Advertisement
Opinion

ಉಪ್ಪು ಮತ್ತು ಆರೋಗ್ಯ | ಸೈಂದವ ಉಪ್ಪು ಉಳಿದ ಉಪ್ಪಿಗಿಂತ ಆರೋಗ್ಯಕ್ಕೆ ಯಾಕೆ ಒಳ್ಳೆಯದು..?

Share

“ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ದೇವರಿಲ್ಲ” ಎಂಬ ಮಾತು ಕನ್ನಡದಲ್ಲಿ ತುಂಬಾ ಹಳೆಯದು. ಊಟ ತಿಂಡಿ ಇರಲಿ.. ಉಪ್ಪು(Salt) ಇಲ್ಲದೆ ಒಂದೇ ಒಂದು ದಿನವನ್ನು ನಾವು ಊಹಿಸಲು ಸಾಧ್ಯವಿಲ್ಲ. ಉಪ್ಪು ನಮ್ಮ ಆಹಾರದಲ್ಲಿ(Food) ಅಷ್ಟೊಂದು ಮಹತ್ವದ ಘಟಕವಾಗಿದೆ. ಉಪ್ಪು ರುಚಿಗೆ ಮಾತ್ರವಲ್ಲ ದೇಹದ(Body)ಒಳಗಿನ ಕೆಲವರ ರಾಸಾಯನಿಕ ಕ್ರಿಯೆಗಳಿಗೂ(Chemical Process) ಅಗತ್ಯ ದೇಹದಲ್ಲಿ ಉಪ್ಪಿನ ಅಂಶ ಇಲ್ಲದೆ ನಾವು ಬದುಕಿರಲು ಸಾಧ್ಯವೇ ಇಲ್ಲ.

Advertisement
Advertisement

ರಾಸಾಯನಿಕವಾಗಿ ಹೇಳಬೇಕೆಂದರೆ ಒಂದು ಸೋಡಿಯಂ(Na) ನ ಪರಮಾಣು ಮತ್ತು ಒಂದು ಕ್ಲೋರಿನ್(Cl) ನ ಪರಮಾಣು ಒಟ್ಟಿಗೆ ಬೆಸೆದು ಸೋಡಿಯಂ ಕ್ಲೋರೈಡ್ (NaCl) ಎಂಬ ಸಂಯುಕ್ತ ತಯಾರಾಗುತ್ತದೆ. ಇದೇ ನಮ್ಮ ಅಡುಗೆಯ ಸಾಮಾನ್ಯ ಉಪ್ಪು. ಆರು ರುಚಿಗಳ ಪೈಕಿ ಉಪ್ಪು ರುಚಿ ಒಂದು ವಿಶಿಷ್ಟ ರುಚಿ. ಸಾಮಾನ್ಯವಾಗಿ ಎಲ್ಲ ಬಗೆಯ ಲವಣಗಳು ಉಪ್ಪುರುಚಿಯನ್ನು ಹೊಂದಿರುತ್ತವೆ. ನಮ್ಮ ದೇಹದಲ್ಲಿ ನರಗಳ ಪ್ರಚೋದನೆಗಳನ್ನು ನಡೆಸಲು, ಸ್ನಾಯುಗಳನ್ನು ಆಕುಂಚನ ಮತ್ತು ಪ್ರಸರಣಗೊಳಿಸಲು ಮತ್ತು ನೀರು ಮತ್ತು ಖನಿಜಗಳ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳಲು ಮಾನವ ದೇಹಕ್ಕೆ ಸಣ್ಣ ಪ್ರಮಾಣದ ಸೋಡಿಯಂ ಅಗತ್ಯವಿರುತ್ತದೆ.  ಈ ಸೋಡಿಯಂ ನಮಗೆ ನೇರವಾಗಿ ಉಪ್ಪು ಹಾಗೂ ಅನೇಕ ಆಹಾರ ಪದಾರ್ಥಗಳಾದ ತರಕಾರಿಗಳು ಹಣ್ಣುಗಳು ಮತ್ತು ಧಾನ್ಯಗಳ ಮೂಲಕ ದೊರೆಯುತ್ತದೆ.

ಆದರೆ ದೇಹದಲ್ಲಿ ಹೆಚ್ಚಿನ ಉಪ್ಪಿನ ಪ್ರಮಾಣವೋ ಅಧಿಕಾರಕ್ತ್ತದ ಒತ್ತಡ ಜಲಸಂಗ್ರಹಣೆ ಉಂಟು ಮಾಡುವ ಮೂಲಕ ಪಾರ್ಶ್ವ ವಾಯು ಹೃದಯಘಾತ ದಂತಹ ಮಾರಣಾಂತಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸಾಮಾನ್ಯ ಉಪ್ಪಿನಲ್ಲಿ ಸೋಡಿಯಂ ಮತ್ತು ಕ್ಲೋರಿನ್ ಬಿಟ್ಟರೆ ಇನ್ನೂ ಪೋಷಕಾಂಶಗಳು ಇಲ್ಲದಿರುವುದರಿಂದ ಇದು ನಮ್ಮ ಆಹಾರದಲ್ಲಿ ಅಗತ್ಯದ ಪದಾರ್ಥವಲ್ಲ. ನಮ್ಮ ಆಹಾರದಲ್ಲಿನ 5 ಬಿಳಿ ಪದಾರ್ಥ ಗಳನ್ನು ಆಯುರ್ವೇದ ಪ್ರಕಾರ ಮಂದ ವಿಷ ಗಳೆಂದು ಪರಿಗಣಿಸಲಾಗಿದೆ – ಅಕ್ಕಿ, ಮೈದಾ, ಹಾಲು, ಉಪ್ಪು, ಸಕ್ಕರೆ. ಆದ್ದರಿಂದ ಸಾಮಾನ್ಯ ಒಪ್ಪನ್ನು ಬಳಸುವುದು ಆರೋಗ್ಯಕ್ಕೆ ಸೂಕ್ತವಲ್ಲ.

ಹಾಗಾದರೆ ಇದಕ್ಕೆ ವಿಕಲ್ಪವೇನು? : ಆಯುರ್ವೇದವು ಸಮುದ್ರದ ಸಾಮಾನ್ಯ ಉಪ್ಪಿನ ಬದಲು ಸಿಂಧು(ಸೈಂಧವ) ಲವಣ ಅಥವಾ ಕಲ್ಲು ಉಪ್ಪನ್ನು ಬಳಸಲು ಅನುಮೋದಿಸುತ್ತದೆ. ಈ ಉಪ್ಪಿನಲ್ಲಿ ಸುಮಾರು 84 ಪ್ರಕಾರದ ಖನಿಜಗಳು ಮತ್ತು ಉಪಯುಕ್ತ ಪೋಷಕಾಂಶಗಳು ಇರುವುದರಿಂದ ಇದನ್ನು ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗಿದೆ. ನಿತ್ಯದ ಬಳಕೆಯಲ್ಲಿ ಸಮುದ್ರದ ಸಾಮಾನ್ಯ ಉಪ್ಪಿನ ಬದಲು ಈ ಗುಲಾಬಿ ಉಪ್ಪನ್ನು ಬಳಸುವುದು ಹೆಚ್ಚು ಆರೋಗ್ಯಕರ. ಸೈಂಧವ ಉಪ್ಪನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಸಿಂಧೂ ಉಪ್ಪಿನ ಪ್ರಯೋಜನಗಳನ್ನು ತಿಳಿಯೋಣ…

ಸೈಂದವ ಉಪ್ಪು: ಸಮುದ್ರ ಅಥವಾ ಸರೋವರದಿಂದ ಉಪ್ಪುನೀರು ಆವಿಯಾದಾಗ, ಅದು ವರ್ಣರಂಜಿತ ಹರಳುಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಸೈಂಧವ ಲವಣವನ್ನು ತಯಾರಿಸಲಾಗುತ್ತದೆ. ಇದು ಒಂದು ರೀತಿಯ ಖನಿಜವಾಗಿದೆ, ಇದು ಆಹಾರಕ್ಕೆ ಸೂಕ್ತವಾಗಲು ಯಾವುದೇ ರಾಸಾಯನಿಕ ಸಂಸ್ಕರಣೆಯ ಅಗತ್ಯವಿರುವುದಿಲ್ಲ. ಇದನ್ನು ಹಿಮಾಲಯನ್ ಉಪ್ಪು, ಕಲ್ಲು ಉಪ್ಪು, ಲಾಹೋರಿ ಉಪ್ಪು ಎಂದೂ ಕರೆಯುತ್ತಾರೆ. ಸೈಂಧವ ಉಪ್ಪಿನಲ್ಲಿ 84 ಬಗೆಯ ಖನಿಜಗಳಿವೆ. ಇದು ಮೆಗ್ನೀಸಿಯಮ್ ಮತ್ತು ಸಲ್ಫರ್‌ನಿಂದ ಕೂಡಿದೆ.

ಸೈಂದವ ಉಪ್ಪು ಏಕೆ ತುಂಬಾ ಪ್ರಯೋಜನಕಾರಿ? :ಸಾಮಾನ್ಯ ಉಪ್ಪಿಗೆ ಹೋಲಿಸಿದರೆ ಸೈಂಧವ ಉಪ್ಪಿನಲ್ಲಿ ಅಯೋಡಿನ್ ಅಂಶ ಕಡಿಮೆ ಇರುತ್ತದೆ. ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಸತು ಮುಂತಾದ ಅಂಶಗಳು ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದಲ್ಲದೆ, ಕಬ್ಬಿಣ, ಮ್ಯಾಂಗನೀಸ್, ತಾಮ್ರ, ಕೋಬಾಲ್ಟ್ ಸಹ ಸೈಂಧವ ಉಪ್ಪಿನಲ್ಲಿ ಕಂಡುಬರುತ್ತದೆ, ಇದು ಸಾದಾ ಉಪ್ಪಿಗಿಂತ ಹೆಚ್ಚು ಪೌಷ್ಟಿಕವಾಗಿದೆ.

