ರಬ್ಬರ್‌ ಬೆಳೆಗಾರರ ಸಂಕಷ್ಟ | ಕೈಕೊಟ್ಟ ಹವಾಮಾನ | ರಬ್ಬರ್‌ ಧಾರಣೆಯೂ ಅಸ್ಥಿರ | ರಬ್ಬರ್‌ ಬೆಳೆಗಾರರಿಗೆ ಆರ್ಥಿಕ ಹಿಂಜರಿತದ ಭೀತಿ |

January 8, 2024
3:34 PM
ಭಾರತದ ರಬ್ಬರ್ ಉತ್ಪಾದನೆಯ ಕೇಂದ್ರವಾಗಿರುವ ಕೇರಳದಲ್ಲಿ ರಬ್ಬರ್‌ ಕೃಷಿಕರು ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ಸಣ್ಣ ಹಿಡುವಳಿದಾರರ ಮೇಲೆ ಪರಿಣಾಮ ಬೀರಿದೆ, ರಬ್ಬರ್ ಕೃಷಿಯನ್ನು ತ್ಯಜಿಸಲು ಅನೇಕರು ಮನಸ್ಸು ಮಾಡುತ್ತಿದ್ದಾರೆ. ಕರ್ನಾಟಕದ ರಬ್ಬರ್‌ ಬೆಳೆಗಾರರು ಕೂಡಾ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ರಬ್ಬರ್‌ ಬೆಳೆಗಾರರಿಗೆ ಕಳೆದ ಕೆಲವು ವರ್ಷಗಳಿಂದ ಸಂಕಷ್ಟದ ಸ್ಥಿತಿ.ಈ ವರ್ಷ ಹವಾಮಾನವೂ ರಬ್ಬರ್‌ ಬೆಳೆಗಾರರಿಗೆ ಕೈಕೊಟ್ಟಿದೆ. ಇದೀಗ ರಬ್ಬರ್‌ ಬೆಳೆಗಾರರಿಗೆ ಅದರಲ್ಲೂ ಸಣ್ಣ ಹಿಡುವಳಿದಾರರ ಮೇಲೆ ಪರಿಣಾಮ ಬೀರಿದೆ.ಕೇರಳದಲ್ಲಿ ರಬ್ಬರ್‌ ಬೆಳೆಗಾರರಿಗೆ ಆರ್ಥಿಕ ಹಿಂಜರಿತದ ಭೀತಿ ಎದುರಾಗಿದೆ. ಅನೇಕರು ರಬ್ಬರ್‌ ಕೃಷಿಗೆ ವಿದಾಯ ಹೇಳುವ ಬಗ್ಗೆ ಯೋಚಿಸುತ್ತಿದ್ದಾರೆ.

Advertisement

ಕೇರಳವು ಭಾರತದ ರಬ್ಬರ್ ಉತ್ಪಾದನೆಯಲ್ಲಿ ಶೇ 80 ರಷ್ಟು ಪ್ರಾಬಲ್ಯ ಹೊಂದಿದೆ. 2010-11 ರಲ್ಲಿ ಒಟ್ಟು 7.71 ಲಕ್ಷ ಟನ್‌ಗಳನ್ನು  ಬೆಳೆಸಲಾಗುತ್ತಿತ್ತು. ರಬ್ಬರ್ ವಲಯವು ಸುಮಾರು 12 ಲಕ್ಷ ಕುಟುಂಬಗಳನ್ನು ‌ ಬೆಳೆಸುತ್ತಿದೆ. ಇದು ಕೇರಳದ ಆರ್ಥಿಕತೆಗೆ ಗಣನೀಯ ಕೊಡುಗೆಯನ್ನು ನೀಡುತ್ತದೆ. ಆದರೆ ರಬ್ಬರ್‌ ಧಾರಣೆ ಕುಸಿತ ಹಾಗೂ ಹವಾಮಾನ ವೈಪರೀತ್ಯದ ಕಾರಣದಿಂದ ಈಗ ಆರ್ಥಿಕ ಬಿಕ್ಕಟ್ಟು ಆರಂಭವಾಗಿದೆ.

