ಮುಂಬರುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಸಂಡೂರಿನ ಲಂಬಾಣಿ ಮಹಿಳೆಯರ ಕಲೆ ಮತ್ತು ಕಸೂತಿ ಕಲಾಕೃತಿಗಳನ್ನು ಹೊಸದಿಲ್ಲಿಯಲ್ಲಿ ಪ್ರದರ್ಶಿಸಲಾಗುವುದು. ಬಳ್ಳಾರಿ ಜಿಲ್ಲೆಯ ಮಲೆನಾಡಿನ ಕುಶಲಕರ್ಮಿಗಳು ಈ ಘೋಷಣೆಯಿಂದ ಸಂತಸಗೊಂಡಿದ್ದಾರೆ.
ಬಟ್ಟೆಗಳು, ಸೀರೆ ,ಶಾಲುಗಳು ಮೇಲೆ ಲಂಬಾಣಿ ಮಹಿಳೆಯರ ಉತ್ತಮ ಕಸೂತಿ ಕೆಲಸಗಳಿಗೆ ಜಾಗತಿಕವಾಗಿ ಮಾರುಕಟ್ಟೆ ಲಭ್ಯವಿದ್ದು, ದಿಂಗತ ರಾಜಕಾರಣಿ, ಸಂಡೂರು ರಾಜಮನೆತನದ ಎಂ ವೈ ಘೋರ್ಪಡೆ ಅವರು ಸಂಡೂರು ಕುಶಲ ಕಲಾ ಕೇಂದ್ರ ಎಂಬ ಸ್ವ- ಸಹಾಯ ತಂಡವನ್ನು ಸ್ಥಾಪಿಸಿದ್ದರು. ಕಳೆದ ಹಲವಾರು ವರ್ಷಗಳಿದ ಲಂಬಾಣಿ ಮಹಿಳೆಯರು ಈ ಕಲೆಯನ್ನು ರಕ್ಷಣೆ ಮಾಡುತ್ತಿದ್ದಾರೆ. ಲಂಬಾಣಿ ಮಹಿಳೆಯರಿಗೆ ಉತ್ತಮ ಬೇಡಿಕೆಯಿರುವ ಬಟ್ಟೆಗಳ ಮೇಲೆ ಕಸೂತಿ ರಚಿಸಲು ತರಬೇತಿಯನ್ನೂ ನೀಡಲಾಗುತ್ತಿತ್ತು. ಇದು ಹೆಮ್ಮೆಯ ಆಂದೋಲನವಾಗಿದೆ. ರಾಜ್ಯದ ಇತರ ಭಾಗಗಳ ವಿವಿಧ ಕಲಾಕೃತಿಗಳೊಂದಿಗೆ ನಮ್ಮ ರಾಜ್ಯದ ಕಲೆಯನ್ನು ಹಂಚಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಕುಶಲಕರ್ಮಿ ಮಹಿಳೆ ಇದೇ ವೇಳೆ ಹೇಳಿದರು.
ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದು ಬೆಲೆಗಳು ಸಾಮಾನ್ಯವಾಗಿ ಸ್ಥಿರವಾಗಿದ್ದು, ಉತ್ತಮ ಗುಣಮಟ್ಟದ…
ಕರಾವಳಿ ಜಿಲ್ಲೆಗಳಲ್ಲಿ ಮೋಡ ಹಾಗೂ ಸೆಖೆಯ ವಾತಾವರಣ ಮುಂದುವರಿಯಲಿದ್ದು, ಕೆಲವೆಡೆ ಸಂಜೆ ಅಥವಾ…
ಮ್ಯಾನ್ಮಾರ್ನಿಂದ ಅಡಿಕೆ ಕಳ್ಳಸಾಗಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಕಠಿಣಗೊಳಿಸಿದೆ.…
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಹತ್ವದ ಘೋಷಣೆ ರಾಜ್ಯ…
ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮಹತ್ವದ…
ರಾಜ್ಯ ಬಜೆಟ್ 2026-27ರಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ…