ರಾಜ್ಯಾದ್ಯಂತ ಕಾಡುತ್ತಿದೆ ಬರ | ನೀರಿನ ಕೊರತೆ ಮಧ್ಯೆಯೂ ಈ 40 ಹಳ್ಳಿಗಳಿಗಿಲ್ಲ ನೀರಿನ ಕೊರತೆ..|

March 19, 2024
9:24 AM

ಬೇಸಿಗೆಯ ಬಿರು ಬಿಸಿಲಿಗೆ(Hot summer) ಭೂಮಿಯೆಲ್ಲಾ ಒಣಗಿ(Dry land) ಹೋಗಿದೆ. ಜಲ(Water) ಪಾತಾಳಕ್ಕೆ ಇಳಿದಿದೆ. ಎಲ್ಲೆಲ್ಲೂ ಖಾಲಿ  ಕೆರೆಗಳು(Empty lakes), ಅದೃಶ್ಯವಾದ ಅಂತರ್ಜಲ(Under ground water), ಅಣೆಕಟ್ಟುಗಳು(Dam) ಬರಡಾಗಿ ನಿಂತಿವೆ. ಅದರಲ್ಲೂ ಉತ್ತರ ಕರ್ನಾಟಕದ(North Karnataka) ಜಿಲ್ಲೆಗಳ ಪರಿಸ್ಥಿತಿ ದೇವರಿಗೆ ಪ್ರೀತಿ. ಆದರೆ  ಕೊಪ್ಪಳದ (Koppal) ಈ ಗ್ರಾಮಗಳಲ್ಲಿ ಪ್ರತಿ ವರ್ಷ ಬೇಸಿಗೆ ಬಂತೆಂದರೆ ಕುಡಿವ ನೀರಿನ ಸಮಸ್ಯೆ(Drinking water problem) ಎದುರಾಗುತ್ತಿತ್ತು. ಆದರೆ ಈ ಬಾರಿ ನೀರಿನ ಸಮಸ್ಯೆ ಇಲ್ಲ. ಕಾರಣ ಗ್ರಾಮಸ್ಥರು ಹಾಗೂ ಸ್ಥಳೀಯ ಆಡಳಿತಗಳು ಕುಡಿವ ನೀರಿನ ಕೆರೆಗಳನ್ನು ಸಂರಕ್ಷಿಸಿದ್ದು(Save Lakes). ಸದ್ಯ ಈ ಭಾಗದಲ್ಲಿ ಕುಡಿವ ನೀರಿಗೆ ಯಾವುದೇ ತೊಂದರೆ ಇಲ್ಲ.

ಹಿಂದೆ ಒಂದು ಕಾಲವಿತ್ತು. ಆಗ ಕೊಳವೆ ಬಾವಿಗಳಿರಲಿಲ್ಲ. ಕುಡಿಯುವ ನೀರಿಗಾಗಿ ಬಾವಿಗಳು ಹಾಗೂ ಕೆರೆಗಳನ್ನು ಕಟ್ಟಿಸುತ್ತಿದ್ದರು. ಆದರೆ ಕಾಲಾಂತರದಲ್ಲಿ ಬಾವಿಗಳು ಹಾಗೂ ಕೆರೆಗಳು ಕಣ್ಮರೆಯಾಗಿವೆ. ಈಗ ಬಾವಿಗಳ ಹಾಗೂ ಕೆರೆಗಳನ್ನು ಹುಡುವ ಸ್ಥಿತಿ ಬಂದಿದೆ. ಆದರೆ ಕೊಪ್ಪಳ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಈಗಲೂ ಸಹ ಕುಡಿವ ನೀರಿಗಾಗಿ ಜನರು ಪುರಾತನವಾಗಿರುವ ಕೆರೆಗಳನ್ನೇ ಆಶ್ರಯಿಸಿದ್ದಾರೆ.

40 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಕೆರೆಯೇ ಆಧಾರ : ಇಲ್ಲಿಯ ಜನರು ಕುಡಿಯಲು ಕೆರೆ ನೀರನ್ನೆ ಬಳಸುತ್ತಾರೆ. ಕೆರೆಯ ನೀರು ಆರೋಗ್ಯಕ್ಕೆ ಒಳ್ಳೆಯದು ಎಂಬ ಭಾವನೆ ಇದೆ. ಇದೇ ಕಾರಣಕ್ಕೆ ಗ್ರಾಮಸ್ಥರು ತಮ್ಮೂರಿನ ಕೆರೆಯನ್ನು ಮುತುವರ್ಜಿ ವಹಿಸಿ ಸಂರಕ್ಷಿಸುತ್ತಿದ್ದಾರೆ. ಕೊಪ್ಪಳ ತಾಲೂಕಿನ ಕವಲೂರು, ಅಳವಂಡಿ, ಕುಕನೂರು ತಾಲೂಕಿನ ಬಿನ್ನಾಳ, ಯರೇಹಂಚಿನಾಳ, ಬನ್ನಿಕೊಪ್ಪ, ಯಲಬುರ್ಗಾ ತಾಲೂಕಿನ ಕರಮುಡಿ ಸೇರಿ ಸುಮಾರು 40 ಹಳ್ಳಿಗಳಲ್ಲಿ ಈಗಲೂ ಜನರಿಗೆ ಕುಡಿವ ನೀರನ್ನು ಕೆರೆಗಳಿಂದಲೇ ನೀಡಲಾಗುತ್ತಿದೆ. ಈ ಗ್ರಾಮಗಳಲ್ಲಿ ಹಿಂದಿನ ಕಾಲದಲ್ಲಿಯೇ ಹಿರಿಯರು ತಮ್ಮ ಗ್ರಾಮಗಳ ಜನರಿಗಾಗಿ ಕಟ್ಟಿಸಿರುವ ಕೆರೆಗಳನ್ನು ಸಂರಕ್ಷಿಸುತ್ತಿದ್ದಾರೆ.

ಕೆರೆಗೆ ಇದೆ ಕಾವಲು : ಕಾಲಮಾನ ಬದಲಾದಂತೆ ಕೆರೆಗಳ ಸುತ್ತಲು ಒಡ್ಡುಗಳನ್ನು ಹಾಕಿಕೊಂಡು ಕೆರೆಗೆ ತಂತಿ ಬೇಲೆ ಹಾಕಿಕೊಂಡಿದ್ದಾರೆ. ಮಳೆಗಾಲದಲ್ಲಿ ಮಳೆಯ ನೀರು ಈ ಕೆರೆಗಳಿಗೆ ಬಂದು ತುಂಬಿಕೊಳ್ಳುತ್ತವೆ. ಅದಕ್ಕಾಗಿ ಈಗ ಜನಸಂಖ್ಯೆ ಹೆಚ್ಚಾದಂತೆ ಕೆರೆಯ ನಾಲಾವನ್ನು ವಿಸ್ತರಿಸಿದ್ದಾರೆ. ಕೆಲವು ಕೆರೆಗಳನ್ನು ಕಾಯುವದಕ್ಕಾಗಿ ಒಬ್ಬೊಬ್ಬರನ್ನು ನೇಮಿಸಿಕೊಂಡಿದ್ದಾರೆ.

ಒಂದು ವರ್ಷಕ್ಕೆ ಬೇಕಾಗುವಷ್ಟು ನೀರು ಸಂಗ್ರಹ : ಪ್ರತಿ ವರ್ಷ ಮಳೆಗಾಲದ ಮುನ್ನ ಕೆರೆಗೆ ಬರುವ ನೀರಿನ ನಾಲಾ ಸ್ವಚ್ಛತೆ, ಕೆರೆಯಲ್ಲಿ ಗಲೀಜು ಮಾಡದಂತೆ ಸುತ್ತಲು ಜಂಗಲ್‌ನ್ನು ಕತ್ತರಿಸಿರುತ್ತಾರೆ. ಕೆರೆಯಲ್ಲಿ ಹೂಳು ತೆಗೆಸಿ ಕೆರೆಯನ್ನು ಒಂದು ವರ್ಷಕ್ಕೆ ಬೇಕಾಗುವಷ್ಟು ನೀರು ಸಂಗ್ರಹಿಸುತ್ತಾರೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಈ ಕೆರೆಗಳನ್ನು ತುಂಬಿಸಿಕೊಂಡು ಬೇಸಿಗೆಯಲ್ಲಿ ಈ ನೀರನ್ನು ಬಳಸುತ್ತಾರೆ.

ಕಹಿ ನೆನಪು ಮರುಕಳಿಸದಂತೆ ತಡೆ : ಕಳೆದ ಹತ್ತು ವರ್ಷಗಳ ಹಿಂದೆ ಇದೇ ಕೆರೆಗಳನ್ನು ಆಶ್ರಯಿಸಿದವರಿಗೆ ಕುಡಿವ ನೀರಿನ ಸಮಸ್ಯೆ ಇತ್ತು. ಹೂಳು ತುಂಬಿದ್ದರಿಂದ ನೀರು ನಿಲ್ಲುತ್ತಿರಲಿಲ್ಲ. ಆಗ ಗ್ರಾಮಗಳಲ್ಲಿ ಕುಡಿವ ನೀರಿಗೆ ಹಾಹಾಕಾರ. ಬಸ್‌ಗಳ ಮೂಲಕ ಪಕ್ಕದ ಊರಿಗೆ ಹೋಗಿ ನೀರು ತರುತ್ತಿದ್ದರು. ಕೆರೆಯ ನೀರಿಗಾಗಿ ಗಲಾಟೆಯಾಗಿರುವ ಉದಾಹರಣೆ ಇದೆ. ಆದರೆ ಈಗ ಕಾಲ ಬದಲಾಗಿದೆ. ಹಿಂದಿನ ಕಹಿ ನೆನಪು ಮರುಕಳಿಸದಂತೆ ಕೆರೆಗಳಲ್ಲಿ ನೀರು ತುಂಬಿಸಿಕೊಳ್ಳುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯ ಕಪ್ಪು ಭೂಮಿ ಹೊಂದಿರುವ ಪ್ರದೇಶದಲ್ಲಿ ಈ ದೃಶ್ಯ ಸಾಮಾನ್ಯವಾಗಿದೆ. ಎರೆಭೂಮಿಯಲ್ಲಿ ಹರಿದು ಬರುವ ನೀರು ತಿಳಿಯಾಗಿರುತ್ತದೆ. ಅಲ್ಲದೇ ಕೆರೆಯಲ್ಲಿ ನೀರು ನಿಲ್ಲಿಸುತ್ತಿರುವದರಿಂದ ಈ ನೀರು ತಿಳಿಯಾಗಿರುತ್ತದೆ. ಇದೇ ನೀರನ್ನು ಹಿಂದಿನ ಕಾಲದಿಂದಲೂ ಜನರು ಕುಡಿಯುತ್ತಿದ್ದಾರೆ. ಈ ಮಧ್ಯೆ ಈ ಭಾಗದಲ್ಲಿ ನದಿಯ ಮೂಲಕ ನೀರನ್ನು ಸಹ ಇದೇ ಕೆರೆಗಳಿಗೆ ತುಂಬಿಸುತ್ತಿರುವದರಿಂದ ಈ ಬಾರಿಯ ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆಯಾಗುವುದಿಲ್ಲ. ಕೆರೆಯಲ್ಲಿ ನೀರು ಕಡಿಮೆಯಾದರೆ ಆಗ ನದಿಗಳ ಮೂಲಕ ನೀರು ತುಂಬಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಹಿತಿ ನೀಡಿದ್ದಾರೆ.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 14.06.2026 | ಜೂನ್ 20ರವರೆಗೆ ಕರಾವಳಿ-ಮಲೆನಾಡಿನಲ್ಲಿ ಇದೇ ವಾತಾವರಣ| ಎಲ್‌ನಿನೋ ಪ್ರಭಾವದ ನಡುವೆ ಮಳೆ ನೀರು ಸಂಗ್ರಹಕ್ಕೆ ರೈತರಿಗೆ ಸಲಹೆ
June 14, 2026
3:27 PM
by: ಸಾಯಿಶೇಖರ್ ಕರಿಕಳ
ತುಮಕೂರಿನಲ್ಲಿ ಅಡಿಕೆ ಕ್ರಾಂತಿ -ತೆಂಗಿನ ತೋಟಗಳ ಜಾಗದಲ್ಲಿ ಅಡಿಕೆ ಬೆಳೆ..! 94 ಸಾವಿರ ಹೆಕ್ಟೇರ್‌ ದಾಟಿದ ವಿಸ್ತೀರ್ಣ
June 14, 2026
12:52 PM
by: ದ ರೂರಲ್ ಮಿರರ್.ಕಾಂ
ಬ್ರಿಕ್ಸ್ ‘ಇಂದೋರ್ ಘೋಷಣೆ’ ಅಂಗೀಕಾರ – ಜಾಗತಿಕ ಕೃಷಿ ಸಹಕಾರಕ್ಕೆ ಹೊಸ ದಿಕ್ಕು
June 14, 2026
6:54 AM
by: ದ ರೂರಲ್ ಮಿರರ್.ಕಾಂ
2026ರಲ್ಲಿ ‘ಸೂಪರ್ ಎಲ್‌ನಿನೊ’ ಎಚ್ಚರಿಕೆ – ಭಾರತದ ಮುಂಗಾರು ಮತ್ತು ಕೃಷಿಗೆ ಹೊಸ ಸವಾಲು?
June 13, 2026
9:19 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror