ಹತ್ತು ಮೂಟೆ ಈರುಳ್ಳಿ ಮಾರಾಟ- ರೈತನ ಕೈಗೆ ಬಂದಿದ್ದು ಕೇವಲ ಎರಡು ರೂಪಾಯಿ – ಇದೆಂತ ಬದುಕು ರೈತರದ್ದು..?

February 24, 2023
3:32 PM

ಇದು ಕೇಳಲು ವಿಚಿತ್ರ ಅನ್ನಿಸಿದ್ರೂ, ರೈತರ ಬದುಕಿನ ಸ್ಪಷ್ಟ ಚಿತ್ರಣ ಮಾತ್ರ ಇದುವೆ. ಹೌದು.. ಹರಾಜು ಮೂಲಕ 10 ಮೂಟೆಗಳಲ್ಲಿ 512 ಕೆಜಿ ಈರುಳ್ಳಿ ಮಾರಾಟ ಮಾಡಿ ಈರುಳ್ಳಿ ಉತ್ಪಾದಕರ ಕೈಗೆ ಕೇವಲ ಎರಡು ರೂಪಾಯಿ ಸಿಕ್ಕಿದೆ.  ಅದನ್ನು ತೀರಿಸಲು ವ್ಯಾಪಾರಿ ಎರಡು ರೂಪಾಯಿ ಚೆಕ್ ನೀಡಿ ರೈತನನ್ನು ಲೇವಡಿ ಮಾಡಿದರು.

Advertisement
Advertisement
Advertisement
Advertisement

ಯಾವ ಬೆಲೆಯಾದರೇನು..? ರೈತನ ಗೋಳು ಒಂದೇ.. ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಪ್ರತಿದಿನ ಕುಸಿಯುತ್ತಿದೆ. ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೊಲ್ಲಾಪುರದಲ್ಲಿ ನಡೆದ ಘಟನೆ ನಿಜಕ್ಕೂ ರೈತನ ಬದುಕಿಗೆ ಹಿಡಿದ ಕೈ ಗನ್ನಡಿ. 512 ಕೆಜಿ ಈರುಳ್ಳಿ ಮಾರಾಟ ಮಾಡಿದ ನಂತರ ಸಂಬಂಧಪಟ್ಟ ರೈತನಿಗೆ ಕೇವಲ ಎರಡು ರೂಪಾಯಿ ಚೆಕ್ ಸಿಕ್ಕಿರುವುದು ಬೆಳಕಿಗೆ ಬಂದಿದೆ. ಸ್ವಾಭಿಮಾನಿ ಶೆಟ್ಕರ್ ಸಂಘಟನೆಯ ಮುಖಂಡ, ಮಾಜಿ ಸಂಸದ ರಾಜು ಶೆಟ್ಟಿ ಈ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ.

Advertisement

ಬಾರ್ಶಿ ತಾಲೂಕಿನ ಬೋರಗಾಂವದ ರೈತ ರಾಜೇಂದ್ರ ಚವ್ಹಾಣ ಅವರಿಗೆ ಈ ಕಹಿ ಅನುಭವವಾಗಿದೆ. ಚವ್ಹಾಣ ಅವರು ತಮ್ಮ ಜಮೀನಿನಲ್ಲಿ ಬೆಳೆದ ಈರುಳ್ಳಿಯನ್ನು ಫೆ.17ರಂದು ಸೊಲ್ಲಾಪುರದ ಮಾರುಕಟ್ಟೆ ಯಾರ್ಡ್‌ನಲ್ಲಿರುವ ಸೂರ್ಯ ಟ್ರೇಡರ್ಸ್‌ಗೆ ಮಾರಾಟಕ್ಕೆ ತಂದಿದ್ದರು. ಸೂರ್ಯ ಟ್ರೇಡರ್ಸ್‌ನ ಚಾಲಕ ಮತ್ತು ಅಡತ್ ವ್ಯಾಪಾರಿ ನಾಸೀರ್ ಖಲೀಫಾ ಇದನ್ನು ಹರಾಜು ಮೂಲಕ ಖರೀದಿದಾರ ವ್ಯಾಪಾರಿಗೆ ಕೆಜಿಗೆ ಒಂದು ರೂಪಾಯಿಗೆ ಮಾರಾಟ ಮಾಡಿದ್ದಾರೆ.

512 ಕೆಜಿ ಈರುಳ್ಳಿ ಕೆಜಿಗೆ ಒಂದು ರೂಪಾಯಿಗೆ 512 ರೂಪಾಯಿ ಆಯಿತು. ಇದರಿಂದ ಹಮಾಲಿ, ತೊಲಾಯಿ, ಬಾಡಿಗೆ, ನಗದು ಹಣ ಹಿಂಪಡೆಯಲಾಗಿದೆ. ಸಂಬಂಧಿಸಿದ ರೈತರಿಗೆ ಕೇವಲ ಎರಡು ರೂಪಾಯಿ ಚೆಕ್ ಅನ್ನು ನೀಡಲಾಗಿದ್ದು, ಅದೂ 15 ದಿನಗಳ ನಂತರ ಅಂದರೆ ಮಾರ್ಚ್ 8ಕ್ಕೆ ಡ್ರಾ ಮಾಡಲಾಗುವುದು.  ಇದು ಒಂದು ರೀತಿಯಲ್ಲಿ ರೈತನ ಕ್ರೂರ ಅಣಕ. ಹೀಗಿರುವಾಗ ರೈತರು ಬದುಕುವುದಾದರೂ ಹೇಗೆ ಎಂದು ಶೆಟ್ಟಿ ಸಿಟ್ಟಿನ ಪ್ರಶ್ನೆ ಕೇಳಿದ್ದಾರೆ.

Advertisement

ಆಡಳಿತಗಾರರಿಗೆ ನಾಚಿಕೆಯಾಗಬೇಕು, ಈಗ ರೈತರು ಹೇಗೆ ಬದುಕಬೇಕು ಹೇಳಿ? ಒಂದೆಡೆ ಹಣ ಬಾಕಿ ಉಳಿಸಿಕೊಂಡಿರುವುದರಿಂದ ರೈತರ ವಿದ್ಯುತ್ ಸಂಪರ್ಕ ಕಡಿತಗೊಂಡು ಕಣ್ಣೆದುರೇ ಬೆಳೆ ನಾಶವಾಗಿದೆ. ಎಂದು ಮಾಜಿ ಸಂಸದ ರಾಜು ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror