“ಸಹ್ಯಾದ್ರಿ ಸಿಂಧೂರ” | ಶಿವಮೊಗ್ಗ ಕೃಷಿ ವಿವಿಯಿಂದ ಹೊಸ ಭತ್ತದ ತಳಿ

November 12, 2025
5:53 AM

ರೈತರಿಗೆ ಅಧಿಕ ಇಳುವರಿ ಹಾಗೂ ಮಧುಮೇಹಿಗಳಿಗೆ ಸಕ್ಕರೆ ಅಂಶ ಕಡಿಮೆ ಇರುವ ಭತ್ತದ ಹೊಸ ತಳಿಯಾದ ಕೆಂಪು ಭತ್ತವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯವು ‘ಸಹ್ಯಾದ್ರಿ ಸಿಂಧೂರ’ ಎಂಬ ನೂತನ ಕೆಂಪು ಸಣ್ಣ ಭತ್ತವನ್ನು ಪರಿಚಯಿಸಿಕೊಟ್ಟಿದೆ.

ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕೃಷಿ ಮೇಳದಲ್ಲಿ ಸಹ್ಯಾದ್ರಿ ಸಿಂಧೂರ ತಳಿಯ ಭತ್ತವನ್ನು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಬಿಡುಗಡೆಗೊಳಿಸಿದ್ದಾರೆ. ಈಗಾಗಲೇ ಅನೇಕ ಕೆಂಪು ತಳಿಯ ಭತ್ತಗಳಿವೆ. ಆದರೆ, ಈ ಸಹ್ಯಾದ್ರಿ ಸಿಂಧೂರ ತಳಿಯ ಅಕ್ಕಿಯು ಇತರ ಕೆಂಪು ತಳಿಯ ಭತ್ತಕ್ಕಿಂತ ವಿಭಿನ್ನವಾಗಿದೆ. ಇದು ಸಣ್ಣ ಕೆಂಪು ಭತ್ತವಾಗಿದ್ದು, ಇದನ್ನು ಎಲ್ಲರೂ ಸಹ ಊಟಕ್ಕೆ ಬಳಸಬಹುದು.
ಈ ಭತ್ತವನ್ನು ರಾಜ್ಯಾದ್ಯಂತ 40 ಕೇಂದ್ರಗಳಲ್ಲಿ ಪ್ರಯೋಗಿಸಲಾಗಿದ್ದು, ಅತ್ಯಂತ ಯಶಸ್ವಿಯಾಗಿ ಇಳುವರಿ ಬಂದಿದೆ. ಇದು ಒಂದು ಹೆಕ್ಟೇರ್‍ಗೆ 55 ಕ್ವಿಂಟಾಲ್ ಬರುತ್ತದೆ. ಮಲೆನಾಡಿನಲ್ಲಿ ಒಂದು ಹೆಕ್ಟೇರ್ ಗೆ 22 ಕ್ವಿಂಟಾಲ್ ಇಳುವರಿ ಸಿಗುತ್ತದೆ.ಇದರ ಇನ್ನೊಂದು ವಿಶೇಷತೆಯೆಂದರೆ,ಇದು 120 ದಿನದಲ್ಲೇ ಕಟಾವಿಗೆ ಬರುತ್ತದೆ. ಅಲ್ಲದೆ, ಎರಡು ಬೆಳೆಗಳಾಗಿ ಬೆಳೆಯಬಹುದು. ಇದಕ್ಕೆ ಯಾವುದೇ ರೋಗಭಾಧೆಯು ಬಹುಬೇಗ ತಗಲುವುದಿಲ್ಲ. ಇದರಲ್ಲಿ ಕೀಟವೂ ಇರುವುದಿಲ್ಲ. ಪ್ರೋಟೀನ್, ಐರನ್ ಜಿಂಕ್ ಅಂಶವನ್ನು ಹೆಚ್ಚಾಗಿ ಹೊಂದಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!
April 1, 2026
6:29 AM
by: ದ ರೂರಲ್ ಮಿರರ್.ಕಾಂ
ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ
April 1, 2026
6:13 AM
by: ಮಿರರ್‌ ಡೆಸ್ಕ್
ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ
April 1, 2026
6:07 AM
by: ಮಿರರ್‌ ಡೆಸ್ಕ್
ಕರಾವಳಿಯಲ್ಲಿ ಮಳೆಯ ರಭಸ | ಸುಬ್ರಹ್ಮಣ್ಯ ಆಸುಪಾಸಿನಲ್ಲಿ 50 ಮಿಮೀಗೂ ಹೆಚ್ಚು! ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಅಲರ್ಟ್
April 1, 2026
5:56 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror