Opinion

ಭತ್ತ ಸುಲಿದರೆ ಅಕ್ಕಿ | ಅಕ್ಕಿ ಊಟಕ್ಕೆ ಅಷ್ಟೇ ಅಲ್ಲ.. | ಅನೇಕ ರೋಗ ನಿವಾರಿಸುವ ಗುಣವೂ ಹೊಂದಿದೆ..|

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಭತ್ತ(paddy) ನಮ್ಮ ಭಾರತದ ಪ್ರಮುಖ ಆಹಾರ‌‌‌‌‌‍(food). ಅಕ್ಕಿ ಊಟಕ್ಕೆ ಅಷ್ಟೇ ಅಲ್ಲ.. ಹಾಗೆ ಇದರಲ್ಲಿ ಹಸಿವು ನಿವಾರಿಸುವ ಗುಣ ಅಷ್ಟೇ ಅಲ್ಲ. ಇದನ್ನು ಅನೇಕ ರೋಗಗಳಿಗೆ ಔಷಧಿಯಾಗಿಯೂ(Medicinal) ಉಪಯೋಗಿಸಬಹುದು….

Advertisement
Advertisement
  • ಭತ್ತದ ಹೊಟ್ಟನ್ನು ಸುಟ್ಟು ಬೂದಿ ಮಾಡಿ ಚೆನ್ನಾಗಿ ಗಾಳಿಸಿ ವಸ್ತ್ರಗಾಳಿತ ಚೂರ್ಣಕ್ಕೆ ಸೈಂಧವ ಲವಣ ಸೇರಿಸಿ ಹಲ್ಲುಜ್ಜಲು ಉಪಯೋಗಿಸಿದರೆ ಹಲ್ಲು ನೋವು ಗುಣವಾಗುತ್ತದೆ.
  • ಭತ್ತದ ಹೊಟ್ಟಿನ ಬಸ್ಮಕ್ಕೆ ಅಂಟುವಾಳ ಪುಡಿ ಸೇರಿಸಿ ಸ್ನಾನಕ್ಕೆ ಉಪಯೋಗಿಸುವುದರಿಂದ ಕಜ್ಜಿ ತುರಿ ಗುಣವಾಗುತ್ತದೆ.
  • ಭತ್ತ ವನ್ನು ಹುರಿದು ಅರಳು ಮಾಡಿ ಮೇಲಿನ ಕವಚವನ್ನು ಬೇರ್ಪಡಿಸಿ ಆಹಾರವಾಗಿ ಉಪಯೋಗಿಸುವುದರಿಂದ ಅಜೀರ್ಣ ಗ್ಯಾಸ್ಟ್ರಿಕ್ ಗುಣವಾಗುತ್ತದೆ
  • ಭತ್ತದ ಮಿಲ್ಲಿನಲ್ಲಿ ಅಕ್ಕಿ ಮಾಡಿಸಿದಾಗ ಅಕ್ಕಿಯ ಜೊತೆಯಲ್ಲಿ ತೌಡು ಬರುತ್ತದೆ. ಇದು ಅತ್ಯಂತ ಪೌಷ್ಟಿಕವಾದ ಆಹಾರ. ಇದನ್ನು ಹುರಿದು ತುಪ್ಪ ಹಾಕಿ ಬೆಲ್ಲ ಹಾಕಿ ಉಂಡೆ ಮಾಡಿ ಮಕ್ಕಳಿಗೆ ತಿನ್ನಿಸಿದರೆ ತುಂಬಾ ಒಳ್ಳೆಯದು. ಇದು ವಿಟಮಿನ್ ಗಳ ಆಗರ
  • ತೌಡು ಡ್ರೈ ಫ್ರೂಟ್ಸ್ ಎಲ್ಲಾ ಸೇರಿಸಿ ಮಕ್ಕಳಿಗೆ ಮತ್ತು ಗರ್ಭಿಣಿ ಸ್ತ್ರೀಯರಿಗೆ ಕೊಡಬಹುದಾದ ಒಳ್ಳೆಯ ತಿನಿಸನ್ನು ತಯಾರಿಸಬಹುದು.
  • ಅಕ್ಕಿಯಿಂದ ಮಾಡುವ ಖಾದ್ಯಗಳು ತಮಗೆಲ್ಲ ಚಿರಪರಿಚಿತ.
  • ಅಕ್ಕಿಯನ್ನು ಹುರಿದು ಪುಡಿ ಮಾಡಿ ಬಿಸಿನೀರಿನೊಂದಿಗೆ ಸೇವಿಸಿದರೆ ಗ್ಯಾಸ್ಟ್ರಿಕ್ ಗುಣವಾಗುತ್ತದೆ.
  • ಒಂದು ಚಮಚ ಅಕ್ಕಿ ಹಿಟ್ಟಿಗೆ ನೀರು ಹಾಕಿ ದೋಸೆ ಹಿಟ್ಟಿನಂತೆ ಕದಡಿ ಬಿಸಿ ಮಾಡಿ ಪೇಸ್ಟ್ ಮಾಡಿ ಕೊಂಡು ಕುರದ ಮೇಲೆ ಹಚ್ಚಿದರೆ ಕುರು ಒಡೆಯುತ್ತದೆ.
  • ಅಕ್ಕಿ ಹಿಟ್ಟನ್ನು ದೋಸೆ ಹಿಟ್ಟಿನಂತೆ ಕದಡಿ ಕಾಯಿಸಿ ಪೇಸ್ಟ್ ಮಾಡಿ ಅರಿಶಿನ ನಿಂಬೆರಸ ಸೇರಿಸಿ ಮುಖಕ್ಕೆ ಪ್ಯಾಕ್ ಹಾಕುವುದರಿಂದ ಮುಖದ ಕಪ್ಪು ಕಲೆ ಬಂಗು ಮತ್ತು ಇತರೆ ಕಲೆಗಳು ಗುಣವಾಗುತ್ತದೆ.
  • ದೇಹ ಆಕಸ್ಮಿಕ ಬೆಂಕಿಯಿಂದ ಅಥವಾ ನೀರಿನಿಂದ ಸುಟ್ಟಾಗ ಅಕ್ಕಿ ಹಿಟ್ಟನ್ನು ಗಾಯದ ಮೇಲೆ ಉದುರಿಸಿದರೆ ಬೊಬ್ಬೆ ಏಳುವುದಿಲ್ಲ.
ಬರಹ :
ಸುಮನಾ ಮಳಲಗದ್ದೆ, ಪಾರಂಪರಿಕ ವೈದ್ಯರು, 9980182883
Paddy is the most important food of our India. Rice is not only for lunch.. It also has the property of relieving hunger. It can be used medicinally for many diseases
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕಾಡೆಂದರೇನು…? , ಅರಣ್ಯ ಸಚಿವರಿಗೆ ಇದೊಂದು ಮನವಿ..

ಅರಣ್ಯ ಅಥವಾ ಕಾಡು ಎಂದರೆ ದಟ್ಟವಾದ ಮರಗಳ ಸಮೂಹ ಮಾತ್ರವಲ್ಲ, ಅರಣ್ಯ ಎಂದರೆ…

3 hours ago

ಹವಾಮಾನ ವರದಿ | 24-07-2025 | ಜು.29 ರಿಂದ ಮಳೆ ಕಡಿಮೆ ನಿರೀಕ್ಷೆ..? | ಕೃಷಿಕರಿಗೆ ಪೂರಕವಾಗಬಹುದೇ ಹವಾಮಾನ..?

ಬಾಂಗ್ಲಾ ದೇಶದ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮೇಲ್‌ ಸ್ತರ  ಹಾಗೂ ಮಧ್ಯಮ…

4 hours ago

ಕೃಷಿಕರಿಗೆ ಕೈಕೊಟ್ಟ ಹವಾಮಾನ | ಅಡಿಕೆಗೆ ವ್ಯಾಪಕವಾಗಿ ಹರಡಿದ ಕೊಳೆರೋಗ | ರೋಗನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನದಲ್ಲಿ ಅಡಿಕೆ ಬೆಳೆಗಾರರು |

ದಕ್ಷಿಣ ಕನ್ನಡ ಮಾತ್ರವಲ್ಲ ಮಲೆನಾಡು ಭಾಗದ ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗದಲ್ಲೂ ಅಡಿಕೆ…

5 hours ago

ನಿಮ್ಮ ಆರೋಗ್ಯವನ್ನು ಪುನರುಜ್ಜೀವನಗೊಳಿಸಿ | 10 ಆಶ್ಚರ್ಯಕರ ಆಯುರ್ವೇದ ಉಪಾಯಗಳು !

ಆಯುರ್ವೇದವು ಭಾರತದ ಪ್ರಾಚೀನ ಔಷಧ ವಿಜ್ಞಾನವಾಗಿದ್ದು, ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು…

8 hours ago

ಬಸ್ಸು ಚಾಲಕನಿಗೆ ಹಲಸಿನ ಊಟ ತಂದ ಸಂಕಷ್ಟ…!

ಹಲಸಿನಹಣ್ಣು ತಿಂದು ಉಸಿರಾಟದ ಮೂಲಕ ಆಲ್ಕೋಹಾಲ್‌ ಪತ್ತೆ ಮಾಡುವ ವೇಳೆ ಯಂತ್ರಕ್ಕೆ ಒಳಪಟ್ಟ…

8 hours ago

ಆಟಿ ಅಂದರೇ ಪರಿಸರ….! ; ತುಳುನಾಡಿನ ವಿಶೇಷ ಆಚರಣೆ

ಆಟಿ ಅಂದರೆ ಪ್ರಕೃತಿಯ ಒಳತಿರುಳು. ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳಲು ಹಾಗೂ ಪ್ರಕೃತಿಯ ಪರಿಣಾಮಗಳನ್ನು…

9 hours ago