ಮುಂಬರುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಸಂಡೂರಿನ ಲಂಬಾಣಿ ಮಹಿಳೆಯರ ಕಲೆ ಮತ್ತು ಕಸೂತಿ ಕಲಾಕೃತಿಗಳನ್ನು ಹೊಸದಿಲ್ಲಿಯಲ್ಲಿ ಪ್ರದರ್ಶಿಸಲಾಗುವುದು. ಬಳ್ಳಾರಿ ಜಿಲ್ಲೆಯ ಮಲೆನಾಡಿನ ಕುಶಲಕರ್ಮಿಗಳು ಈ ಘೋಷಣೆಯಿಂದ ಸಂತಸಗೊಂಡಿದ್ದಾರೆ.
ಬಟ್ಟೆಗಳು, ಸೀರೆ ,ಶಾಲುಗಳು ಮೇಲೆ ಲಂಬಾಣಿ ಮಹಿಳೆಯರ ಉತ್ತಮ ಕಸೂತಿ ಕೆಲಸಗಳಿಗೆ ಜಾಗತಿಕವಾಗಿ ಮಾರುಕಟ್ಟೆ ಲಭ್ಯವಿದ್ದು, ದಿಂಗತ ರಾಜಕಾರಣಿ, ಸಂಡೂರು ರಾಜಮನೆತನದ ಎಂ ವೈ ಘೋರ್ಪಡೆ ಅವರು ಸಂಡೂರು ಕುಶಲ ಕಲಾ ಕೇಂದ್ರ ಎಂಬ ಸ್ವ- ಸಹಾಯ ತಂಡವನ್ನು ಸ್ಥಾಪಿಸಿದ್ದರು. ಕಳೆದ ಹಲವಾರು ವರ್ಷಗಳಿದ ಲಂಬಾಣಿ ಮಹಿಳೆಯರು ಈ ಕಲೆಯನ್ನು ರಕ್ಷಣೆ ಮಾಡುತ್ತಿದ್ದಾರೆ. ಲಂಬಾಣಿ ಮಹಿಳೆಯರಿಗೆ ಉತ್ತಮ ಬೇಡಿಕೆಯಿರುವ ಬಟ್ಟೆಗಳ ಮೇಲೆ ಕಸೂತಿ ರಚಿಸಲು ತರಬೇತಿಯನ್ನೂ ನೀಡಲಾಗುತ್ತಿತ್ತು. ಇದು ಹೆಮ್ಮೆಯ ಆಂದೋಲನವಾಗಿದೆ. ರಾಜ್ಯದ ಇತರ ಭಾಗಗಳ ವಿವಿಧ ಕಲಾಕೃತಿಗಳೊಂದಿಗೆ ನಮ್ಮ ರಾಜ್ಯದ ಕಲೆಯನ್ನು ಹಂಚಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಕುಶಲಕರ್ಮಿ ಮಹಿಳೆ ಇದೇ ವೇಳೆ ಹೇಳಿದರು.
ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…
ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…
ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…
ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…
ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…
ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…