ಸಂಪಾಜೆ ಎಜುಕೇಶನ್ ಸೊಸೈಟಿ ವಾರ್ಷಿಕ ಮಹಾಸಭೆ |

October 3, 2022
10:00 AM

ಸಂಪಾಜೆ ಎಜುಕೇಶನ್ ಸೊಸೈಟಿ  2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಸಮಿತಿ ಅಧ್ಯಕ್ಷರಾದ  ರಾಜಾರಾಮ ಕೀಲಾರು ಅವರ ಅಧ್ಯಕ್ಷತೆಯಲ್ಲಿ  ಸಂಪಾಜೆ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜರುಗಿತು.ಕಾರ್ಯದರ್ಶಿ ಎಂ ಶಂಕರನಾರಾಯಣ ಭಟ್  ಸ್ವಾಗತಿಸಿದರು.  ಸಭೆಯಲ್ಲಿ ವರದಿ ಮತ್ತು ಲೆಕ್ಕಪತ್ರಗಳನ್ನು ಮಂಡಿಸಿ, ಅನುಮೋದಿಸಲಾಯಿತು.

2022-23 ನೇ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ  ರಾಜಾರಾಮ ಕೀಲಾರು, ಕಾರ್ಯದರ್ಶಿಯಾಗಿ  ಎಂ ಶಂಕರನಾರಾಯಣ ಭಟ್, ಉಪಾಧ್ಯಕ್ಷರಾಗಿ  ಯು ಬಿ ಚಕ್ರಪಾಣಿ, ಖಜಾಂಜಿ  ಬಿ ಆರ್ ಪದ್ಮಯ್ಯ, ಕಾರ್ಯಕಾರಿ ನಿರ್ದೇಶಕರುಗಳಾಗಿ  ಕೆ ಜಿ ಮುರಳೀಧರ,  ಸುಬ್ರಹ್ಮಣ್ಯ ಉಪಾಧ್ಯಾಯ,  ಕೆ ಎಸ್ ಜಯರಾಮ, ನಿರ್ದೇಶಕರುಗಳಾಗಿ  ಕೆ ಎಸ್ ನಾರಾಯಣ ಭಟ್, ಪಿ ಎನ್ ಗಣಪತಿ ಭಟ್,  ಎಸ್ ಕೆ ಮಹಮ್ಮದ್ ಹನೀಫ್,  ಕಾರ್ಯಪ್ಪ ಎಚ್ ಎನ್ ಮತ್ತು  ಸಾದಿಕ್ ಎಸ್ ಎ , ಪ್ರಾಂಶುಪಾಲ ಸದಸ್ಯರಾಗಿ  ಮಾಲತಿ ವೈ ಕೆ, ನೌಕರರ ಪ್ರತಿನಿಧಿ ಸದಸ್ಯರಾಗಿ  ಎ ಐತಪ್ಪ ಅವರು ಮರು ಆಯ್ಕೆಯಾದರು.

ನೂತನ ಕಾರ್ಯಕಾರಿ ನಿರ್ದೇಶಕರಾಗಿ ಡಾ. ಯು ಪಿ ಜಯರಾಮ ಮತ್ತು ನಿರ್ದೇಶಕರಾಗಿ ರಾಮಕೃಷ್ಣ ಕೆ ಆಯ್ಕೆಯಾದರು. ಸಭೆಯಲ್ಲಿ ಮುಂದಿನ ಯೋಜನೆ ಬಗ್ಗೆ ಚರ್ಚಿಸಲಾಯಿತು.  ರಾಜಾರಾಮ ಕೀಲಾರು  ಅಧ್ಯಕ್ಷೀಯ ನುಡಿಗಳನ್ನಾಡಿ ಎಲ್ಲರೂ ಸಂಸ್ಥೆಯ ಉನ್ನತಿಗೆ ಸಹಕರಿಸಬೇಕು ಎಂದರು.

ಕಾಲೇಜು ಪ್ರಾಂಶುಪಾಲೆ  ವೈ ಕೆ ಮಾಲತಿ  ವಂದಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ
September 16, 2026
3:41 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 16-09-2026 | ಕರಾವಳಿಯಲ್ಲಿ ಸೆಖೆ, ಸಂಜೆ ಅಲ್ಲಲ್ಲಿ ಮಳೆ ನಿರೀಕ್ಷೆ
September 16, 2026
2:18 PM
by: ಸಾಯಿಶೇಖರ್ ಕರಿಕಳ
ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?
September 16, 2026
7:17 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ
September 15, 2026
11:12 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror