ಗ್ರಾಮೀಣ ಭಾಗಕ್ಕೆ ಶುದ್ಧ ಕುಡಿಯುವ ನೀರು…! ಅದು ಎಲ್ಲಿಂದಲೋ ಬರುವ ನೀರು.ಅದಕ್ಕೆ ಕೋಟಿ ಕೋಟಿ ಅನುದಾನ..!. ಈ ಯೋಜನೆ ಪೂರ್ತಿಯಾಗುವುದು ಯಾವಾಗ ಎಂದು ಯಾರಿಗೂ ಗೊತ್ತಿಲ್ಲ. ಆದರೆ ಈಗ ಜನರು ದಿನವೂ ಸಂಕಷ್ಟ ಅನುಭವಿಸಬೇಕಾದ ಸ್ಥಿತಿ ಬಂದಿದೆ. ಇಲ್ಲಿರುವ ಚಿತ್ರವೇ ಅದಕ್ಕೆ ಸಾಕ್ಷಿ..…… ಮುಂದೆ ಓದಿ……


ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆ “ಜಲವೀವನ್ ಮಿಶನ್” ಆರಂಭವಾಗಿದೆ. ದೊಡ್ಡ ದೊಡ್ಡ ಪೈಪ್ ಕಾಡಿನ ನಡುವೆ ಇರುವ ಪರಿಶುದ್ಧವಾದ ಹಳ್ಳಿಗೂ ನೀರು ಸರಬರಾಜು. ಅಲ್ಲಿ ಯಾರಿಗೆ ನೀರು, ಯಾಕಾಗಿ ನೀರು.. ಯಾರಿಗೆ ಗೊತ್ತು..? ಹೇಳುವವರು ಇಲ್ಲ, ಕೇಳುವವರು ಮೊದಲೇ ಇಲ್ಲ. ಮಾತನಾಡುವವರು ಇಲ್ಲವೇ ಇಲ್ಲ..!. ಇಂತಹದೊಂದು ಯೋಜನೆ ಇದು. ಮಳೆಗಾಲ ಆರಂಭವಾಗಿ ಎರಡು ತಿಂಗಳಾಗಿದೆ, ಉತ್ತಮವಾಗಿದ್ದ ರಸ್ತೆಗಳ ಬದಿಗಳೆಲ್ಲಾ ಕೆಸರಾಗಿದೆ. ವಾಹನಗಳು ಗುಂಡಿಗೆ ಬೀಳುತ್ತಿವೆ. ಇಂತದೊಂದು ಸಂಕಷ್ಟವನ್ನು ಕಡಬ ತಾಲೂಕಿನ ಬಳ್ಪದಲ್ಲಿ ಜನರು ಅನುಭವಿಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಆದರ್ಶ ಗ್ರಾಮ ಎಂದು ಬಳ್ಪವನ್ನು ಕರೆಯಲಾಗಿತ್ತು. ಹಲವು ಕಾಮಗಾರಿಗಳು ಇಲ್ಲಿ ನಡೆದಿದೆ. ಕಾಂಕ್ರೀಟ್ ರಸ್ತೆಯೂ ಆಗಿತ್ತು. ಜಲಜೀವನ ಮಿಶನ್ ಯೋಜನೆಯ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಯ ಪೈಪ್ಗಾಗಿ ರಸ್ತೆಯ ಬದಿಯನ್ನು ಅಗೆಯಲಾಗಿದೆ. ಇದರಿಂದ ಈಚೆಗಷ್ಟೇ ಆದ ರಸ್ತೆಯೂ ಹಾಳಾಗುತ್ತಿದೆ. ಬಳ್ಪ ಪೇಟೆಯಲ್ಲಿ ಸಹಕಾರಿ ಸಂಘ ಕಚೇರಿ ಇದೆ. ಇಲ್ಲಿ ಗೊಬ್ಬರ ಸೇರಿದಂತೆ ರೇಶನ್ ಪಡೆಯಲು ಕೃಷಿಕರು ಬರುತ್ತಾರೆ. ಆದರೆ ಪರದಾಟ ನಡೆಸಬೇಕಾದ ಸ್ಥಿತಿ ಇದೆ. ರಸ್ತೆಯಲ್ಲಿ ಅಗೆದಿರುವ ಕಾರಣ ಲಾರಿ ಸಹಿತ ಇತರ ವಾಹನಗಳು ಗುಂಡಿಗೆ ಬೀಳುತ್ತವೆ. ಜನರು ಪರದಾಡುತ್ತಾರೆ…!.…… ಮುಂದೆ ಓದಿ……
ಜಲಜೀವನ್ ಮಿಶನ್ ಯೋಜನೆಯ ಪೈಪ್ ಲೈನ್ ಈಗ ಜನರಿಗೆ ಸಮಸ್ಯೆಯಾಗುತ್ತಿದೆ.ಇಲಾಖೆಗಳ ಬೇಜವಾಬ್ದಾರಿ ಕಾರಣದಿಂದ ಇಂದು ಗ್ರಾಮೀಣ ಭಾಗದ ಜನರು ಸಂಕಷ್ಟ ಪಡುವಂತಾಗಿದೆ. ಇಲಾಖೆಗಳು ಈ ಬಗ್ಗೆ ತುರ್ತಾಗಿ ಗಮನಹರಿಸಬೇಕಿದೆ.ಬಳ್ಪದಲ್ಲಿ ನಡೆದಿರುವ ಘಟನೆ ಇದು.@dineshgrao @DCDKOfficial @ZP_DaksnKannada @osd_cmkarnataka pic.twitter.com/T1B5NuKDok
— theruralmirror (@ruralmirror) June 30, 2025



ಗ್ರಾಮೀಣ ಭಾಗದ ಹಲವು ರಸ್ತೆಗಳು ಇದೇ ಸ್ಥಿತಿಗೆ ಒಳಗಾಗಿವೆ. ಬೇಸಿಗೆಯಲ್ಲಿ ರಸ್ತೆ, ಚರಂಡಿ ಎಲ್ಲವೂ ಸರಿಯಾಗಿತ್ತು. ಇದೀಗ ರಸ್ತೆಯ ಬದಿಗಳಲ್ಲಿ ಕೆಸರು, ಚರಂಡಿಗಳು ಮಣ್ಣಿನಿಂದ ಮುಚ್ಚಿದೆ. ಈಚೆಗಷ್ಟೆ ಸುಳ್ಯ ತಾಲೂಕಿನ ಗ್ರಾಮೀಣ ಭಾಗವಾದ ಗುತ್ತಿಗಾರು-ಬಳ್ಳಕ್ಕ-ಪಂಜ ರಸ್ತೆ ಮೊಗ್ರ ಎಂಬಲ್ಲಿ ಇದೇ ಪೈಪ್ ಲೈನ್ ನ ಗುಂಡಿಗೆ ನೀರು ಇಳಿದು ರಸ್ತೆಯ ಬದಿ ಮಾತ್ರವಲ್ಲ ಗುಡ್ಡವೇ ಕುಸಿತದ ಭೀತಿಯಲ್ಲಿದೆ. ಇಂತಹ ಹಲವು ಪ್ರಕರಣಗಳು ಇಂದು ಗ್ರಾಮೀಣ ಭಾಗದಲ್ಲಿ ನಡೆಯುತ್ತಿದೆ.
ಈಚೆಗಷ್ಟೆ ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೈಕ ಎಂಬಲ್ಲಿಯೂ ಮಳೆಗಾಲದಲ್ಲಿ ರಸ್ತೆಯ ಬದಿಯಲ್ಲಿ ಪೈಪ್ ಲೈನ್ ಅಳವಡಿಕೆಗೆ ಯಂತ್ರದ ಮೂಲಕ ಅಗೆಯಲಾಗಿತ್ತು, ಪೈಕ ಸರ್ಕಾರಿ ಶಾಲೆಯ ಆವರಣ ಗೋಡೆಗೂ ಸಮಸ್ಯೆಯಾಗಿತ್ತು. ಮಳೆಗಾಲದಲ್ಲಿ ಅದೂ ಗ್ರಾಮೀಣ ಭಾಗದಲ್ಲಿ ಯಂತ್ರದ ಮೂಲಕ ಕೆಲಸ ಮಾಡಿದರೆ ರಸ್ತೆಗಳ ಪರಿಸ್ಥಿತಿ ಹೇಗಿರಬೇಡ, ಜನರು ಓಡಾಟ ಮಾಡುವುದಾದರೂ ಹೇಗೆ ಎಂಬ ಕನಿಷ್ಟ ಜ್ಞಾನವೂ ಅಧಿಕಾರಿಗಳಿಗೆ ಇಲ್ಲವೇ ಎಂದು ಜನರು ಪ್ರಶ್ನಿಸಿದ್ದರು.
ಹೀಗಾಗಿ ಗ್ರಾಮೀಣ ಭಾಗದಲ್ಲಿ ಈ ಯೋಜನೆಯ ಮೂಲಕ ಆಗಿರುವ ಅನಾಹುತಗಳಿಗೆ ತಕ್ಷಣವೇ ಕ್ರಮ ಅಗತ್ಯ ಇದೆ. ಅದರಲ್ಲೂ ಬಳ್ಪದಲ್ಲಿ ಸಹಕಾರಿ ಸಂಘದ ಕಟ್ಟಡದ ಮುಂದೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ತಕ್ಷಣವೇ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.…… ಮುಂದೆ ಓದಿ……
The removal of the pipeline intended for the drinking water initiative under the Jaljeevan Mission project is currently posing significant challenges for the local populace. The negligence exhibited by the relevant departments has resulted in considerable difficulties for residents in rural areas. It is imperative that these departments address this issue with immediate attention.