ಹೊಸ ಸಂಶೋಧನೆಯ ಪ್ರಕಾರ, ಕೆಲವು ಪ್ರದೇಶಗಳಲ್ಲಿ ಎರಡನೇ ಕಾಡನ್ನು (Secondary Forest) ಅಡಿಕೆ ತೋಟಗಳಾಗಿ ಪರಿವರ್ತಿಸುವುದು ಮಣ್ಣಿನ ಗುಣಲಕ್ಷಣಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದರ ನೀರಿನ ಹಿಡಿತ (soil water retention) ಶಕ್ತಿಯನ್ನು ಕುಗ್ಗಿಸುತ್ತದೆ ಎಂದು ಹೇಳಿದೆ.
ಸಂಶೋಧನೆಯ ವಿವರ :
ಸಂಶೋಧಕರು ಹೇಳುವಂತೆ, ಹಸಿರು, ಮಣ್ಣಿನಲ್ಲಿ ಹೆಚ್ಚು ಜೀವವೈವಿಧ್ಯ ಮತ್ತು ವ್ಯಾಪಕ ಜೀವರಾಶಿ ಇರುವ ಎರಡನೇ ಕಾಡನ್ನು ಕತ್ತರಿಸಿ ಅದನ್ನು ಅಡಿಕೆ ತೋಟಕ್ಕೆ ಬದಲಿಸುವಾಗ, ಮಣ್ಣು ಬದಲಾದ ರೀತಿ ತನ್ನ ನೀರಿನ ಹಿಡಿತ ಶಕ್ತಿಯನ್ನು ಕಳೆದುಕೊಳ್ಳುತ್ತದೆ.
ಈ ಬದಲಾವಣೆಯ ಪರಿಣಾಮವಾಗಿ ಮಣ್ಣು ಮಳೆ ನೀರನ್ನು ಹೆಚ್ಚು ಹಿಡಿದಿರುವುದಿಲ್ಲ, ಹೀಗಾಗಿ ಮಣ್ಣಿನ ಆರೋಗ್ಯ, ಬೆಳೆಯುವ ಸಾಮರ್ಥ್ಯ ಮತ್ತು ನೀರಿನ ಉಳಿತಾಯದ ಮೇಲೆ ಪರಿಣಾಮ ಬೀರುತ್ತದೆ.
ಪರಿಸರ ಮತ್ತು ಕೃಷಿಗೆ ಪರಿಣಾಮ :
ಮಣಿಸಂಪತ್ತು ಮತ್ತು ನೀರಿನ ಲಭ್ಯತೆ ಕೂಡಾ ಕಡಿಮೆಯಾಗುತ್ತದೆ. ಮಣ್ಣಿನಲ್ಲಿ ನೀರಿನ ಹಿಡಿತ ಕಡಿಮೆಯಾಗುತ್ತದೆ, ಹೀಗಾಗಿ ಭೂಮಿಯಲ್ಲಿ ಒತ್ತಡದ ಸಮಯಗಳಲ್ಲಿ ಜಲಸಂಪತ್ತು ಕಮ್ಮಿಯಾಗುತ್ತದೆ. ಅಡಿಕೆ ತೋಟಗಳು ಮಣ್ಣು- ನೀರನ್ನು ಸಡಿಲವಾಗಿಸುತ್ತವೆ, ಕೃಷಿ-ಬೆಳೆಗಳಿಗೆ ಈ ಬದಲಾವಣೆ ಪ್ರಭಾವ ಬೀರುತ್ತದೆ. ಮುಂದಿನ ದಿನಗಳಲ್ಲಿ ಮಣ್ಣಿನ ಸತ್ವ ಕಡಿಮೆಯಾಗಿ ಬೆಳೆಯಗಳ ಮೇಲೂ ಹೆಚ್ಚಿನ ಪರಿಣಾಮ ಬೀರಬಹುದು, ರೋಗಗಳು ಅಧಿಕವಾಗಬಹುದು. ಇದಕ್ಕಾಗಿ ಸಲಹೆ, ಮಿಶ್ರ ಬೆಳೆ. ಬೆಳೆ ಪರಿವರ್ತನೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…
2025-26ರಲ್ಲಿ ಕ್ಯಾಂಪ್ಕೊ ₹3,735 ಕೋಟಿ ವಹಿವಾಟು ಮತ್ತು ₹49.62 ಕೋಟಿ ಲಾಭ ದಾಖಲಿಸಿದ್ದು,…
ಸಂಪತ್ತು ಮತ್ತು ಸೌಲಭ್ಯಗಳು ಹೆಚ್ಚಿರುವುದೇ ನಿಜವಾದ ಶ್ರೀಮಂತಿಕೆಯಲ್ಲ; ಅವುಗಳನ್ನು ವಿವೇಕದಿಂದ ಬಳಸುವ ಮನಸ್ಸು…
ಸೆ.11ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಲಿದ್ದು, ಬಿಸಿಲು ಹೆಚ್ಚಾಗುವ ಲಕ್ಷಣಗಳಿವೆ.…
ದುರ್ಬಲ ಮುಂಗಾರು ಮತ್ತು ಜಲ–ಪವನ ವಿದ್ಯುತ್ ಉತ್ಪಾದನೆ ಕುಸಿತದಿಂದ ರಾಜ್ಯದಲ್ಲಿ ವಿದ್ಯುತ್ ಪೂರೈಕೆಯ…