Advertisement
The Rural Mirror ಕಾಳಜಿ

ಗ್ರಾಮೀಣಾಭಿವೃದ್ಧಿ ಕಡೆಗೆ ಹೆಜ್ಜೆ | ರೂರಲ್‌ ಮಿರರ್‌ ಕಾಳಜಿ | ನಿಮ್ಮೂರಲ್ಲಿ ಸಮಸ್ಯೆ ಇದೆಯೇ ತಡಮಾಡಬೇಡಿ – ಮಾತಾಡೋಣ |

Share

ದಕ್ಷಿಣ ಕನ್ನಡ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆ. ವಿವಿಧ ತಾಲೂಕುಗಳು ವೇಗದಿಂದ ಅಭಿವೃದ್ಧಿಯಾಗುತ್ತದೆ. ರಸ್ತೆ, ನೆಟ್ವರ್ಕ್‌, ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಕಡೆಗೆ ಹೆಜ್ಜೆ ಇಡುತ್ತಿದೆ. ಅಭಿವೃದ್ಧಿಯ ಕಲ್ಪನೆ ಬಂದಾಗ ಬೌದ್ಧಿಕವಾಗಿ ಹಾಗೂ ಬೌತಿಕವಾಗಿ ಎರಡೂ ಅಭಿವೃದ್ದಿಯಾದರೆ ಮಾತ್ರವೇ  ಊರು ಇನ್ನಷ್ಟು ಸುಂದರವಾಗಲಿದೆ. ರಸ್ತೆ, ನೆಟ್ವರ್ಕ್‌ , ಸೇತುವೆ, ವಿದ್ಯುತ್‌ ಈಗಿನ ಪ್ರಮುಖ ಬೇಡಿಕೆಯ ವಿಷಯವಾಗಿದೆ. ಅನೇಕ ವರ್ಷಗಳಿಂದ ವಿವಿಧ ಕಾರಣಗಳಿಂದ ಈ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಅದಕ್ಕಾಗಿ ಯಾರನ್ನೂ ದೂರಿಯೂ, ಟೀಕೆ ಮಾಡಿಯೂ ಪ್ರಯೋಜನ ಇಲ್ಲ. ನಮ್ಮ ಸಮಸ್ಯೆಗೆ ನಾವೇ ಕಾರಣರು. ನಾವು ಸಂಬಂಧಿತರಲ್ಲಿ ಹೇಳದೇ ಇದ್ದುದು, ಕೇಳದೇ ಇದ್ದುದೇ ಕಾರಣ. ಈಗ ನಾವು ಹೇಳಿಕೊಂಡರೆ ಮಾತ್ರವೇ ಪರಿಹಾರವೂ ಸಾಧ್ಯವಿದೆ. ಈಗಾಗಲೇ ಸಾಕಷ್ಟು ಮಂದಿ ರೂರಲ್‌ ಮಿರರ್‌ ಗೆ ತಮ್ಮೂರಿನ ಮೂಲಭೂತ ಸಮಸ್ಯೆಗಳ ಬಗ್ಗೆ ಫೋಟೊಗಳನ್ನು ಕಳುಹಿಸುತ್ತಿದ್ದಾರೆ, ತಮ್ಮ ಹೆಸರು ಪ್ರಕಟಿಸದಂತೆಯೂ ಮನವಿ ಮಾಡುತ್ತಾರೆ. ಹೀಗಾಗಿ ಎಲ್ಲವನ್ನೂ ಪ್ರಕಟಿಸಲು ಆಗುತ್ತಿಲ್ಲ. ಈಗ ಅಭಿಯಾನದ ರೂಪದಲ್ಲಿ ಇಂತಹ ವರದಿಗಳನ್ನು  ಮಾಡಬಹುದಾಗಿದೆ. ತನ್ನೂರಿನ ಮೂಲಭೂತ ಸಮಸ್ಯೆ ಪರಿಹಾರಕ್ಕೆ ಪ್ರಶ್ನೆ ಮಾಡುವುದೇ  ಗ್ರಾಮೀಣಾಭಿವೃದ್ಧಿಯ ಮೊದಲ ಹೆಜ್ಜೆ. ಇದಕ್ಕೆ ನಾವು ವೇದಿಕೆಯಾಗುತ್ತೇವೆ ಅಷ್ಟೇ.