ರಬ್ಬರ್ ಉದ್ಯಮವು 2012 ರಿಂದ ಕುಸಿಯುತ್ತಿರುವ ಬೆಲೆಗಳಿಂದ ಸಂಕಷ್ಟ ಎದುರಿಸುತ್ತಿದೆ, ಜೊತೆಗೆ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಮತ್ತು ವಯಸ್ಸಾದ ರಬ್ಬರ್ ಮರಗಳಿಂದ ಇಳುವರಿ ಕಡಿಮೆಯಾಗುತ್ತಿದೆ. ಈ ಬಿಕ್ಕಟ್ಟು ವಿಶೇಷವಾಗಿ ಸಣ್ಣ ಹಿಡುವಳಿದಾರರ ಮೇಲೆ ಪರಿಣಾಮ ಬೀರಿದೆ, ರಬ್ಬರ್ ಕೃಷಿಯನ್ನು ತ್ಯಜಿಸಲು ಅನೇಕರು ಮನಸ್ಸು ಮಾಡುವಂತಾಗಿದೆ ಎಂದು ನ್ಯೂ ಇಂಡಿಯನ್‌ ವರದಿ ಮಾಡಿದೆ.

ಹಿಂದೆ ಕೆಜಿ ರಬ್ಬರ್‌ ಗೆ 300 ರೂಪಾಯಿ ಇತ್ತು , ಈಗ  148 -150 ರೂಪಾಯಿಗೆ ತಲುಪಿದೆ. ಈ  ಕುಸಿತವು  ರಬ್ಬರ್ ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿರುವವರಿಗೆ ಸಂಕಷ್ಟ ತಂದಿದೆ. ಹೀಗಾಗಿ ಕಳೆದ ಕೆಲವು ಸಮಯಗಳಿಂದ ಕೇರಳ ಸೇರಿದಂತೆ ಕರ್ನಾಟಕದ ವಿವಿಧ ಪ್ರದೇಶಗಳಿಂದ ಕೃಷಿಕರ ಪರವಾಗಿ, ರಬ್ಬರ್‌ ಬೆಳೆಗಾರರ ಪರವಾಗಿ ಧ್ವನಿ, ಹೋರಾಟ ಕೇಳಿಬರುತ್ತಿದೆ. ಈಚೆಗೆ ರಬ್ಬರ್‌ ಆಮದು ಸ್ಥಗಿತ, ರಬ್ಬರ್‌ಗೆ ಬೆಂಬಲ ಬೆಲೆ ನೀಡುವಂತೆ ಕೇರಳದ ಎಲ್ಲಾ ಪಕ್ಷಗಳೂ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಕೇರಳ ರಾಜ್ಯದಲ್ಲಿ ರೈತರು ಮತ್ತು ಮೀನುಗಾರರ ಪರವಾಗಿ ಹೋರಾಡುವ ಉದ್ದೇಶದಿಂದ ಸ್ಥಾಪಿಸಲಾದ ಎನ್‌ಪಿಪಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ. ಕೃಷಿಕರ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲು  ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದೆ.ಉದ್ಯಮ ತಜ್ಞರು ರಬ್ಬರ್ ಉತ್ಪಾದನೆಯ ಪ್ರಸ್ತುತ ವೆಚ್ಚವನ್ನು ಕೆಜಿಗೆ ರೂ 250 ಎಂದು ಅಂದಾಜಿಸಿದ್ದಾರೆ, ಆದರೆ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆ ಕೆಜಿಗೆ ರೂ 135 ರಿಂದ ರೂ 150 ರ ನಡುವೆ ಇದೆ.

ಪ್ರಸ್ತುತ, ಕೇರಳದಲ್ಲಿ ಸುಮಾರು 8 ಲಕ್ಷ ಕುಟುಂಬಗಳು ನೇರವಾಗಿ ರಬ್ಬರ್ ಕೃಷಿಯ ಮೇಲೆ ಅವಲಂಬಿತವಾಗಿವೆ, ಬಹುಪಾಲು ಸಣ್ಣ ಪ್ರಮಾಣದ ರೈತರು 4-5 ಎಕರೆವರೆಗೆ ಭೂಮಿಯನ್ನು ಹೊಂದಿದ್ದಾರೆ. ಈಚೆಗೆ ಧಾರಣೆ ಕುಸಿತ ಹಾಗೂ ಇಳುವರಿ ಕುಸಿತದ ಕಾರಣದಿಂದ ಟ್ಯಾಪಿಂಗ್‌ ಸಮಸ್ಯೆಯೂ ಇದೆ. ಈ ನಡುವೆ  ಕಾರ್ಮಿಕರ ಕೊರತೆಯಿಂದಾಗಿ ರಬ್ಬರ್ ಉದ್ಯಮವು ಸಂಕಷ್ಟಕ್ಕೆ ಸಿಲುಕಿದೆ. ಈಗಿನ ಮಾಹಿತಿ ಪ್ರಕಾರ ಒಟ್ಟು ರಬ್ಬರ್ ಕೃಷಿ ಭೂಮಿಯಲ್ಲಿ ಅರ್ಧದಷ್ಟು ಭೂಮಿಯನ್ನು ಟ್ಯಾಪಿಂಗ್‌ನಿಂದ ಕೈಬಿಡಲಾಗಿದೆ ಎಂದು ವರದಿಗಳು ಸೂಚಿಸುತ್ತವೆ. ಇದು ಸಾವಿರಾರು ಕಾರ್ಮಿಕರಿಗೆ ನಿರುದ್ಯೋಗಕ್ಕೂ ಕಾರಣವಾಗಿದೆ, ಕೃಷಿಕರಿಗೂ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ.

ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ಎನ್‌ಪಿಪಿ ಒತ್ತಾಯ ಹೇರಿದೆ, ರಬ್ಬರ್‌ನ ಬೆಂಬಲ ಬೆಲೆಯನ್ನು ಕೆಜಿಗೆ 300 ರೂ.ಗೆ ಹೆಚ್ಚಿಸುವುದು, ಸೇರಿದಂತೆ ಕೃಷಿಕರು ಎದುರಿಸುತ್ತಿರುವ ಸವಾಲುಗಳ ಕುರಿತು ಅಧ್ಯಯನ ನಡೆಸಿ ಸೂಕ್ತ ಪರಿಹಾರಗಳನ್ನು ರೂಪಿಸುವುದು ಹಾಗೂ ಕಾಡುಗಳ ಅಂಚಿನಲ್ಲಿರುವ ಕೃಷಿಕರು ಹಾಗೂ ಕೃಷಿ ಭೂಮಿಯ ಮೇಲೆ ಕಾಡು ಪ್ರಾಣಿಗಳ ದಾಳಿಯ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

The last few years have been  difficult situation for rubber growers. This year the weather has also been a problem for rubber growers. Now the rubber growers especially the small holders have been affected. In Kerala rubber growers are facing the threat of economic recession. Many are thinking of saying goodbye to rubber farming.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ದೇಶದಲ್ಲಿ 40 ಸಾವಿರ ಗ್ರಾಮ ಪಂಚಾಯತ್ ಗಳಿಗೆ ಕಚೇರಿಗಳಿಲ್ಲ…!
April 2, 2025
8:51 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 02-04-2025 | ಮುಂದೆ 10 ದಿನಗಳ ಕಾಲ ಮಳೆಯ ವಾತಾವರಣ ಸಾಧ್ಯತೆ |
April 2, 2025
11:02 AM
by: ಸಾಯಿಶೇಖರ್ ಕರಿಕಳ
ಹೊಸರುಚಿ | ಗುಜ್ಜೆ ಬೋಂಡಾ
April 2, 2025
8:00 AM
by: ದಿವ್ಯ ಮಹೇಶ್
ಯುಗಾದಿ ಹಾಗೂ ಮಲೆನಾಡಿನ ಅಡಿಕೆ ಭವಿಷ್ಯ ಏನು…? | ಮಲೆನಾಡಿನ ಅಡಿಕೆ ಬೆಳೆಗಾರರು ಎಚ್ಚರಿಕೆ ವಹಿಸಬೇಕಾದ್ದೇನು…?
April 2, 2025
7:17 AM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror

Join Our Group