The Rural Mirror ಫಾಲೋಅಪ್

#ಕೃಷಿಉಳಿಸಿ #ಕಾಡಾನೆದಾಳಿ | ಕಾಡಾನೆ ಓಡಿಸಲು ಲಾಟೀನು ಪ್ರಯೋಗ ಮಾಡಿದರು…!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಸುಳ್ಯ ತಾಲೂಕಿನಲ್ಲಿ ಕಾಡಾನೆ ಹಾವಳಿ ಹೆಚ್ಚಾಗುತ್ತಿದೆ. ಈಗಾಗಲೇ ಕೊಲ್ಲಮೊಗ್ರ , ಹರಿಹರ ಪ್ರದೇಶದಲ್ಲಿ ಕೃಷಿಕರ ಮೇಲೂ ದಾಳಿ ಆರಂಭಿಸಿದೆ. ಹೀಗಾಗಿ ಸೂಕ್ತ ಮುಂಜಾಗ್ರತಾ ಕ್ರಮಗಳೂ ಅನಿವಾರ್ಯ. ಇಲಾಖೆಗಳು ತಮ್ಮದೇ ಪ್ರಯತ್ನ ಮಾಡುತ್ತಿವೆ. ಈ ನಡುವೆ ಆನೆ ಓಡಿಸಲು ಕೃಷಿಕರಿಂದ  ಏನೇನು ಪ್ರಯತ್ನಗಳಾಗಿವೆ ಎಂದು ರೂರಲ್‌ ಮಿರರ್‌.com ಪರಿಚಯಿಸುತ್ತಾ ಮುಂದೇನು ಮಾಡಬಹುದು ಎಂಬುದರ ಬಗ್ಗೆ ವಿವರವಾದ ಅಧ್ಯಯನ ವರದಿ ಮಾಡುತ್ತಿದೆ. ಕೃಷಿಕರೂ ತಮ್ಮ ಅಭಿಪ್ರಾಯ ತಿಳಿಸಬಹುದು.

Advertisement
Advertisement

ಸುಮಾರು 15-20 ವರ್ಷಗಳಿಂದಲೇ ಕಾಡಾನೆ ಕಾಟ ಸುಳ್ಯ ತಾಲೂಕಿನ ಕೊಲ್ಲಮೊಗ್ರ, ಹರಿಹರ ಪ್ರದೇಶದಲ್ಲಿ ಇದೆ. ಆರಂಭದಲ್ಲಿ ಕೃಷಿಗೆ ಸಣ್ಣ ಪ್ರಮಾಣದಲ್ಲಿ ಹಾನಿ ಮಾಡುತ್ತಿದ್ದ ಕಾಡಾನೆಗಳ ಹಿಂಡು ಕ್ರಮೇಣವಾಗಿ ಅಡಿಕೆ, ಬಾಳೆ , ತೆಂಗು ನಾಶ ಮಾಡಿತು. ಒಮ್ಮೆ ಕೃಷಿ ಹಾನಿಗೊಳಗಾದರೆ ಮತ್ತೆ ಕೃಷಿ ಮರುಸೃಷ್ಟಿಗೆ ದಶಕಗಳೇ ಬೇಕಾಗುತ್ತದೆ. ಒಬ್ಬ ವ್ಯಕ್ತಿಯ ಬದುಕಿನ ಅತೀ ಮುಖ್ಯ ಕಾಲಘಟ್ಟವು ಕೃಷಿ ಅಭಿವೃದ್ಧಿಗೆ ಬೇಕಾಗುತ್ತದೆ. ಆದರೆ ಈ ಶ್ರಮವೆಲ್ಲಾ ಕಾಡಾನೆಗೆ ಒಂದು ದಿನದಲ್ಲಿ ಹಾಳು ಮಾಡಲು ಸಾಕಾಗುತ್ತದೆ. ಹೀಗಾಗಿ ಕೃಷಿಕನ ಬೆವರ ಶ್ರಮ ಉಳಿಸಲು ಕಾಡಾನೆ ಹಾವಳಿಯಿಂದ ತಪ್ಪಿಸಲು ಹರಿಹರ, ಕೊಲ್ಲಮೊಗ್ರ ಪ್ರದೇಶದಲ್ಲಿ ಆರಂಭದಲ್ಲಿ ರಾತ್ರಿ ಇಡೀ ಜಾಗರಣೆ ಮಾಡಿದವರು ಇದ್ದಾರೆ. ಇನ್ನೂ ಕೆಲವರು ಆರಂಭದಲ್ಲಿ ರಾತ್ರಿ ದೀಪ ಬೆಳಗಿಸಿ ಕೆಲ ಸಮಯ ಪರಿಹಾರ ಕಂಡುಕೊಂಡರು.

ತಮ್ಮ ಕೃಷಿ ಭೂಮಿಯ ಸುತ್ತಲು ಚಿಮಣಿ ದೀಪವನ್ನು ಸಂಜೆಯ ವೇಳೆಗೆ ಉರಿಸಿ ಬರುತ್ತಿದ್ದರು ಕೃಷಿಕರು. ಸಂಜೆಯ ವೇಳೆಗೆ ಕೃಷಿ ಭೂಮಿಯ ಸುತ್ತಲೂ ಇಟ್ಟಿರುವ ದೀಪಗಳನ್ನು ಉರಿಸಿ ಮರುದಿನ ಬೆಳಗಿನವರೆಗೆ ಈ ದೀಪ ಉರಿಯುವಂತೆ ಜಾಗೃತೆ ವಹಿಸುತ್ತಿದ್ದರು. ಆರಂಭದಲ್ಲಿ ಈ ಪ್ರಯೋಗ ಹೊಸದಾಗಿ ಕಂಡಾಗಿ ಕಾಡಾನೆ ತೋಟದ ಕಡೆಗೆ ಲಗ್ಗೆ ಇಡುವುದು  ಕಡಿಮೆ ಮಾಡಿತು. ಕೆಲವರು ಲಾಟೀನು ಇಡುವ ಮೂಲಕವೂ ಇದರಲ್ಲಿ ಸುಧಾರಣೆ ಮಾಡಿಕೊಂಡರು. ಲಾಟೀನು ಇಟ್ಟರೆ ಇಡೀ ರಾತ್ರಿ ಗಾಳಿಯ ರಭಸಕ್ಕೂ ನಂದತೆ ಬೆಳಗಿನವರೆಗೆ ಉರಿಯುತ್ತಿತ್ತು. ಕ್ರಮೇಣ ಈ ಪ್ರಯೋಗವೂ ಕಾಡಾನೆಗೆ ಅಭ್ಯಾಸವಾಗಿ ಮತ್ತೆ ಕೃಷಿ ತೋಟಕ್ಕೆ ಹಾನಿ ಮಾಡಲು ಆರಂಭಿಸಿತು. ಆಗ ಇನ್ನೊಂದು ಪ್ರಯೋಗಕ್ಕೆ ಮುಂದಾದರು. ಅಷ್ಟರಲ್ಲಿ ಅದುವರೆಗೂ ಕೃಷಿ ಭೂಮಿಯೊಳಗೆ ಇಳಿದಿದ್ದ ಬೆವರ ಹನಿ ಒಣಗಿತು.  ಮುಂದೇನು ಪ್ರಯೋಗ ಮಾಡಿದರು…. ? ಇನ್ನೊಂದು ಭಾಗದಲ್ಲಿ ತಿಳಿಸುತ್ತೇವೆ.

ಇಂತಹ ಪ್ರಯೋಗಗಳು ಕೃಷಿಕರು ಮಾಡಿದ್ದಿದ್ದರೆ ನಮಗೇ ಕಳುಹಿಸಿ. ಕೃಷಿಕರ ಇಂತಹ ಎಲ್ಲಾ ಪ್ರಯತ್ನಗಳನ್ನು ದಾಖಲಿಸಿ ಆ ಬಳಿಕ ಮುಂದೇನು ಪರಿಹಾರ ಮಾರ್ಗವಿದೆ ಎಂಬುದರ ಅಧ್ಯಯನ ವರದಿಯನ್ನು ದಾಖಲಿಸಿ ಸಂಬಂಧಿತರ ಮೂಲಕ ಪರಿಹಾರಕ್ಕೆ ಯತ್ನಿಸೋಣ. ನಮ್ಮ ವ್ಯಾಟ್ಸಪ್‌ ಸಂಖ್ಯೆ 9449125447 ಅಥವಾ 9448625390 – ರೂರಲ್‌ ಮಿರರ್

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ರೈತರಿಗೆ ಆಶಾದಾಯಕ ಕೃಷಿಭಾಗ್ಯ ಯೋಜನೆ

ಮಂಗಳೂರು ತಾಲೂಕಿನ ಎಲ್ಲಾ ಗ್ರಾಮಗಳು ಮಳೆಯಾಶ್ರಿತ ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ಹವಾಮಾನ…

4 hours ago

ಬೆಳೆ ವಿಮೆ | ದತ್ತಾಂಶ ತಾಳೆ ಹೊಂದಿಸಲು  ಮೇ 31 ಕೊನೆಯ ದಿನ

ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ನೋಂದಾವಣೆಗೊಂಡ ರೈತರ ತಾಲೂಕಿನಲ್ಲಿ ವಿಮೆ ಮಾಡಿಸಲಾಗಿರುವ…

4 hours ago

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ | ಕೊಡಗು ಜಿಲ್ಲೆಯ ಬಹುತೇಕ ಕಡೆ ಮಳೆ |

ಇಂದು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಿದೆ. ಪ್ರಮುಖವಾಗಿ ಕುಮುಟಾ ಮತ್ತು ಅಂಕೋಲಾದಲ್ಲಿ…

5 hours ago

ಬೆಂಗಳೂರು-ಮೈಸೂರಿನಲ್ಲಿ ವಿವಿಧ  ತಳಿಗಳ ಮಾವು, ಹಲಸು ಪ್ರದರ್ಶನ ಮತ್ತು ಮಾರಾಟ

ಬೆಂಗಳೂರಿನ ಲಾಲ್ ಬಾಗ್ ನಲ್ಲಿರುವ ಡಾ. ಎಂ.ಎಚ್ ಮರೀಗೌಡ ಸಭಾಂಗಣದಲ್ಲಿ  ಮೂರು ದಿನಗಳ…

5 hours ago

ಸುಳ್ಯದಲ್ಲಿ ಜೇನು ಚಾಕಲೇಟ್ ಬಿಡುಗಡೆ | ಜೇನಿನಿಂದಲೇ ಚಾಕಲೇಟ್ ಉತ್ತಮ ಬೆಳವಣಿಗೆ – ಶೋಭಾ ಕರಂದ್ಲಾಜೆ

ಜೇನು ಕೃಷಿ ಲಾಭದಾಯಕವಾಗಿದ್ದು, ರೈತರು ಈ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕೇಂದ್ರ…

5 hours ago

ಹವಾಮಾನ ವರದಿ | 23.05.2025 | ಮುಂದಿನ 10 ದಿನಗಳವರೆಗೂ ರಾಜ್ಯದಲ್ಲಿ ಉತ್ತಮ ಮಳೆ

24.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

11 hours ago