ಕೇರಳದಲ್ಲಿರುವ ಶಬರಿಮಲೆ ದೇವಸ್ಥಾನವು ಶನಿವಾರದಿಂದ ಅಂದರೆ ಮಲೆಯಾಳ ತಿಂಗಳ ಕುಂಭಂನ ಐದು ದಿನಗಳವರೆಗೆ ನಡೆಯುವ ಪೂಜೆಗಾಗಿ ಮತ್ತೆ ತೆರೆಯಲಿದೆ.
ದೇವಸ್ಥಾನದ ಟ್ರಸ್ಟ್ ಪ್ರಕಾರ ಮೇಲ್ಶಾಂತಿ ಪರಮೇಶ್ವರನ್ ನಂಬೂದಿರಿ ಅವರು ದೇವಸ್ಥಾನದ ಶ್ರೀಕೋವಿಲ್ ಅನ್ನು ಸಂಜೆ 5.30 ಕ್ಕೆ ತಂತ್ರಿ ಮಹೇಶ್ ಮೋಹನರು ಅವರ ಉಪಸ್ಥಿತಿಯಲ್ಲಿ ತೆರೆಯಲ್ಲಿದ್ದಾರೆ. ಆ ದಿನ ದೇವಸ್ಥಾನದಲ್ಲಿ ಯಾವುದೇ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುವುದಿಲ್ಲ. ಮಾತ್ರವಲ್ಲ ಐದು ದಿನಗಳವರೆಗೆ ನಡೆಯುವ ಪೂಜೆಯಲ್ಲಿ ಒಟ್ಟು 15,000 ಭಕ್ತರಿಗೆ ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಆರ್ಟಿ-ಪಿಸಿಆರ್ ಪರೀಕ್ಷೆಯ ನಂತರ ಕೋವಿಡ್-19 ನೆಗೆಟಿವ್ ಪ್ರಮಾಣಪತ್ರವನ್ನು ನೀಡುವವರಿಗೆ ಅಥವಾ ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶವನ್ನು ಅನುಮತಿಸಲಾಗುತ್ತದೆ. ಫೆಬ್ರವರಿ 17 ರ ರಾತ್ರಿಯೊಳಗೆ ಮಾಸಿಕ ಪೂಜೆಗಳು ಮುಗಿಸ ನಂತರ ದೇವಾಲಯವನ್ನು ಮುಚ್ಚಲಾಗುತ್ತದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel