Advertisement
MIRROR FOCUS

Women’s Day | ಗ್ರಾಮೀಣ ಭಾಗದ ಸ್ವಾಭಿಮಾನಿ ಮಹಿಳೆ | 2 ಎಕೆರೆ ಜಮೀನಿನಲ್ಲಿ ಸಮಗ್ರ ಕೃಷಿ |

Share

ಗ್ರಾಮೀಣ ಭಾಗದಲ್ಲಿ ಅನೇಕ ಮಹಿಳೆಯರು ಹಲವಾರು ಸಂಕಷ್ಟಗಳ ನಡುವೆಯೂ ಸ್ವಾಭಿಮಾನಿಯಾಗಿ ಬದುಕುತ್ತಾರೆ. ಮನೆ ನಿರ್ವಹಣೆ, ಆರ್ಥಿಕ ನಿರ್ವಹಣೆ , ಕೃಷಿ ನಿರ್ವಹಣೆ ಇದೆಲ್ಲವೂ ಮಹಿಳೆಯೇ ನಿರ್ವಹಿಸಬೇಕಾದ ಸಂದರ್ಭ ಇರುತ್ತದೆ. ರೈತ ಹೇಗೆ ದೇಶದ ಬೆನ್ನೆಲುಬಾಗಿದ್ದಾನೆಯೋ, ಮಹಿಳೆ ಪ್ರತೀ ಕುಟುಂಬದ ಬೆನ್ನೆಲುಬೂ ಹೌದು. ಅಂತಹ ಮಾದರಿ ಮಹಿಳೆಯೊಬ್ಬರು ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಗಿರಿಜ.

ಗಿರಿಜ

ಅಜ್ಜಾವರದ ಮಹಿಳೆ ಗಿರಿಜ. ಸಮಾಜದ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗ ಮಹಿಳೆ ಎಂದು ಕರೆಯಲ್ಪಡುವ ಕುಟುಂಬ ಇದು. ಆದರೆ ಸ್ವಾಭಿಮಾನದ ಬದುಕಿನಲ್ಲಿ ಎಲ್ಲರೊಂದಿಗೆ ನಿಲ್ಲುವ ಮಹಿಳೆ ಗಿರಿಜ. ತನ್ನ ಎರಡು ಎಕ್ರೆ ಜಮೀನಿನಲ್ಲಿ ಅಡಿಕೆ, ಕಾಳುಮೆಣಸು, ಕೊಕೋ, ಗೇರು, ಬಾಳೆ, ತೆಂಗು ಸಹಿತ ಸಮಗ್ರ ಕೃಷಿಯನ್ನು ಮಾಡುತ್ತಿದ್ದಾರೆ. ಕಳೆದ ವರ್ಷ ಇವರ ಪತಿ ತೀರಿಕೊಂಡ ನಂತರ ಇಡೀ ಕುಟುಂಬದ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದಾರೆ. ಮಗನಿಗೆ ಸಮೀಪದಲ್ಲಿಯೇ ಆಸ್ತಿ ನೀಡಿದ್ದಾರೆ, ವಿಧವೆ ಮಹಿಳೆ ಹಾಗೂ ಅವರ ಮಕ್ಕಳ ಜೊತೆಗೆ ಇಡೀ ಕುಟುಂಬ ನಿರ್ವಗಣೆ ಮಾಡುತ್ತಿದ್ದಾರೆ. ಕಾಳುಮೆಣಸು ಕೃಷಿ ಅನೇಕ ವರ್ಷಗಳಿಂದಲೂ ಇದೆ. ಈ ಕಾಳುಮೆಣಸು ಇವರ ಬದುಕಿನ ಕೈ ಹಿಡಿದಿದೆ. ಆರ್ಥಿಕವಾದ ಆದಾಯಕ್ಕೂ ಕಾರಣವಾಗಿದೆ. ಕೃಷಿ ಸಾಲ ಹೊರತುಪಡಿಸಿ ಇತರ ಯಾವುದೇ ಸಾಲ ಇಲ್ಲದೆ ಯಶಸ್ವಿ ಬದುಕನ್ನು ನಡೆಸುತ್ತಿದ್ದಾರೆ ಗಿರಿಜ.

ಕಳೆದ ವರ್ಷದವರೆಗೆ ಎರಡು-ಮೂರು ದನಗಳನ್ನು ಸಾಕಿ ಡೈರಿಗೆ ಹಾಲನ್ನೂ ಹಾಕುತ್ತಿದ್ದ ಗಿರಿಜ, ಬೆಳಗಿನಿಂದ ಇಡೀ ಕೆಲಸ ಮಾಡಿ, ಪಶುಪಾಲನೆ ಮಾಡಿ ಬಳಿಕ ದುಡಿಮೆಗೂ ತೆರಳುತ್ತಿದ್ದ ಗಿರಿಜ ಸಂಜೆ ಮನೆಗೆ ಬಂದು ತೋಟದ ಕೆಲಸವನ್ನೂ ಮಾಡುತ್ತಿದ್ದರು. ಇದೀಗ ಪತಿ ತೀರಿಕೊಂಡ ಬಳಿಕ ಹೈನುಗಾರಿಕೆಗೆ ವಿರಾಮ ನೀಡಿದ್ದಾರೆ. ತೋಟದ ಕೆಲಸವನ್ನು ಮುಂದುವರಿಸಿದ್ದರು, ಗಿರಿಜ ಅವರ ಮಕ್ಕಳೂ ಕೃಷಿಗೆ ಸಾತ್‌  ನೀಡುತ್ತಿದ್ದಾರೆ. ಕಾಳುಮೆಣಸು ಕೊಯ್ಯಲು ಬೇರೆಯವರನ್ನೂ ಕೂಡಾ ಕಾರ್ಮಿಕರಾಗಿ ಕರೆಯುತ್ತಾರೆ. ಸದ್ಯ ವರ್ಷಕ್ಕೆ ಎರಡು ಕ್ವಿಂಟಾಲ್‌ ಕಾಳುಮೆಣಸು ಆಗುತ್ತಿದೆ. ಸಹಜ , ಸಾವಯವ ಮಾದರಿಯ ಕೃಷಿಯನ್ನೇ ಮುಂದುವರಿಸುತ್ತಿದ್ದಾರೆ ಗಿರಿಜ.

ಮಹಿಳಾ ದಿನಾಚರಣೆಯಂದು ಸಾವಿರಾರು ಮಹಿಳೆಯರನ್ನು ಗುರುತಿಸುವ ವೇಳೆ ಸ್ವಾಭಿಮಾನಿಯಾಗಿ ಬೆಳೆದ ಗ್ರಾಮೀಣ ಭಾಗದ ಸಾವಿರಾರು ಮಹಿಳೆಯರ ಶ್ರಮವನ್ನು ನೆನಪಿಸಿಕೊಳ್ಳುತ್ತಾ ದ ರೂರಲ್‌ ಮಿರರ್‌.ಕಾಂ ಗಿರಿಜ ಅವರ ಪರಿಚಯ ಮಾಡಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

16 hours ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

1 day ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

1 day ago

ರಸಗೊಬ್ಬರದಲ್ಲಿ ಆತ್ಮನಿರ್ಭರತೆ ಅನಿವಾರ್ಯ – ಸಂಕಷ್ಟದಿಂದ ಅವಕಾಶದತ್ತ ಭಾರತ ಸಾಗಬೇಕಿದೆ

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…

1 day ago

ಹವಾಮಾನ ವರದಿ | 24-07-2026 | ಕರಾವಳಿಯಲ್ಲಿ ಮುಂದುವರಿಯುವ ಮಳೆ, ಜುಲೈ ಅಂತ್ಯದ ವೇಳೆಗೆ ಮುಂಗಾರು ಹೇಗೆ..?

ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…

1 day ago