Advertisement
The Rural Mirror ಕಾಳಜಿ

ಗ್ರಾಮೀಣಾಭಿವೃದ್ಧಿ ಕಡೆಗೆ ಹೆಜ್ಜೆ | ರೂರಲ್‌ ಮಿರರ್‌ ಕಾಳಜಿ | ನಿಮ್ಮೂರಲ್ಲಿ ಸಮಸ್ಯೆ ಇದೆಯೇ ತಡಮಾಡಬೇಡಿ – ಮಾತಾಡೋಣ |

Share

ದಕ್ಷಿಣ ಕನ್ನಡ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆ. ವಿವಿಧ ತಾಲೂಕುಗಳು ವೇಗದಿಂದ ಅಭಿವೃದ್ಧಿಯಾಗುತ್ತದೆ. ರಸ್ತೆ, ನೆಟ್ವರ್ಕ್‌, ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಕಡೆಗೆ ಹೆಜ್ಜೆ ಇಡುತ್ತಿದೆ. ಅಭಿವೃದ್ಧಿಯ ಕಲ್ಪನೆ ಬಂದಾಗ ಬೌದ್ಧಿಕವಾಗಿ ಹಾಗೂ ಬೌತಿಕವಾಗಿ ಎರಡೂ ಅಭಿವೃದ್ದಿಯಾದರೆ ಮಾತ್ರವೇ  ಊರು ಇನ್ನಷ್ಟು ಸುಂದರವಾಗಲಿದೆ. ರಸ್ತೆ, ನೆಟ್ವರ್ಕ್‌ , ಸೇತುವೆ, ವಿದ್ಯುತ್‌ ಈಗಿನ ಪ್ರಮುಖ ಬೇಡಿಕೆಯ ವಿಷಯವಾಗಿದೆ. ಅನೇಕ ವರ್ಷಗಳಿಂದ ವಿವಿಧ ಕಾರಣಗಳಿಂದ ಈ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಅದಕ್ಕಾಗಿ ಯಾರನ್ನೂ ದೂರಿಯೂ, ಟೀಕೆ ಮಾಡಿಯೂ ಪ್ರಯೋಜನ ಇಲ್ಲ. ನಮ್ಮ ಸಮಸ್ಯೆಗೆ ನಾವೇ ಕಾರಣರು. ನಾವು ಸಂಬಂಧಿತರಲ್ಲಿ ಹೇಳದೇ ಇದ್ದುದು, ಕೇಳದೇ ಇದ್ದುದೇ ಕಾರಣ. ಈಗ ನಾವು ಹೇಳಿಕೊಂಡರೆ ಮಾತ್ರವೇ ಪರಿಹಾರವೂ ಸಾಧ್ಯವಿದೆ. ಈಗಾಗಲೇ ಸಾಕಷ್ಟು ಮಂದಿ ರೂರಲ್‌ ಮಿರರ್‌ ಗೆ ತಮ್ಮೂರಿನ ಮೂಲಭೂತ ಸಮಸ್ಯೆಗಳ ಬಗ್ಗೆ ಫೋಟೊಗಳನ್ನು ಕಳುಹಿಸುತ್ತಿದ್ದಾರೆ, ತಮ್ಮ ಹೆಸರು ಪ್ರಕಟಿಸದಂತೆಯೂ ಮನವಿ ಮಾಡುತ್ತಾರೆ. ಹೀಗಾಗಿ ಎಲ್ಲವನ್ನೂ ಪ್ರಕಟಿಸಲು ಆಗುತ್ತಿಲ್ಲ. ಈಗ ಅಭಿಯಾನದ ರೂಪದಲ್ಲಿ ಇಂತಹ ವರದಿಗಳನ್ನು  ಮಾಡಬಹುದಾಗಿದೆ. ತನ್ನೂರಿನ ಮೂಲಭೂತ ಸಮಸ್ಯೆ ಪರಿಹಾರಕ್ಕೆ ಪ್ರಶ್ನೆ ಮಾಡುವುದೇ  ಗ್ರಾಮೀಣಾಭಿವೃದ್ಧಿಯ ಮೊದಲ ಹೆಜ್ಜೆ. ಇದಕ್ಕೆ ನಾವು ವೇದಿಕೆಯಾಗುತ್ತೇವೆ ಅಷ್ಟೇ.

Advertisement
Advertisement
Advertisement
Advertisement

ಮಹಾತ್ಮಾಗಾಂಧೀಜಿ ಅವರು ಹೇಳುವ ಕಲ್ಪನೆಯೂ ಅಭಿವೃದ್ಧಿಯ ಕಲ್ಪನೆಯೂ ಇದೇ  ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಕಲ್ಪನೆಗಳೂ ಸುಂದರವಾಗಿದೆ. ಇದಕ್ಕಾಗಿ ನಾವು ಗ್ರಾಮೀಣ ಭಾರತವನ್ನು ಇನ್ನಷ್ಟು ಗಟ್ಟಿ ಮಾಡುವ ಸಲುವಾಗಿ ಪುಟ್ಟದೊಂದು ಹೆಜ್ಜೆ ಇರಿಸೋಣ. ನಿಮ್ಮ ಊರಿನ ಗ್ರಾಮೀಣ ಸಮಸ್ಯೆಗಳು, ಎಷ್ಟೋ ವರ್ಷಗಳಿಂದ ಆಗದೇ ಇರುವ ರಸ್ತೆ, ಸೇತುವೆ, ನೆಟ್ವರ್ಕ್‌ ಸಮಸ್ಯೆಗಳ ಬಗ್ಗೆ ನಮಗೊಂದು ವಿಡಿಯೋ, ಫೋಟೋ ಸಹಿತ ವಿವರ ಕಳುಹಿಸಿಕೊಡಿ. ನಾವು ಬೆಳಕು ನೀಡುತ್ತಾ, ಎಲ್ಲೆಲ್ಲಿ ಏನಾಗಬೇಕಿದೆ ಎಂಬುದರ ಪಟ್ಟಿ ಮಾಡೋಣ, ಅದನ್ನು ಸಂಬಂಧಿತರ ಗಮನಕ್ಕೆ ತರೋಣ. ಹಾಗಿದ್ದರೆ ತಡವೇಕೆ ? ನಮ್ಮ ವಾಟ್ಸಪ್‌ ಸಂಖ್ಯೆಗೆ ಊರು, ಫೋಟೊ, ಪುಟ್ಟ ವಿಡಿಯೋ ಸಹಿತ ವಿವರ ಕನ್ನಡದಲ್ಲಿ ಬರೆದು ಕಳುಹಿಸಿ. ನಮ್ಮ ವಾಟ್ಸಪ್‌ ಸಂಖ್ಯೆ 9449125447 ಅಥವಾ 9880497447 ( ಯಾವುದೇ ಕಾರಣಕ್ಕೂ ಕರೆ ಮಾಡುವ ಅವಶ್ಯಕತೆ ಇಲ್ಲ )

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೇರಳದ ಕೆಲವು ಕಡೆ ತಾಪಮಾನ ಏರಿಕೆಯ ಎಚ್ಚರಿಕೆ | 3 ಡಿಗ್ರಿ ಏರಿಕೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ |

ಕೇರಳದ ಕೆಲವು ಪ್ರದೇಶಗಳಲ್ಲಿ ತಾಪಮಾನದಲ್ಲಿ ಗಣನೀಯ ಏರಿಕೆಯ ಬಗ್ಗೆ ಎಚ್ಚರಿಕೆ ನೀಡಿದೆ. ಮುಂದಿನ…

8 hours ago

ನಾಳೆ ಶಿವರಾತ್ರಿ | ಎಲ್ಲೆಲ್ಲೂ “ಶಿವೋಹಂ…ಶಿವೋಹಂ..” |

ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ…

9 hours ago

ಧರ್ಮಸ್ಥಳದಲ್ಲಿ ಪಾದಯಾತ್ರಿಗಳಿಗೆ ಸನ್ಮಾನ | ಪರಿಶುದ್ಧ ಭಕ್ತಿ ಮತ್ತು ದೃಢನಂಬಿಕೆಯಿಂದ ದೇವರ ಅನುಗ್ರಹ ಪ್ರಾಪ್ತಿ: ಡಿ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ “ಮಾತು ಬಿಡ ಮಂಜುನಾಥ” ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಮಾತೇ…

9 hours ago

ತುಂಬೆಯಲ್ಲಿ ನೇತ್ರಾವತಿ ನದಿಗೆ ಗಂಗಾಪೂಜೆ | ಅಣೆಕಟ್ಟಿನಲ್ಲಿ 6 ಮೀ ಆಳದವರೆಗೆ  ನೀರು ಸಂಗ್ರಹ |

ಮಂಗಳೂರು ಮಹಾನಗರಪಾಲಿಕೆ ವತಿಯಿಂದ ತುಂಬೆಯಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ನೇತ್ರಾವತಿ ನದಿಗೆ ಗಂಗಾ…

10 hours ago

ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು ಅಧಿಕ

ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…

23 hours ago

ಸರ್ಕಾರಿ ಬಸ್ ನಿರ್ವಾಹಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…

23 hours ago