ಹಿಂದೂ ಧರ್ಮಕ್ಕೆ ತಲೆಬಾಗಿದ ರಷ್ಯನ್ ಪ್ರಜೆಗಳು | ಮತಾಂತರಗೊಂಡು ರಾಜ್ಯದ ಧಾರ್ಮಿಕ ಸ್ಥಳಗಳಿಗೆ ಭೇಟಿ | ಹನುಮನ ಜನ್ಮ ಸ್ಥಳದಲ್ಲಿ ದೀಪಾವಳಿ ಆಚರಣೆಯಿಲ್ಲ| ಬೇಸರಿಸಿದ ಧರ್ಮಾನುಯಾಯಿಗಳು.. |

November 18, 2023
12:26 PM
ಭಾರತೀಯ ಸಂಸ್ಕೃತಿಯನ್ನು ಮೆಚ್ಚಿ ರಷ್ಯಾ ಮೂಲದ ಪ್ರಜೆಗಳು ಹಿಂದೂ ಧರ್ಮಕ್ಕೆ ಸೇರ್ಪಡೆಗೊಂಡಿದ್ದಾರೆ. ಮಾತ್ರವಲ್ಲದೇ ಹಿಂದೂ ಧರ್ಮದ ಹೆಸರಿಟ್ಟುಕೊಂಡು ಹನುಮನ ನಾಡು ಕೊಪ್ಪಳಕ್ಕೆ ಭೇಟಿ ನೀಡಿದ್ದಾರೆ.

ನಮ್ಮ ದೇಶದ ಸಂಸ್ಕೃತಿ ಅಂದ್ರೆನೇ ಹಾಗೆ. ಯಾವತ್ತೂ ಸಕಾರಾತ್ಮಕ. ಆಂತರಿಕ ಬೆಳವಣಿಗೆಗೆ ಆದ್ಯತೆ. ಹಾಗಾಗಿ ತಲೆ ಭಾಗದವರೇ ಇಲ್ಲ.  ಅದರಲ್ಲಿರುವ ವೈವಿಧ್ಯತೆ, ಶಾಂತಿ, ನೆಮ್ಮದಿ, ವಿವೇಕಕ್ಕೆ ಮಹತ್ವ ಇದೆ. . ಇದಕ್ಕಾಗಿ ವಿದೇಶಿಗರು(Foreigner) ಹಿಂದೂ ಧರ್ಮಕ್ಕೆ ಇತ್ತೀಚೆಗೆ ಮತಾಂತರಗೊಳ್ಳುತ್ತಿರುವುದು ನಡೆಯುತ್ತಿದೆ. ಇತ್ತೀಚೆಗೆ  ಭಾರತೀಯ ಸಂಸ್ಕೃತಿಯನ್ನು (Indian Culture) ಮೆಚ್ಚಿ ರಷ್ಯಾ (Russia) ಮೂಲದ ಪ್ರಜೆಗಳು ಹಿಂದೂ ಧರ್ಮಕ್ಕೆ (Hinduism) ಸೇರ್ಪಡೆಗೊಂಡಿದ್ದಾರೆ. ಮಾತ್ರವಲ್ಲದೇ ಹಿಂದೂ ಧರ್ಮದ ಹೆಸರಿಟ್ಟುಕೊಂಡು ಹನುಮನ ನಾಡು ಕೊಪ್ಪಳಕ್ಕೆ (Koppal) ಭೇಟಿ ನೀಡಿದ್ದಾರೆ.

ರಷ್ಯನ್ ಪ್ರಜೆಗಳಾದ ಮೀನಾಕ್ಷಿಗಿರಿ, ಗಂಗಾ ಹಾಗೂ ಸರಸ್ವತಿ ಹಿಂದೂ ಧರ್ಮಕ್ಕೆ ಸೇರ್ಪಡೆಯಾದ ಪ್ರಜೆಗಳು. ಈ ಮೂವರು ಖಾವಿ ಧರಿಸಿ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಅದೇ ರೀತಿ ಕೊಪ್ಪಳ ಜಿಲ್ಲೆಯ ಹನುಮನ ಜನ್ಮ ಸ್ಥಳ ಅಂಜನಾದ್ರಿಗೆ (Anjanadri) ಬಂದು ದರ್ಶನ ಪಡೆದಿದ್ದಾರೆ. ಇವರು ಹಂಪಿ-ಆನೆಗೊಂದಿ, ಅಂಜನಾದ್ರಿ ಸೇರಿದಂತೆ ದೇಶದ ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭ ಪುರಾಣ ಪವಿತ್ರ ಸ್ಥಳದಲ್ಲಿ ದೀಪ ಹಚ್ಚಲು ಆಗಲ್ವಾ ಎಂದು ಕರ್ನಾಟಕ ಸರ್ಕಾರದ ಮೇಲೆ ವಿದೇಶಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದೂ ಧರ್ಮ ಸ್ವೀಕರಿಸಿ ಕೊಪ್ಪಳದ ಅಂಜನಾದ್ರಿ ಪರ್ವತಕ್ಕೆ ಬಂದ ರಷ್ಯನ್ ಪ್ರಜೆಗಳು ದೇಶದಲ್ಲಿ ಎಲ್ಲಾ ಕಡೆ ದೀಪಾವಳಿ (Deepavali) ನಡೆಯುತ್ತಿದೆ. ಪುಣ್ಯಭೂಮಿಯಲ್ಲಿ ಬೆಳಕಿಲ್ಲ. ಹನುಮನ ಜನ್ಮ ಸ್ಥಳದಲ್ಲಿ ದೀಪಾವಳಿ ಆಚರಣೆ ಇಲ್ಲವೆಂದು ಅಸಮಾಧಾನಗೊಂಡಿದ್ದಾರೆ. ಭಕ್ತರಿಂದ ಕೋಟಿಗಟ್ಟಲೆ ಆದಾಯ ಪಡೆದರೂ ಸರ್ಕಾರ ಯಾಕಿಷ್ಟು ನಿರ್ಲಕ್ಷ್ಯ ತೋರುತ್ತಿದೆ. ಇದು ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಆಂಜನೇಯ ದೇವಸ್ಥಾನ. ಸನಾತನ ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

Citizens of Russian origin have joined Hinduism after appreciating Indian culture. Not only that, he visited Koppal, the land of Hanuman, in the name of Hinduism. Russian citizens such as Meenakshigiri, Ganga and Saraswati were converted to Hinduism. These three are visiting a religious place wearing khaki. Similarly, they came to Anjanadri, the birth place of Hanuman in Koppal district and had darshan. He has visited various religious places of the country including Hampi-Anegondi, Anjanadri.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ
ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ
March 23, 2026
9:12 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror