ಸುಳ್ಯ ಶಾಸಕ ಎಸ್ ಅಂಗಾರ ಅವರ ವಿಶೇಷ ಅನುದಾನ ಹಾಗೂ ಮಳೆಹಾನಿಯಲ್ಲಿ ಜಾಲ್ಸೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿರುವ ವಿವಿಧ ರಸ್ತೆಗಳ ಗುದ್ದಲಿ ಪೂಜೆ ಕಾರ್ಯಕ್ರಮವು ಜ.14 ಶನಿವಾರ ಸಂಜೆ 4.30 ಗೆ ಕಲ್ಲೋಣಿ ಜಂಕ್ಷನ್ ನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಕಲ್ಲೋಣಿ – ದೇವರಕಾನ ಸಂಪರ್ಕ ರಸ್ತೆಗೆ ರೂ 1 ಕೋಟಿ, ಪರ್ಲಿಕಜೆ-ನಿಡುಬೆ ಸಂಪರ್ಕ ರಸ್ತೆಗೆ ರೂ 25 ಲಕ್ಷ ರೂ, ಐವರ್ನಾಡು – ದೇರಾಜೆ ಸಂಪರ್ಕ ರಸ್ತೆ ರೂ 25 ಲಕ್ಷ (ಮಳೆ ಹಾನಿ), ಕಲ್ಲೋಣಿ – ಕುಳ್ಳಂಪ್ಪಾಡಿ ರಸ್ತೆ ರೂ 25 ಲಕ್ಷ. (ಮಳೆ ಹಾನಿ), ಪಾಲೆಪ್ಪಾಡಿ – ಉದ್ದಂಪ್ಪಾಡಿ ರಸ್ತೆ ರೂ 10 ಲಕ್ಷ ರೂಪಾಯಿ ಅನುದಾನ ಲಭ್ಯವಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel