Advertisement
ಅಂಕಣ

ರಾಮ ನವಮಿ | ರಾಮ ಎಂದರೆ ಸರ್ವಸ್ವ | ರಾಮ ಎಂದರೆ ಆದರ್ಶ |

Share

ನಾವು ಮನಸಾ ಸ್ಮರಿಸುವುದು ರಾಮ ಎಂದೇ. ಬಾಲ್ಯದಲ್ಲಿ ‌ ಕೇಳಿದ ರಾಮ ನಾಮ ಮರೆಯುವುದುಂಟೇ. ದೀಪವಿಲ್ಲದೆ ಕತ್ತಲೆಯಲ್ಲಿ ನೆರಳಿನಾಟಕ್ಕೆ ಹೆದರಿದಾಗ ಅಜ್ಜಿ ಹೇಳಿಕೊಟ್ಟ ಧೈರ್ಯ ಮಂತ್ರ ರಾಮ. ಶಾಲೆಗೆ ಹೋಗುವಾಗ ಗುಡುಗು, ಸಿಡಿಲು, ಗಾಳಿ ಮಳೆ ಬಂದಾಗ ಜಪಿಸಲು ಅಮ್ಮ ಹೇಳಿಕೊಟ್ಟ ಶಕ್ತಿ ಮಂತ್ರ ರಾಮ ನಾಮ. ದೂರದೂರಿನಲಿ ವಿಧ್ಯಾಭ್ಯಾಸಕ್ಕೆ ತೆರಳುವಾಗ ಅಪ್ಪ ಹೇಳಿಕೊಟ್ಟ ಸೂತ್ರವೂ ರಾಮನಾಮವೇ.

Advertisement
Advertisement

ಬದುಕಿನ ಒಂದೊಂದು ಮೆಟ್ಟಿಲು ಹತ್ತುವಾಗಲೂ ಜೊತೆಗಿದ್ದು ಶಕ್ತಿ ನೀಡುವ ಒಂದು ಟ್ಯಾಬೆಲ್ಟ್ ಇದೆಯೆಂದರೆ ಅದು ರಾಮ ನಾಮವೇ. ನಮಗೆ ಅನಿರೀಕ್ಷಿತ ಆಘಾತವಾದಾಗ ಹೇಗೆ ಅಮ್ಮನನ್ನು ನೆನೆಯುತ್ತೇವೆಯೋ ಹಾಗೆ ರಾಮನಾಮವೂ ಜೊತೆಯಾಗುವುದು ಸಹಜವೆಂದರೆ ತಪ್ಪಲ್ಲ. ಅದು ನಮಲ್ಲಿ ರಕ್ತಗತವಾಗಿರುವಂತಹುದು.

Advertisement

ಮಕ್ಕಳು ಬಿದ್ದಾಗ ಸಾಮಾನ್ಯವಾಗಿ ಅಯ್ಯೋ ಎಂಬ ಶಬ್ದ ಬಂದುಬಿಡುತ್ತದೆ. ಹಾಗನ್ನಬಾರದು ರಾಮ ರಾಮ ಅನ್ನು ನೋವೇ ತಿಳಿದು., ಅಪಾಯವೂ ಆಗದು ಎಂಬುದು ಹಿರಿಯರ ಮಾತು. ಎಷ್ಟೋ ಬಾರಿ ನಿಜವೆನಿಸುತ್ತವೆ.

ರಾಮನೆಂದರೆ ನಮಗೆ ಒಂದು ಮೂರ್ತಿಯಲ್ಲ, ಪೂಜಿಸುವ ದೇವನಾಗಿ ಮಾತ್ರ ಉಳಿದಿಲ್ಲ. ರಾಮನೆಂದರೆ ನಮಗೆ ಸರ್ವಸ್ವ. ರಾಮ ಯಾವಾಗಲೂ ನಮ್ಮ ನೈತಿಕತೆಯ ಪ್ರತೀಕ. ರಾಮನವಮಿಯೆಂದರೆ ರಾಮ ಹುಟ್ಟಿದ ದಿನ. ಇದು ಯಾವಾಗಲೂ ಯುಗಾದಿ ಕಳೆದು ಎಂಟನೇಯ ದಿನ ಬರುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದಂದು ಆಚರಿಸಲಾಗುತ್ತದೆ.

