ಸಾಗರಗಳ ರಕ್ಷಣಗೆ ನಿರ್ಧಾರ | ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳ ಒಕ್ಕೊರಲ ಒಪ್ಪಂದ |

March 6, 2023
4:56 PM

ವಿಶ್ವದ ಸಾಗರಗಳು ಮತ್ತು ಅವುಗಳಲ್ಲಿ ವಾಸಿಸುವ ಜೀವರಾಶಿ ರಕ್ಷಿಸಲು ಭಾರತ ಸೇರಿದಂತೆ 200 ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳು ಐತಿಹಾಸಿಕ ಒಪ್ಪಂದ ಮಾಡಿಕೊಂಡಿವೆ. ಶೇ.60 ರಷ್ಟು ಭೂ ಮೇಲ್ಮೈ ಆವರಿಸಿರುವ, ಹವಾಮಾನವನ್ನು ನಿಯಂತ್ರಿಸುವ ಮತ್ತು ನಾವು ಉಸಿರಾಡುವ ಅರ್ಧದಷ್ಟು  ಆಮ್ಲ ಜನಕ  ಉತ್ಪಾದಿಸುವ ಎತ್ತರದ ಸಮುದ್ರಗಳನ್ನು ರಕ್ಷಿಸಲು ಇದು ಮೊದಲ ಅಂತಾರಾಷ್ಟ್ರೀಯ ಒಪ್ಪಂದವಾಗಿದೆ.

Advertisement
Advertisement

ಸಾಮಾನ್ಯವಾಗಿ ಎತ್ತರದ ಸಮುದ್ರಗಳು ದೇಶಗಳ ವಿಶೇಷ ಆರ್ಥಿಕ ವಲಯಗಳ ಗಡಿಯಲ್ಲಿ ಪ್ರಾರಂಭವಾಗುತ್ತವೆ ಮತ್ತು ಯಾವುದೇ ದೇಶದ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ.  2030 ರ ವೇಳೆಗೆ ಶೇ.30 ರಷ್ಟು ಎತ್ತರದ ಸಮುದ್ರಗಳ ‘ನೀರನ್ನು ಸಂರಕ್ಷಿಸಲು ಮತ್ತು ಮುಂದಿನ ಮಾತುಕತೆಗಳಿಗಾಗಿ ರಾಷ್ಟ್ರಗಳ ಸಮ್ಮೇಳನ ಆಯೋಜನೆಗೆ ನೆರವಾಗುವುದು ಈ ಒಪ್ಪಂದದ ಗುರಿಯಾಗಿದೆ. ಸಂರಕ್ಷಿತ ನೀರು ಎಂದರೆ ಮೀನುಗಾರಿಕೆ, ಹಡಗುಗಳ ಯಾವ ಮಾರ್ಗ ಬಳಸಬಹುದು ಮತ್ತು  ಆಳವಾದ ಸಮುದ್ರದ ಗಣಿಗಾರಿಕೆಯಂತಹ ಪರಿಶೋಧನಾ ಚಟುವಟಿಕೆಗಳ ಮೇಲೆ ನಿರ್ಬಂಧಗಳು ಇರುತ್ತವೆ.

2007ರಲ್ಲಿ ಆರಂಭವಾದ ಮಾತುಕತೆ ಕೊನೆಯ ಕ್ಷಣದವರೆಗೂ ಭಿನ್ನಾಭಿಪ್ರಾಯಗಳಿಂದ ಅಡ್ಡಿಯಾಗಿತ್ತು. ಸ್ಪಂಜುಗಳು, ಕ್ರಿಲ್, ಹವಳಗಳು, ಕಡಲಕಳೆಗಳು, ಬ್ಯಾಕ್ಟೀರಿಯಾ ಮತ್ತು ಖನಿಜಗಳಂತಹ ಆಳ ಸಮುದ್ರದಲ್ಲಿ ವ್ಯಾಪಕವಾಗಿ ಲಭ್ಯವಿರುವ ಸಮುದ್ರದ  ಸಂಪನ್ಮೂಲಗಳನ್ನು ಹೇಗೆ ಹಂಚಿಕೊಳ್ಳುವುದು ಎಂಬುದು ಒಂದು ಪ್ರಮುಖ ಎಡವಟ್ಟಾಗಿತ್ತು.

ಕೈಗಾರಿಕೀಕರಣಗೊಂಡ ರಾಷ್ಟ್ರಗಳು  ಔಷಧಗಳು, ಸೌಂದರ್ಯವರ್ಧಕಗಳು, ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳ ತಯಾರಿಕೆ ಮತ್ತು ಇತರ ಕೈಗಾರಿಕಾ ಉದ್ದೇಶಗಳಿಗಾಗಿ ಈ ಸಂಪನ್ಮೂಲಗಳನ್ನು ಗುರಿ ಮಾಡಿಕೊಂಡಿದ್ದವು. ಈ ಒಪ್ಪಂದವು ಮೀನುಗಾರಿಕೆ, ಹಡಗು ಮತ್ತು ಸಂಶೋಧನೆಯ ಮೇಲೆ ಎಲ್ಲಾ ದೇಶಗಳಿಗೆ ಸಮಾನ ಹಕ್ಕುಗಳನ್ನು ನೀಡುತ್ತದೆ.

ಸಮುದ್ರದ ಕಾನೂನಿನ ಕುರಿತಾದ ಮೊದಲ ಯುಎನ್ ಸಮಾವೇಶದಲ್ಲಿಯೇ ಸುಮಾರು 40 ವರ್ಷಗಳ ಹಿಂದೆ ಸಹಿ ಹಾಕಲಾಗಿತ್ತು.  ಇದು ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಪ್ರತಿ ದೇಶವು ಸಂಪನ್ಮೂಲಗಳ ಮೇಲೆ ಕಣ್ಣಿಟ್ಟಿರುವ  ಸನ್ನಿವೇಶವನ್ನು ಪರಿಹರಿಸಲಿಲ್ಲ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿಯ ನಿರ್ದೇಶಕ ಜಿ ಎ ರಾಮದಾಸ್ ಹೇಳಿದರು. .

Advertisement

ಭಾರತೀಯ ನಿಯೋಗ:  ಈ ಒಪ್ಪಂದ ವೇಳೆ  ಸೆಂಟರ್ ಫಾರ್ ಮೆರೈನ್ ಲಿವಿಂಗ್ ರಿಸೋರ್ಸಸ್ ಅಂಡ್ ಇಕಾಲಜಿಯ ನಿಯೋಗವು ಭಾರತವನ್ನು ಪ್ರತಿನಿಧಿಸಿದೆ ಎಂದು ಅದರ ನಿರ್ದೇಶಕ ಡಾ ಜಿ ವಿ ಎಂ ಗುಪ್ತಾ ಈ ಪತ್ರಿಕೆಗೆ ತಿಳಿಸಿದ್ದಾರೆ.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಾಜ್ಯದ ಮಾವು ಬೆಳೆಗಾರರ ನೆರವಿಗೆ ಮನವಿ | 3 ಲಕ್ಷ ಸಿಬ್ಬಂದಿಗಳಿಗೆ ನಗದುರಹಿತ  ಆರೋಗ್ಯ ಯೋಜನೆ | ರಾಜ್ಯದ ದುರ್ಗಮ ಪ್ರದೇಶಗಳಿಗೆ ಸಂಚಾರಿ ಆರೋಗ್ಯ ಘಟಕ |
June 19, 2025
10:59 PM
by: The Rural Mirror ಸುದ್ದಿಜಾಲ
ಭಾರತದ ಕಾಫಿ ರಫ್ತು ಶೇಕಡ 40 ರಷ್ಟು ವೃದ್ಧಿ | ಒಡಿಶಾ, ಈಶಾನ್ಯ ರಾಜ್ಯಗಳಲ್ಲಿ ಕಾಫಿ ಬೆಳೆಯುವ ಬಗ್ಗೆ ಪ್ರಯೋಗ
June 19, 2025
10:48 PM
by: The Rural Mirror ಸುದ್ದಿಜಾಲ
ಏಕೆ ಕೆಲವು ಹಿಂಡಿ ದನಗಳಿಗೆ ಹಿಡಿಸುವುದಿಲ್ಲ…?
June 19, 2025
9:51 PM
by: ಎ ಪಿ ಸದಾಶಿವ ಮರಿಕೆ
ಒಂದು ಮೊಟ್ಟೆಯ ಕತೆ | ಮಕ್ಕಳಿಗೆ ಸರ್ಕಾರ ನೀಡುವ ಮೊಟ್ಟೆ ಶಿಕ್ಷಕರಿಗೆ ತಲೆನೋವು ಏಕೆ..?
June 19, 2025
9:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group