ಸುದ್ದಿಗಳು

ಸಾಗರಗಳ ರಕ್ಷಣಗೆ ನಿರ್ಧಾರ | ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳ ಒಕ್ಕೊರಲ ಒಪ್ಪಂದ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ವಿಶ್ವದ ಸಾಗರಗಳು ಮತ್ತು ಅವುಗಳಲ್ಲಿ ವಾಸಿಸುವ ಜೀವರಾಶಿ ರಕ್ಷಿಸಲು ಭಾರತ ಸೇರಿದಂತೆ 200 ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳು ಐತಿಹಾಸಿಕ ಒಪ್ಪಂದ ಮಾಡಿಕೊಂಡಿವೆ. ಶೇ.60 ರಷ್ಟು ಭೂ ಮೇಲ್ಮೈ ಆವರಿಸಿರುವ, ಹವಾಮಾನವನ್ನು ನಿಯಂತ್ರಿಸುವ ಮತ್ತು ನಾವು ಉಸಿರಾಡುವ ಅರ್ಧದಷ್ಟು  ಆಮ್ಲ ಜನಕ  ಉತ್ಪಾದಿಸುವ ಎತ್ತರದ ಸಮುದ್ರಗಳನ್ನು ರಕ್ಷಿಸಲು ಇದು ಮೊದಲ ಅಂತಾರಾಷ್ಟ್ರೀಯ ಒಪ್ಪಂದವಾಗಿದೆ.

Advertisement
Advertisement

ಸಾಮಾನ್ಯವಾಗಿ ಎತ್ತರದ ಸಮುದ್ರಗಳು ದೇಶಗಳ ವಿಶೇಷ ಆರ್ಥಿಕ ವಲಯಗಳ ಗಡಿಯಲ್ಲಿ ಪ್ರಾರಂಭವಾಗುತ್ತವೆ ಮತ್ತು ಯಾವುದೇ ದೇಶದ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ.  2030 ರ ವೇಳೆಗೆ ಶೇ.30 ರಷ್ಟು ಎತ್ತರದ ಸಮುದ್ರಗಳ ‘ನೀರನ್ನು ಸಂರಕ್ಷಿಸಲು ಮತ್ತು ಮುಂದಿನ ಮಾತುಕತೆಗಳಿಗಾಗಿ ರಾಷ್ಟ್ರಗಳ ಸಮ್ಮೇಳನ ಆಯೋಜನೆಗೆ ನೆರವಾಗುವುದು ಈ ಒಪ್ಪಂದದ ಗುರಿಯಾಗಿದೆ. ಸಂರಕ್ಷಿತ ನೀರು ಎಂದರೆ ಮೀನುಗಾರಿಕೆ, ಹಡಗುಗಳ ಯಾವ ಮಾರ್ಗ ಬಳಸಬಹುದು ಮತ್ತು  ಆಳವಾದ ಸಮುದ್ರದ ಗಣಿಗಾರಿಕೆಯಂತಹ ಪರಿಶೋಧನಾ ಚಟುವಟಿಕೆಗಳ ಮೇಲೆ ನಿರ್ಬಂಧಗಳು ಇರುತ್ತವೆ.

2007ರಲ್ಲಿ ಆರಂಭವಾದ ಮಾತುಕತೆ ಕೊನೆಯ ಕ್ಷಣದವರೆಗೂ ಭಿನ್ನಾಭಿಪ್ರಾಯಗಳಿಂದ ಅಡ್ಡಿಯಾಗಿತ್ತು. ಸ್ಪಂಜುಗಳು, ಕ್ರಿಲ್, ಹವಳಗಳು, ಕಡಲಕಳೆಗಳು, ಬ್ಯಾಕ್ಟೀರಿಯಾ ಮತ್ತು ಖನಿಜಗಳಂತಹ ಆಳ ಸಮುದ್ರದಲ್ಲಿ ವ್ಯಾಪಕವಾಗಿ ಲಭ್ಯವಿರುವ ಸಮುದ್ರದ  ಸಂಪನ್ಮೂಲಗಳನ್ನು ಹೇಗೆ ಹಂಚಿಕೊಳ್ಳುವುದು ಎಂಬುದು ಒಂದು ಪ್ರಮುಖ ಎಡವಟ್ಟಾಗಿತ್ತು.

ಕೈಗಾರಿಕೀಕರಣಗೊಂಡ ರಾಷ್ಟ್ರಗಳು  ಔಷಧಗಳು, ಸೌಂದರ್ಯವರ್ಧಕಗಳು, ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳ ತಯಾರಿಕೆ ಮತ್ತು ಇತರ ಕೈಗಾರಿಕಾ ಉದ್ದೇಶಗಳಿಗಾಗಿ ಈ ಸಂಪನ್ಮೂಲಗಳನ್ನು ಗುರಿ ಮಾಡಿಕೊಂಡಿದ್ದವು. ಈ ಒಪ್ಪಂದವು ಮೀನುಗಾರಿಕೆ, ಹಡಗು ಮತ್ತು ಸಂಶೋಧನೆಯ ಮೇಲೆ ಎಲ್ಲಾ ದೇಶಗಳಿಗೆ ಸಮಾನ ಹಕ್ಕುಗಳನ್ನು ನೀಡುತ್ತದೆ.

ಸಮುದ್ರದ ಕಾನೂನಿನ ಕುರಿತಾದ ಮೊದಲ ಯುಎನ್ ಸಮಾವೇಶದಲ್ಲಿಯೇ ಸುಮಾರು 40 ವರ್ಷಗಳ ಹಿಂದೆ ಸಹಿ ಹಾಕಲಾಗಿತ್ತು.  ಇದು ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಪ್ರತಿ ದೇಶವು ಸಂಪನ್ಮೂಲಗಳ ಮೇಲೆ ಕಣ್ಣಿಟ್ಟಿರುವ  ಸನ್ನಿವೇಶವನ್ನು ಪರಿಹರಿಸಲಿಲ್ಲ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿಯ ನಿರ್ದೇಶಕ ಜಿ ಎ ರಾಮದಾಸ್ ಹೇಳಿದರು. .

Advertisement

ಭಾರತೀಯ ನಿಯೋಗ:  ಈ ಒಪ್ಪಂದ ವೇಳೆ  ಸೆಂಟರ್ ಫಾರ್ ಮೆರೈನ್ ಲಿವಿಂಗ್ ರಿಸೋರ್ಸಸ್ ಅಂಡ್ ಇಕಾಲಜಿಯ ನಿಯೋಗವು ಭಾರತವನ್ನು ಪ್ರತಿನಿಧಿಸಿದೆ ಎಂದು ಅದರ ನಿರ್ದೇಶಕ ಡಾ ಜಿ ವಿ ಎಂ ಗುಪ್ತಾ ಈ ಪತ್ರಿಕೆಗೆ ತಿಳಿಸಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಫಸಲ್ ಭೀಮಾ ಯೋಜನೆ ಹಣ ಬಿಡುಗಡೆ | ಕಲಬುರಗಿ ಜಿಲ್ಲೆಗೆ ಹೆಚ್ಚಿನ ಬೆಳೆ ವಿಮೆ

ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆಯಡಿ ಅತಿ ಹೆಚ್ಚು ಬೆಳೆ ವಿಮೆ ಪಡೆದ…

4 hours ago

ಲಡಾಖ್‌ನ ದ್ರಾಸುದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ| ವೀರಯೋಧರಿಗೆ ಪಾದಯಾತ್ರೆ ಮೂಲಕ ಗೌರವ

ಲಡಾಖ್‌ನ ದ್ರಾಸುದಲ್ಲಿಂದು  26ನೇ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ   ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ…

4 hours ago

ಬದುಕಿಗೆ ಧರ್ಮದ ತಳಹದಿ ಅಗತ್ಯ : ರಾಘವೇಶ್ವರ ಶ್ರೀ

ಧರ್ಮ ಎನ್ನುವ ತಳಹದಿಯಲ್ಲಿ ಬದುಕು ನಿಂತಿದೆ. ಅರ್ಥ ಮತ್ತು ಕಾಮನೆಗಳಿಗೆ ಧರ್ಮವೇ ತಳಹದಿ.…

6 hours ago

ಹವಾಮಾನ ವರದಿ | 26-07-2025 | ಜುಲೈ ಅಂತ್ಯದವರೆಗೂ ಸಾಮಾನ್ಯ ಮಳೆ | ಕಾರಣ ಏನು ?

ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಜುಲೈ 27 ರಂದು ಮಧ್ಯಪ್ರದೇಶ ದಾಟಿ ರಾಜಸ್ಥಾನ ಗಡಿ…

8 hours ago

ಹವಾಮಾನ ಸಂಕಷ್ಟ | ಆಹಾರ ಬೆಲೆಗಳ ಏರಿಳಿತಕ್ಕೆ ಕಾರಣ ಏನು ? – ಅಧ್ಯಯನ ವರದಿ

ಭಾರತದಲ್ಲಿ, ಮೇ ತಿಂಗಳಿನಲ್ಲಿ ಉಂಟಾದ ತೀವ್ರ ಉಷ್ಣತೆಯು ಬೆಳೆ ಇಳುವರಿ ಮತ್ತು ಪೂರೈಕೆ…

11 hours ago

ಗಂಡ-ಹೆಂಡತಿ ಸಂಬಂಧವು ಜೀವನದ ಅತ್ಯಂತ ಗಾಢವಾದ ಮತ್ತು ಆಧ್ಯಾತ್ಮಿಕ ಬಂಧ

ಗಂಡ-ಹೆಂಡತಿ ಸಂಬಂಧವು ಜೀವನದ ಅತ್ಯಂತ ಗಾಢವಾದ ಮತ್ತು ಆಧ್ಯಾತ್ಮಿಕ ಬಂಧವಾಗಿದೆ. ಜ್ಯೋತಿಷ್ಯ ಶಾಸ್ತ್ರದ…

12 hours ago