ಮುಂಬರುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಸಂಡೂರಿನ ಲಂಬಾಣಿ ಮಹಿಳೆಯರ ಕಲೆ ಮತ್ತು ಕಸೂತಿ ಕಲಾಕೃತಿಗಳನ್ನು ಹೊಸದಿಲ್ಲಿಯಲ್ಲಿ ಪ್ರದರ್ಶಿಸಲಾಗುವುದು. ಬಳ್ಳಾರಿ ಜಿಲ್ಲೆಯ ಮಲೆನಾಡಿನ ಕುಶಲಕರ್ಮಿಗಳು ಈ ಘೋಷಣೆಯಿಂದ ಸಂತಸಗೊಂಡಿದ್ದಾರೆ.
ಬಟ್ಟೆಗಳು, ಸೀರೆ ,ಶಾಲುಗಳು ಮೇಲೆ ಲಂಬಾಣಿ ಮಹಿಳೆಯರ ಉತ್ತಮ ಕಸೂತಿ ಕೆಲಸಗಳಿಗೆ ಜಾಗತಿಕವಾಗಿ ಮಾರುಕಟ್ಟೆ ಲಭ್ಯವಿದ್ದು, ದಿಂಗತ ರಾಜಕಾರಣಿ, ಸಂಡೂರು ರಾಜಮನೆತನದ ಎಂ ವೈ ಘೋರ್ಪಡೆ ಅವರು ಸಂಡೂರು ಕುಶಲ ಕಲಾ ಕೇಂದ್ರ ಎಂಬ ಸ್ವ- ಸಹಾಯ ತಂಡವನ್ನು ಸ್ಥಾಪಿಸಿದ್ದರು. ಕಳೆದ ಹಲವಾರು ವರ್ಷಗಳಿದ ಲಂಬಾಣಿ ಮಹಿಳೆಯರು ಈ ಕಲೆಯನ್ನು ರಕ್ಷಣೆ ಮಾಡುತ್ತಿದ್ದಾರೆ. ಲಂಬಾಣಿ ಮಹಿಳೆಯರಿಗೆ ಉತ್ತಮ ಬೇಡಿಕೆಯಿರುವ ಬಟ್ಟೆಗಳ ಮೇಲೆ ಕಸೂತಿ ರಚಿಸಲು ತರಬೇತಿಯನ್ನೂ ನೀಡಲಾಗುತ್ತಿತ್ತು. ಇದು ಹೆಮ್ಮೆಯ ಆಂದೋಲನವಾಗಿದೆ. ರಾಜ್ಯದ ಇತರ ಭಾಗಗಳ ವಿವಿಧ ಕಲಾಕೃತಿಗಳೊಂದಿಗೆ ನಮ್ಮ ರಾಜ್ಯದ ಕಲೆಯನ್ನು ಹಂಚಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಕುಶಲಕರ್ಮಿ ಮಹಿಳೆ ಇದೇ ವೇಳೆ ಹೇಳಿದರು.
ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…
ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…
ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…
ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…
ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…