Advertisement

ರಾಮನ ಹುಟ್ಟಿದ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ.‌ ರಾಮನ ಬಾಲಲೀಲೆಯಾಗಿರಲಿ, ವಿದ್ಯಾಭ್ಯಾಸದ‌, ಸಂಧರ್ಭವಾಗಿರಲಿ ಹೋರಾಟದ ಬದುಕಾಗಿರಲಿ ಎಲ್ಲವೂ ಜನಸಾಮಾನ್ಯರು ಅನುಭವಿಸುವಂತದ್ದೇ ಆಗಿತ್ತು . ರಾಮ ಮನಸಿಗೆ ಹತ್ತಿರವಾಗುವುದು ಇದೇ ವಿಷಯಕ್ಕೆ. ರಾಮಾಯಣವನ್ನು ಎಲ್ಲಾ ವಯಸ್ಸಿನವರೂ ಓದಬಹುದು. ಹಿರಿಯರು ಯಾವತ್ತೂ ಹೇಳುತ್ತಾರೆ, ರಾಮಾಯಣ ಓದಿ ಕೆಟ್ಟವರಿಲ್ಲ, ಅಲ್ಲಿನ ಪ್ರತಿಯೊಂದು ವಿಷಯಗಳು ಸಾರ್ವಕಾಲಿಕ ಸತ್ಯ.

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement

 

 

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಬಹುಬೆಳೆ ಬೆಳೆದು ಉತ್ತಮ ಫಸಲು ಪಡೆದ ರೈತ | ಕೃಷಿಗೆ ರೈತ ಅನುಸರಿಸಿದ ಕ್ರಮಗಳಾವುವು..?

ಮಿಶ್ರ ಬೆಳೆ, ಪರ್ಯಾಯ ಬೆಳೆ, ಬಹು ಬೆಳೆ(Mixed cropping, alternating cropping, multiple…

3 hours ago

ಸ್ಟ್ರೀಟ್ ಫುಡ್ ವರ್ಸಸ್ ಆರೋಗ್ಯ | ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ

ಆಹಾರ ಹಾಗೂಆಹಾರ ಪದ್ಧತಿಗಳ ಬಗ್ಗೆ ವಿವೇಕ್‌ ಆಳ್ವ ಅವರು ಬರೆದಿದ್ದಾರೆ.

3 hours ago

ಸಕ್ಕರೆ ತಿನ್ನುವುದಕ್ಕಿಂತ ಶುಗರ್ ಫ್ರೀ ಸೇವನೆ ಹೆಚ್ಚು ಅಪಾಯಕಾರಿ…! |

`ಶುಗರ್ ಫ್ರೀ’(Sugar Free) ಎಂಬ ಹೆಸರಿನಲ್ಲಿ ಕೃತಕ ಸಿಹಿಕಾರಕಗಳ(Artificial sweet) ಟ್ರೆಂಡ್(Trend) ಹೆಚ್ಚುತ್ತಿರುವ…

4 hours ago

Karnataka Weather | 14-05-2024 | ಹಲವು ಕಡೆ ಗುಡಗು ಸಹಿತ ಮಳೆ ಮುಂದುವರಿಕೆ | ಮೇ.20 ರ ನಂತರ ಮಳೆ ಅಬ್ಬರ ಕಡಿಮೆ |

ಮೇ 20 ರ ನಂತರ ರಾಜ್ಯದಲ್ಲಿ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿದ್ದು, ಕರಾವಳಿ…

4 hours ago

ಮರಗಿಡಗಳಿಲ್ಲದೇ ಭೂಮಿಗೆ ಶಕ್ತಿ ಬರಲು ಸಾಧ್ಯವೇ?

ಕೃಷಿ ನೆಲದಲ್ಲಿ ಸಾವಯವ ಇಂಗಾಲದ(Carbon) ಕೊರತೆ ಕಾಡುತ್ತಿದೆ. ಮರಗಿಡಗಳಿಲ್ಲದೇ ಭೂಮಿಗೆ ಶಕ್ತಿ ಬರಲು…

4 hours ago