ಮಹಾತ್ಮಾಗಾಂಧೀಜಿ ಅವರು ಹೇಳುವ ಕಲ್ಪನೆಯೂ ಅಭಿವೃದ್ಧಿಯ ಕಲ್ಪನೆಯೂ ಇದೇ  ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಕಲ್ಪನೆಗಳೂ ಸುಂದರವಾಗಿದೆ. ಇದಕ್ಕಾಗಿ ನಾವು ಗ್ರಾಮೀಣ ಭಾರತವನ್ನು ಇನ್ನಷ್ಟು ಗಟ್ಟಿ ಮಾಡುವ ಸಲುವಾಗಿ ಪುಟ್ಟದೊಂದು ಹೆಜ್ಜೆ ಇರಿಸೋಣ. ನಿಮ್ಮ ಊರಿನ ಗ್ರಾಮೀಣ ಸಮಸ್ಯೆಗಳು, ಎಷ್ಟೋ ವರ್ಷಗಳಿಂದ ಆಗದೇ ಇರುವ ರಸ್ತೆ, ಸೇತುವೆ, ನೆಟ್ವರ್ಕ್‌ ಸಮಸ್ಯೆಗಳ ಬಗ್ಗೆ ನಮಗೊಂದು ವಿಡಿಯೋ, ಫೋಟೋ ಸಹಿತ ವಿವರ ಕಳುಹಿಸಿಕೊಡಿ. ನಾವು ಬೆಳಕು ನೀಡುತ್ತಾ, ಎಲ್ಲೆಲ್ಲಿ ಏನಾಗಬೇಕಿದೆ ಎಂಬುದರ ಪಟ್ಟಿ ಮಾಡೋಣ, ಅದನ್ನು ಸಂಬಂಧಿತರ ಗಮನಕ್ಕೆ ತರೋಣ. ಹಾಗಿದ್ದರೆ ತಡವೇಕೆ ? ನಮ್ಮ ವಾಟ್ಸಪ್‌ ಸಂಖ್ಯೆಗೆ ಊರು, ಫೋಟೊ, ಪುಟ್ಟ ವಿಡಿಯೋ ಸಹಿತ ವಿವರ ಕನ್ನಡದಲ್ಲಿ ಬರೆದು ಕಳುಹಿಸಿ. ನಮ್ಮ ವಾಟ್ಸಪ್‌ ಸಂಖ್ಯೆ 9449125447 ಅಥವಾ 9880497447 ( ಯಾವುದೇ ಕಾರಣಕ್ಕೂ ಕರೆ ಮಾಡುವ ಅವಶ್ಯಕತೆ ಇಲ್ಲ )

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…

2 hours ago

ಗ್ರಾಮೀಣ ಭಾರತದ ಆದಾಯಕ್ಕೆ ಹಿನ್ನಡೆ – ಕಳೆದ ವರ್ಷ ಅರ್ಧದಷ್ಟು ಕುಟುಂಬಗಳ ಆದಾಯದಲ್ಲಿ ಏರಿಕೆಯಾಗಿಲ್ಲ

ನಬಾರ್ಡ್ ಸಮೀಕ್ಷೆಯ ಪ್ರಕಾರ, ಭಾರತದ ಗ್ರಾಮೀಣ ಕುಟುಂಬಗಳ ಪೈಕಿ ಶೇ.53ರಷ್ಟು ಕುಟುಂಬಗಳ ಆದಾಯ…

8 hours ago

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್‌ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…

17 hours ago

ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ

ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…

18 hours ago

ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ ; ಔಷಧಿಗಿಂತ ಉತ್ತಮ ಜೀವನಶೈಲಿಯೇ ಪರಿಹಾರ: ರಾಘವೇಶ್ವರ ಶ್ರೀ

ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…

19 hours ago