ಮಹಾರಾಷ್ಟ್ರದ ಥಾಣೆಯ 10 ವರ್ಷದ ಸಾಯಿ ಪಾಟೀಲ್ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 38 ದಿನಗಳಲ್ಲಿ 3,600 ಕಿ.ಮೀ ಸೈಕ್ಲಿಂಗ್ ಮಾಡಿದ್ದಾಳೆ. ಈ ಬಾಲಕಿ ಈ ಹಿಂದೆ ಮಹಾರಾಷ್ಟ್ರದ ನಗರಗಳ ನಡುವೆ ಸೈಕಲ್ ಸವಾರಿ ಮತ್ತು ಹಲವಾರು ಈಜು ಸ್ಪರ್ಧೆಯ ಮೂಲಕ ದಾಖಲೆಗಳನ್ನು ಮಾಡಿದ್ದಾಳೆ.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರಯಾಣವನ್ನು ಮಾಡಬೇಕು ಎಂಬ ಇಚ್ಛೆ ಈಡೇರಿಸಲು ಸಾಯಿ ಪಾಟೀಲ್ ಒಂದು ವರ್ಷದಿಂದ ಅಭ್ಯಾಸ ಮಾಡುತ್ತಿದ್ದಳು. ಈ ಬಾರಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಮಾಡಿರುವಳು ಎಂದು ಸಾಯಿ ಪಾಟೀಲ್ ತಂದೆ ಆಶಿಶ್ ಪಾಟೀಲ್ ಹೇಳಿದರು. ನಾವು ಡಿಸೆಂಬರ್ 16 ರಂದು ಪ್ರಯಾಣವನ್ನು ಪ್ರಾರಂಭಿಸಿ ಜನವರಿ 30 ರಂದು ಪೂರ್ಣಗೊಳಿಸಿದ್ದೇವೆ ಎಂದು ಆಶಿಶ್ ಪಾಟೀಲ್ ಹೇಳಿದರು.
ಸಾಯಿ ಪಾಟೀಲ್ ಅವರ ಈ ಪ್ರಯತ್ನಕ್ಕೆ ಮಹಾರಾಷ್ಟ್ರದ ಹಲವಾರು ಪ್ರದೇಶಗಳಲ್ಲಿ ಜನರು ಇವರನ್ನು ಅಭಿನಂಧಿಸಿದರು. ಇವರ ಶೌರ್ಯ ಮತ್ತು ಸಮರ್ಪಣೆ ಬಗ್ಗೆ ನಿಜವಾಗಿಯೂ ಹೆಮ್ಮೆಯಿದೆ ಎಂದು ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…
ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…
ಪರಿಸರ ನಾಶವು ಕೇವಲ ಸಮಸ್ಯೆಯಲ್ಲ, ಅದು ಅಪರಾಧ ಎಂಬುದನ್ನು “ಗ್ರೀನ್ ಕ್ರೈಮ್” ಪುಸ್ತಕ…
ಘಾನಾದಲ್ಲಿ ಮರ ಬೆಳೆ ವೈವಿಧ್ಯೀಕರಣ ಯೋಜನೆ ಆರಂಭಗೊಂಡಿದ್ದು, ರೈತರ ಆದಾಯ ಹೆಚ್ಚಿಸಲು ಮತ್ತು…
ಕರ್ನಾಟಕದ ವಿವಿಧ ಭಾಗಗಳಲ್ಲಿ ಮತ್ತೆ ಮಳೆಯ ಚಟುವಟಿಕೆ ಹೆಚ್ಚಾಗಿದ್ದು, ಕರಾವಳಿ, ಮಲೆನಾಡು ಹಾಗೂ…
ರಾಜ್ಯದ ಹಲವೆಡೆ ಮಳೆಯಾಗಿದ್ದು, ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಹಗುರ ಮಳೆಯ ಸಾಧ್ಯತೆ…