎಂಬುದು ಹಿರಿಯರ ಮಾತು. ಎಷ್ಟೋ ಬಾರಿ ನಿಜವೆನಿಸುತ್ತವೆ.
ರಾಮನೆಂದರೆ ನಮಗೆ ಒಂದು ಮೂರ್ತಿಯಲ್ಲ, ಪೂಜಿಸುವ ದೇವನಾಗಿ ಮಾತ್ರ ಉಳಿದಿಲ್ಲ. ರಾಮನೆಂದರೆ ನಮಗೆ ಸರ್ವಸ್ವ. ರಾಮ ಯಾವಾಗಲೂ ನಮ್ಮ ನೈತಿಕತೆಯ ಪ್ರತೀಕ. ರಾಮನವಮಿಯೆಂದರೆ ರಾಮ ಹುಟ್ಟಿದ ದಿನ. ಇದು ಯಾವಾಗಲೂ ಯುಗಾದಿ ಕಳೆದು ಎಂಟನೇಯ ದಿನ ಬರುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದಂದು ಆಚರಿಸಲಾಗುತ್ತದೆ.
Advertisement
ರಾಮನ ಹುಟ್ಟಿದ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ರಾಮನ ಬಾಲಲೀಲೆಯಾಗಿರಲಿ, ವಿದ್ಯಾಭ್ಯಾಸದ, ಸಂಧರ್ಭವಾಗಿರಲಿ ಹೋರಾಟದ ಬದುಕಾಗಿರಲಿ ಎಲ್ಲವೂ ಜನಸಾಮಾನ್ಯರು ಅನುಭವಿಸುವಂತದ್ದೇ ಆಗಿತ್ತು . ರಾಮ ಮನಸಿಗೆ ಹತ್ತಿರವಾಗುವುದು ಇದೇ ವಿಷಯಕ್ಕೆ. ರಾಮಾಯಣವನ್ನು ಎಲ್ಲಾ ವಯಸ್ಸಿನವರೂ ಓದಬಹುದು. ಹಿರಿಯರು ಯಾವತ್ತೂ ಹೇಳುತ್ತಾರೆ, ರಾಮಾಯಣ ಓದಿ ಕೆಟ್ಟವರಿಲ್ಲ, ಅಲ್ಲಿನ ಪ್ರತಿಯೊಂದು ವಿಷಯಗಳು ಸಾರ್ವಕಾಲಿಕ ಸತ್ಯ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಮಿಶ್ರ ಬೆಳೆ, ಪರ್ಯಾಯ ಬೆಳೆ, ಬಹು ಬೆಳೆ(Mixed cropping, alternating cropping, multiple…
ವಿವೇಕಾನಂದ ಎಚ್ ಕೆ ಅವರ ಬರಹ
ಆಹಾರ ಹಾಗೂಆಹಾರ ಪದ್ಧತಿಗಳ ಬಗ್ಗೆ ವಿವೇಕ್ ಆಳ್ವ ಅವರು ಬರೆದಿದ್ದಾರೆ.
`ಶುಗರ್ ಫ್ರೀ’(Sugar Free) ಎಂಬ ಹೆಸರಿನಲ್ಲಿ ಕೃತಕ ಸಿಹಿಕಾರಕಗಳ(Artificial sweet) ಟ್ರೆಂಡ್(Trend) ಹೆಚ್ಚುತ್ತಿರುವ…
ಮೇ 20 ರ ನಂತರ ರಾಜ್ಯದಲ್ಲಿ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿದ್ದು, ಕರಾವಳಿ…
ಕೃಷಿ ನೆಲದಲ್ಲಿ ಸಾವಯವ ಇಂಗಾಲದ(Carbon) ಕೊರತೆ ಕಾಡುತ್ತಿದೆ. ಮರಗಿಡಗಳಿಲ್ಲದೇ ಭೂಮಿಗೆ ಶಕ್ತಿ ಬರಲು…