ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ತನ್ನ ಆರ್ಥಿಕ ವರ್ಷ 22 ರ 30,307 ಕೋಟಿ ರೂಪಾಯಿ ಲಾಭಾಂಶ ಪ್ರಕಟ ಮಾಡಿದ್ದು ಕಳೆದ 10 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಲಾಭಾಂಶ ಇದಾಗಿದೆ. ಇದು ಹತ್ತು ವರ್ಷಗಳಲ್ಲಿನ ಅತ್ಯಂತ ಕಡಿಮೆ ಲಾಭಾಂಶವಾಗಿದೆ. ಕಳೆದ ವರ್ಷದ 99,122 ಕೋಟಿ ರೂಪಾಯಿಗಳ ಲಾಭಾಂಶ ಪ್ರಕಟವಾಗಿತ್ತು. ಸುಮಾರು 70% ಇಳಿಕೆಯಾಗಿದೆ.
ಈ ವರ್ಷ ಹೆಚ್ಚುವರಿ ಕಡಿಮೆಯಾಗಲು ಹಲವು ಅಂಶಗಳು ಕಾರಣವಾಗಿವೆ. ಆರ್ಬಿಐಗೆ ಪ್ರಮುಖ ವೆಚ್ಚವೆಂದರೆ ಲಿಕ್ವಿಡಿಟಿ ಹೊಂದಾಣಿಕೆ ಸೌಲಭ್ಯದ ಅಡಿಯಲ್ಲಿ ಬ್ಯಾಂಕ್ಗಳು ನಿಲುಗಡೆ ಮಾಡಿದ ಹಣಕ್ಕೆ ಪಾವತಿಸುವ ಬಡ್ಡಿ, ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆ ಇತ್ಯಾದಿಗಳು ಕಾರಣವಾಗಿದೆ ಎಂದು ತಿಳಿಸಿದೆ. ಬಡ್ಡಿದರಗಳ ಏರಿಕೆಯಿಂದಾಗಿ ಸಾಲ ಭದ್ರತೆಗಳ ಮೌಲ್ಯವು ಕುಸಿದಿರುವುದರಿಂದ ಆರ್ಬಿಐಗೆ ಹಲವು ಸಂಕಷ್ಟವಾಗಿತ್ತು. ಮಾರುಕಟ್ಟೆಯಲ್ಲಿನ ಅಸ್ಥಿರತೆ ತಡೆಯಲು ಇದು 40 ಶತಕೋಟಿಗಿಂತ ಹೆಚ್ಚಿನ ಮೀಸಲು ಹಣವನ್ನು ಖರ್ಚು ಮಾಡಬೇಕಾಗಿತ್ತು ಹಾಗೂ ಮೀಸಲು ಹಣವನ್ನು ಮರುಪೂರಣಗೊಳಿಸಲು ಹೆಚ್ಚಿನ ಹಣವನ್ನು ಮೀಸಲಿಡಬೇಕಾಗುತ್ತದೆ. ಇದೆಲ್ಲವೂ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಿದೆ.
ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…
ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…
ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…
ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…
ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…