Advertisement
Exclusive - Mirror Hunt

ರಬ್ಬರ್‌ ಬೆಳೆಗಾರರ ಸಂಕಷ್ಟ | ಕೈಕೊಟ್ಟ ಹವಾಮಾನ | ರಬ್ಬರ್‌ ಧಾರಣೆಯೂ ಅಸ್ಥಿರ | ರಬ್ಬರ್‌ ಬೆಳೆಗಾರರಿಗೆ ಆರ್ಥಿಕ ಹಿಂಜರಿತದ ಭೀತಿ |

Share

ರಬ್ಬರ್‌ ಬೆಳೆಗಾರರಿಗೆ ಕಳೆದ ಕೆಲವು ವರ್ಷಗಳಿಂದ ಸಂಕಷ್ಟದ ಸ್ಥಿತಿ.ಈ ವರ್ಷ ಹವಾಮಾನವೂ ರಬ್ಬರ್‌ ಬೆಳೆಗಾರರಿಗೆ ಕೈಕೊಟ್ಟಿದೆ. ಇದೀಗ ರಬ್ಬರ್‌ ಬೆಳೆಗಾರರಿಗೆ ಅದರಲ್ಲೂ ಸಣ್ಣ ಹಿಡುವಳಿದಾರರ ಮೇಲೆ ಪರಿಣಾಮ ಬೀರಿದೆ.ಕೇರಳದಲ್ಲಿ ರಬ್ಬರ್‌ ಬೆಳೆಗಾರರಿಗೆ ಆರ್ಥಿಕ ಹಿಂಜರಿತದ ಭೀತಿ ಎದುರಾಗಿದೆ. ಅನೇಕರು ರಬ್ಬರ್‌ ಕೃಷಿಗೆ ವಿದಾಯ ಹೇಳುವ ಬಗ್ಗೆ ಯೋಚಿಸುತ್ತಿದ್ದಾರೆ.

ಕೇರಳವು ಭಾರತದ ರಬ್ಬರ್ ಉತ್ಪಾದನೆಯಲ್ಲಿ ಶೇ 80 ರಷ್ಟು ಪ್ರಾಬಲ್ಯ ಹೊಂದಿದೆ. 2010-11 ರಲ್ಲಿ ಒಟ್ಟು 7.71 ಲಕ್ಷ ಟನ್‌ಗಳನ್ನು  ಬೆಳೆಸಲಾಗುತ್ತಿತ್ತು. ರಬ್ಬರ್ ವಲಯವು ಸುಮಾರು 12 ಲಕ್ಷ ಕುಟುಂಬಗಳನ್ನು ‌ ಬೆಳೆಸುತ್ತಿದೆ. ಇದು ಕೇರಳದ ಆರ್ಥಿಕತೆಗೆ ಗಣನೀಯ ಕೊಡುಗೆಯನ್ನು ನೀಡುತ್ತದೆ. ಆದರೆ ರಬ್ಬರ್‌ ಧಾರಣೆ ಕುಸಿತ ಹಾಗೂ ಹವಾಮಾನ ವೈಪರೀತ್ಯದ ಕಾರಣದಿಂದ ಈಗ ಆರ್ಥಿಕ ಬಿಕ್ಕಟ್ಟು ಆರಂಭವಾಗಿದೆ.

ರಬ್ಬರ್ ಉದ್ಯಮವು 2012 ರಿಂದ ಕುಸಿಯುತ್ತಿರುವ ಬೆಲೆಗಳಿಂದ ಸಂಕಷ್ಟ ಎದುರಿಸುತ್ತಿದೆ, ಜೊತೆಗೆ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಮತ್ತು ವಯಸ್ಸಾದ ರಬ್ಬರ್ ಮರಗಳಿಂದ ಇಳುವರಿ ಕಡಿಮೆಯಾಗುತ್ತಿದೆ. ಈ ಬಿಕ್ಕಟ್ಟು ವಿಶೇಷವಾಗಿ ಸಣ್ಣ ಹಿಡುವಳಿದಾರರ ಮೇಲೆ ಪರಿಣಾಮ ಬೀರಿದೆ, ರಬ್ಬರ್ ಕೃಷಿಯನ್ನು ತ್ಯಜಿಸಲು ಅನೇಕರು ಮನಸ್ಸು ಮಾಡುವಂತಾಗಿದೆ ಎಂದು ನ್ಯೂ ಇಂಡಿಯನ್‌ ವರದಿ ಮಾಡಿದೆ.