ಸೈಂದವ ಉಪ್ಪನ್ನು ಸೇವಿಸಿ, ಈ ರೋಗಗಳಿಂದ ಮುಕ್ತಿ: ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಸೈಂಧವ ಉಪ್ಪು ಶೀತ ಮತ್ತು ಕೆಮ್ಮನ್ನು ಗುಣಪಡಿಸಲು ಸಹ ಪರಿಣಾಮಕಾರಿಯಾಗಿದೆ. ಕೀಲು ನೋವು ಮತ್ತು ಖಿನ್ನತೆಯಂತಹ ಸಮಸ್ಯೆಗಳಿಂದ ಸೈಂಧವ ಉಪ್ಪು ಪರಿಹಾರ ನೀಡಬಹುದು. ಕಲ್ಲು ಉಪ್ಪನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಸಂಕಲನ: ಡಾ. ಪ್ರ. ಅ. ಕುಲಕರ್ಣಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಣ್ಣಿಲ್ಲದೇ ಅವಕಾಡೊ ಬೆಳೆ..! ಜೇನು ಸೇರಿಸಿದ ಕೃಷಿ ಈಗ ಹೊಸ ಟ್ರೆಂಡ್

2026 ರಲ್ಲಿ ಹೈಡ್ರೋಪೋನಿಕ್ ಅವಕಾಡೊ ಕೃಷಿ ಮತ್ತು ಜೇನು ಪರಾಗಸ್ಪರ್ಶದ ಸಂಯೋಜನೆ ಹೊಸ…

14 hours ago

ರೇಷ್ಮೆ ಗೂಡಿಗೆ 800 ರೂ.ವರೆಗೆ ಬೆಲೆ | ಚಾಮರಾಜನಗರದಲ್ಲಿ ರೈತರಿಗೆ ಲಾಭದಾಯಕ ಹಾದಿ

ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಗೂಡಿಗೆ ಕೆಜಿಗೆ 750ರಿಂದ 800 ರೂಪಾಯಿವರೆಗೆ ಬೆಲೆ ಸಿಗುತ್ತಿದೆ.…

15 hours ago

ಸ್ಥಳೀಯ ಚುನಾವಣೆಗಳಲ್ಲಿ ಇವಿಎಂಗೆ ಬ್ರೇಕ್ | ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಸಚಿವ ಸಂಪುಟ ಹಸಿರು ನಿಶಾನೆ

ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಮತದಾನ…

15 hours ago

ಕೇಂದ್ರವು ಕೇರಳದ ರಬ್ಬರ್ ಕ್ಷೇತ್ರವನ್ನು ದುರ್ಬಲಗೊಳಿಸುತ್ತಿದೆ – ಆರೋಪ

ಕೇಂದ್ರ ಸರ್ಕಾರವು ರಾಜ್ಯದ ರಬ್ಬರ್ ಕೃಷಿಯನ್ನು ಈಶಾನ್ಯಕ್ಕೆ ಸ್ಥಳಾಂತರಿಸುವ ಮೂಲಕ ರಬ್ಬರ್ ಕ್ಷೇತ್ರವನ್ನು…

15 hours ago

ಅಡಿಕೆ ಮಾರುಕಟ್ಟೆ ಸಮೀಕರಣ : ಬೆಲೆ ನಿರ್ಧಾರದ ಹಿಂದಿನ ಅರ್ಥಶಾಸ್ತ್ರ ಮತ್ತು ಮನೋವಿಜ್ಞಾನ

ಅಡಿಕೆ ಮಾರುಕಟ್ಟೆ ಎಂದರೆ ಕೇವಲ ಕೃಷಿ ಉತ್ಪನ್ನಗಳ ವಿನಿಮಯ ಕೇಂದ್ರವಲ್ಲ; ಅದೊಂದು ಸಂಕೀರ್ಣವಾದ…

23 hours ago

ಅಡಿಕೆ ಕಳ್ಳಸಾಗಣೆ ಜಾಲಕ್ಕೆ ಮಿಝೋರಂ ಸರ್ಕಾರದ ಬಿಗಿ ಹಿಡಿತ – ಅಡಿಕೆ ಮಾರುಕಟ್ಟೆ ಚೇತರಿಕೆ ಸಾಧ್ಯತೆ

ಮಿಝೋರಂ ಸರ್ಕಾರವು ಅಡಿಕೆ ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ. ಯಾವುದೇ…

24 hours ago