ಇದು ಕೇಳಲು ವಿಚಿತ್ರ ಅನ್ನಿಸಿದ್ರೂ, ರೈತರ ಬದುಕಿನ ಸ್ಪಷ್ಟ ಚಿತ್ರಣ ಮಾತ್ರ ಇದುವೆ. ಹೌದು.. ಹರಾಜು ಮೂಲಕ 10 ಮೂಟೆಗಳಲ್ಲಿ 512 ಕೆಜಿ ಈರುಳ್ಳಿ ಮಾರಾಟ ಮಾಡಿ ಈರುಳ್ಳಿ ಉತ್ಪಾದಕರ ಕೈಗೆ ಕೇವಲ ಎರಡು ರೂಪಾಯಿ ಸಿಕ್ಕಿದೆ. ಅದನ್ನು ತೀರಿಸಲು ವ್ಯಾಪಾರಿ ಎರಡು ರೂಪಾಯಿ ಚೆಕ್ ನೀಡಿ ರೈತನನ್ನು ಲೇವಡಿ ಮಾಡಿದರು.
ಯಾವ ಬೆಲೆಯಾದರೇನು..? ರೈತನ ಗೋಳು ಒಂದೇ.. ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಪ್ರತಿದಿನ ಕುಸಿಯುತ್ತಿದೆ. ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೊಲ್ಲಾಪುರದಲ್ಲಿ ನಡೆದ ಘಟನೆ ನಿಜಕ್ಕೂ ರೈತನ ಬದುಕಿಗೆ ಹಿಡಿದ ಕೈ ಗನ್ನಡಿ. 512 ಕೆಜಿ ಈರುಳ್ಳಿ ಮಾರಾಟ ಮಾಡಿದ ನಂತರ ಸಂಬಂಧಪಟ್ಟ ರೈತನಿಗೆ ಕೇವಲ ಎರಡು ರೂಪಾಯಿ ಚೆಕ್ ಸಿಕ್ಕಿರುವುದು ಬೆಳಕಿಗೆ ಬಂದಿದೆ. ಸ್ವಾಭಿಮಾನಿ ಶೆಟ್ಕರ್ ಸಂಘಟನೆಯ ಮುಖಂಡ, ಮಾಜಿ ಸಂಸದ ರಾಜು ಶೆಟ್ಟಿ ಈ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ.
ಬಾರ್ಶಿ ತಾಲೂಕಿನ ಬೋರಗಾಂವದ ರೈತ ರಾಜೇಂದ್ರ ಚವ್ಹಾಣ ಅವರಿಗೆ ಈ ಕಹಿ ಅನುಭವವಾಗಿದೆ. ಚವ್ಹಾಣ ಅವರು ತಮ್ಮ ಜಮೀನಿನಲ್ಲಿ ಬೆಳೆದ ಈರುಳ್ಳಿಯನ್ನು ಫೆ.17ರಂದು ಸೊಲ್ಲಾಪುರದ ಮಾರುಕಟ್ಟೆ ಯಾರ್ಡ್ನಲ್ಲಿರುವ ಸೂರ್ಯ ಟ್ರೇಡರ್ಸ್ಗೆ ಮಾರಾಟಕ್ಕೆ ತಂದಿದ್ದರು. ಸೂರ್ಯ ಟ್ರೇಡರ್ಸ್ನ ಚಾಲಕ ಮತ್ತು ಅಡತ್ ವ್ಯಾಪಾರಿ ನಾಸೀರ್ ಖಲೀಫಾ ಇದನ್ನು ಹರಾಜು ಮೂಲಕ ಖರೀದಿದಾರ ವ್ಯಾಪಾರಿಗೆ ಕೆಜಿಗೆ ಒಂದು ರೂಪಾಯಿಗೆ ಮಾರಾಟ ಮಾಡಿದ್ದಾರೆ.
512 ಕೆಜಿ ಈರುಳ್ಳಿ ಕೆಜಿಗೆ ಒಂದು ರೂಪಾಯಿಗೆ 512 ರೂಪಾಯಿ ಆಯಿತು. ಇದರಿಂದ ಹಮಾಲಿ, ತೊಲಾಯಿ, ಬಾಡಿಗೆ, ನಗದು ಹಣ ಹಿಂಪಡೆಯಲಾಗಿದೆ. ಸಂಬಂಧಿಸಿದ ರೈತರಿಗೆ ಕೇವಲ ಎರಡು ರೂಪಾಯಿ ಚೆಕ್ ಅನ್ನು ನೀಡಲಾಗಿದ್ದು, ಅದೂ 15 ದಿನಗಳ ನಂತರ ಅಂದರೆ ಮಾರ್ಚ್ 8ಕ್ಕೆ ಡ್ರಾ ಮಾಡಲಾಗುವುದು. ಇದು ಒಂದು ರೀತಿಯಲ್ಲಿ ರೈತನ ಕ್ರೂರ ಅಣಕ. ಹೀಗಿರುವಾಗ ರೈತರು ಬದುಕುವುದಾದರೂ ಹೇಗೆ ಎಂದು ಶೆಟ್ಟಿ ಸಿಟ್ಟಿನ ಪ್ರಶ್ನೆ ಕೇಳಿದ್ದಾರೆ.
ಆಡಳಿತಗಾರರಿಗೆ ನಾಚಿಕೆಯಾಗಬೇಕು, ಈಗ ರೈತರು ಹೇಗೆ ಬದುಕಬೇಕು ಹೇಳಿ? ಒಂದೆಡೆ ಹಣ ಬಾಕಿ ಉಳಿಸಿಕೊಂಡಿರುವುದರಿಂದ ರೈತರ ವಿದ್ಯುತ್ ಸಂಪರ್ಕ ಕಡಿತಗೊಂಡು ಕಣ್ಣೆದುರೇ ಬೆಳೆ ನಾಶವಾಗಿದೆ. ಎಂದು ಮಾಜಿ ಸಂಸದ ರಾಜು ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
01.06.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಹಲಸಿನ ಹಣ್ಣಿನ ಗುಳಿ ಅಪ್ಪಕ್ಕೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣು 2.1/2…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತಾರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸಾಮನ್ಯವಾಗಿ ಒಂದು ಉತ್ಪನ್ನದ ಉತ್ಪಾದನೆ ಕುಸಿದಾಗ ಅದರ ಬೆಲೆ ಏರಿಕೆ ಆಗುವುದು ಸಹಜ.ಇಲ್ಲಿ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಮೊದಲ…
ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಹಲವು ಕಡೆ…