ಹಿಂದೆ ಕೆಜಿ ರಬ್ಬರ್‌ ಗೆ 300 ರೂಪಾಯಿ ಇತ್ತು , ಈಗ  148 -150 ರೂಪಾಯಿಗೆ ತಲುಪಿದೆ. ಈ  ಕುಸಿತವು  ರಬ್ಬರ್ ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿರುವವರಿಗೆ ಸಂಕಷ್ಟ ತಂದಿದೆ. ಹೀಗಾಗಿ ಕಳೆದ ಕೆಲವು ಸಮಯಗಳಿಂದ ಕೇರಳ ಸೇರಿದಂತೆ ಕರ್ನಾಟಕದ ವಿವಿಧ ಪ್ರದೇಶಗಳಿಂದ ಕೃಷಿಕರ ಪರವಾಗಿ, ರಬ್ಬರ್‌ ಬೆಳೆಗಾರರ ಪರವಾಗಿ ಧ್ವನಿ, ಹೋರಾಟ ಕೇಳಿಬರುತ್ತಿದೆ. ಈಚೆಗೆ ರಬ್ಬರ್‌ ಆಮದು ಸ್ಥಗಿತ, ರಬ್ಬರ್‌ಗೆ ಬೆಂಬಲ ಬೆಲೆ ನೀಡುವಂತೆ ಕೇರಳದ ಎಲ್ಲಾ ಪಕ್ಷಗಳೂ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಕೇರಳ ರಾಜ್ಯದಲ್ಲಿ ರೈತರು ಮತ್ತು ಮೀನುಗಾರರ ಪರವಾಗಿ ಹೋರಾಡುವ ಉದ್ದೇಶದಿಂದ ಸ್ಥಾಪಿಸಲಾದ ಎನ್‌ಪಿಪಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ. ಕೃಷಿಕರ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲು  ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದೆ.ಉದ್ಯಮ ತಜ್ಞರು ರಬ್ಬರ್ ಉತ್ಪಾದನೆಯ ಪ್ರಸ್ತುತ ವೆಚ್ಚವನ್ನು ಕೆಜಿಗೆ ರೂ 250 ಎಂದು ಅಂದಾಜಿಸಿದ್ದಾರೆ, ಆದರೆ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆ ಕೆಜಿಗೆ ರೂ 135 ರಿಂದ ರೂ 150 ರ ನಡುವೆ ಇದೆ.

ಪ್ರಸ್ತುತ, ಕೇರಳದಲ್ಲಿ ಸುಮಾರು 8 ಲಕ್ಷ ಕುಟುಂಬಗಳು ನೇರವಾಗಿ ರಬ್ಬರ್ ಕೃಷಿಯ ಮೇಲೆ ಅವಲಂಬಿತವಾಗಿವೆ, ಬಹುಪಾಲು ಸಣ್ಣ ಪ್ರಮಾಣದ ರೈತರು 4-5 ಎಕರೆವರೆಗೆ ಭೂಮಿಯನ್ನು ಹೊಂದಿದ್ದಾರೆ. ಈಚೆಗೆ ಧಾರಣೆ ಕುಸಿತ ಹಾಗೂ ಇಳುವರಿ ಕುಸಿತದ ಕಾರಣದಿಂದ ಟ್ಯಾಪಿಂಗ್‌ ಸಮಸ್ಯೆಯೂ ಇದೆ. ಈ ನಡುವೆ  ಕಾರ್ಮಿಕರ ಕೊರತೆಯಿಂದಾಗಿ ರಬ್ಬರ್ ಉದ್ಯಮವು ಸಂಕಷ್ಟಕ್ಕೆ ಸಿಲುಕಿದೆ. ಈಗಿನ ಮಾಹಿತಿ ಪ್ರಕಾರ ಒಟ್ಟು ರಬ್ಬರ್ ಕೃಷಿ ಭೂಮಿಯಲ್ಲಿ ಅರ್ಧದಷ್ಟು ಭೂಮಿಯನ್ನು ಟ್ಯಾಪಿಂಗ್‌ನಿಂದ ಕೈಬಿಡಲಾಗಿದೆ ಎಂದು ವರದಿಗಳು ಸೂಚಿಸುತ್ತವೆ. ಇದು ಸಾವಿರಾರು ಕಾರ್ಮಿಕರಿಗೆ ನಿರುದ್ಯೋಗಕ್ಕೂ ಕಾರಣವಾಗಿದೆ, ಕೃಷಿಕರಿಗೂ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ.

ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ಎನ್‌ಪಿಪಿ ಒತ್ತಾಯ ಹೇರಿದೆ, ರಬ್ಬರ್‌ನ ಬೆಂಬಲ ಬೆಲೆಯನ್ನು ಕೆಜಿಗೆ 300 ರೂ.ಗೆ ಹೆಚ್ಚಿಸುವುದು, ಸೇರಿದಂತೆ ಕೃಷಿಕರು ಎದುರಿಸುತ್ತಿರುವ ಸವಾಲುಗಳ ಕುರಿತು ಅಧ್ಯಯನ ನಡೆಸಿ ಸೂಕ್ತ ಪರಿಹಾರಗಳನ್ನು ರೂಪಿಸುವುದು ಹಾಗೂ ಕಾಡುಗಳ ಅಂಚಿನಲ್ಲಿರುವ ಕೃಷಿಕರು ಹಾಗೂ ಕೃಷಿ ಭೂಮಿಯ ಮೇಲೆ ಕಾಡು ಪ್ರಾಣಿಗಳ ದಾಳಿಯ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

The last few years have been  difficult situation for rubber growers. This year the weather has also been a problem for rubber growers. Now the rubber growers especially the small holders have been affected. In Kerala rubber growers are facing the threat of economic recession. Many are thinking of saying goodbye to rubber farming.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ದಾಖಲೆ: ಕಲಬುರಗಿ ಯುವ ರೈತನಿಗೆ ರಾಜ್ಯದ ಮೆಚ್ಚುಗೆ!

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…

9 hours ago

2026 ಮುಂಗಾರು ಮುನ್ಸೂಚನೆ – ಕೇರಳಕ್ಕೆ ನಿರೀಕ್ಷೆಗಿಂತ ಮುನ್ನವೇ ಆಗಮನ? – ಮಳೆ ಕಡಿಮೆಯಾಗುವ ಸಾಧ್ಯತೆ- ಕೃಷಿಗೆ ದೊಡ್ಡ ಸವಾಲು

2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…

12 hours ago

ಈರುಳ್ಳಿಯಲ್ಲಿ ಇಳುವರಿ ಹೆಚ್ಚಿಸುವ ರಹಸ್ಯ..! ಜೇನುನೊಣಗಳ ಪರಾಗಸ್ಪರ್ಶದಿಂದ ಡಬಲ್ ಲಾಭ

ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…

13 hours ago

ಗ್ರಾಮೀಣ ಜಾಲಕ್ಕೆ ನೆಟ್ವರ್ಕ್ ಬೂಸ್ಟ್‌ – ಬಿಎಸ್ಎನ್ಎಲ್ ಸುಧಾರಣೆಗೆ ಕೇಂದ್ರದ ಆದ್ಯತೆ

ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಸಂಪರ್ಕ ಒದಗಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ.

13 hours ago

ಜಾಗತಿಕ ತಾಪಮಾನಕ್ಕೆ ಪರಿಹಾರ : ವೃಕ್ಷ ಸಂವರ್ಧನೆಗೆ ಒತ್ತು

ಜಾಗತಿಕ ತಾಪಮಾನ ನಿಯಂತ್ರಣಕ್ಕೆ ವೃಕ್ಷ ಸಂವರ್ಧನೆ ಮುಖ್ಯ ಎಂದು ಸಚಿವ ಈಶ್ವರ ಖಂಡ್ರೆ…

13 hours ago

ಕೃಷಿಗೆ ಹೊಸ ದಿಕ್ಕು – ICAR ಟಾಸ್ಕ್ ಫೋರ್ಸ್ ಘೋಷಣೆ – ರೈತರ ಆದಾಯ ಹೆಚ್ಚಳಕ್ಕೆ ಪ್ಲಾನ್

ICAR ಕೃಷಿ ಕ್ಷೇತ್ರವನ್ನು ಬಲಪಡಿಸಲು ಸ್ಪೆಷಲ್ ಟಾಸ್ಕ್ ಫೋರ್ಸ್ ರಚಿಸಿದೆ. ಹವಾಮಾನ ಸವಾಲುಗಳಿಗೆ…

21 hours ago