ಶಿಶಿಲದಲ್ಲಿರುವ ಈ ದೈವದ ವಿಶೇಷತೆ..! | ಜೋಡಿ ದೈವಗಳಿಗೆ ಜೀವಂತ ಕೋಳಿ ಅರ್ಪಣೆ |

May 14, 2024
9:32 PM
ಗ್ರಾಮೀಣ ಭಾಗದ ನಂಬಿಕೆಗಳು ಮಾನಸಿಕವಾಗಿ ಹೆಚ್ಚು ಶಕ್ತಿ ನೀಡುತ್ತವೆ. ಅಂತಹದೊಂದು ನಂಬಿಕೆ ಶಿಶಿಲದಲ್ಲಿ ಇದೆ. ಈ ವಿಶೇಷ ನೇಮದ ಬಗ್ಗೆ "ಸಮನ್ವಯ" ಅವರು ಬರೆದಿದ್ದಾರೆ...

ಸಾಕು ಪ್ರಾಣಿಗಳಿಗೆ,ಪಶುಗಳಿಗೆ,ಮನುಷ್ಯರಿಗೆ ಸಂಕಟ ಬಂದಾಗ ದೈವ-ದೇವರನ್ನು ನೆನಪಾಗುತ್ತದೆ. ಇಲ್ಲೂ ಹಾಗೆ, ಏನಾದರೂ ಸಂಕಟವಾದರೆ ತಕ್ಷಣ ನೆನಪಾಗುವುದು ಈ ದೈವ. ಹೀಗಾಗಿ ಇಲ್ಲಿ ಜೋಡಿ ದೈವಗಳಿಗೆ ಕೋಳಿ ಹಾರಿಸುದಾಗಿ ಪ್ರಾಥಿ೯ಸಿದರೆ ಸಂಕಷ್ಠ ದೂರವಾಗುವುದೆಂದು ನಂಬಿಕೆ ಇದೆ. ಈ ವಿಶೇಷವಾದ ದೈವದ ಕೋಲ ನಡೆಯುವುದು ಶಿಶಿಲೇಶ್ವರ ದೇವರ ಜಾತ್ರಾ ಸಮಯದಲ್ಲಿ. 

Advertisement
Advertisement

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ  ಶಿಶಿಲೇಶ್ವರ ದೇವರ ಜಾತ್ರಾ ಸಮಯದಲ್ಲಿ ಕಿಲಮರಿತ್ತಾಯ ಜೋಡು ನೇಮವು ವೈಶಿಷ್ಟ್ಯವನ್ನು ಪಡೆದಿದೆ. ಜಾತ್ರಾ ಆರಂಭದ ದಿನ ಹಾಗೂ ಮರುದಿನ ಈ ನೇಮೋತ್ಸವ ನಡೆದುಕೊಂಡು ಬರುತ್ತಿದೆ. ದೈವರಾದನೆಯಲ್ಲಿ ದೈವದ ಅಣಿಗಳಿಗೆ ಮಹತ್ವದ ಪ್ರಾಧಾನ್ಯತೆ ಇದ್ದು, ಶಿಶಿಲದಲ್ಲಿರುವ ಕಿಲಮರಿತ್ತಾಯನ ಅಣಿ ಉಳಿದ ದೈವಗಳಂತಲ್ಲ. ಈ ದೈವದ ಅಣಿಯು ದೈವದ ಮುಂಭಾಗದಲ್ಲಿ ಇರುವುದೇ ಇಲ್ಲಿನ ವಿಶೇಷ. ಕಿಲಮರಿತ್ತಾಯ ಜೋಡಿ ದೈವಗಳಿಗೆ ನೇಮದ ಕೊನೆಯ ಹಂತದಲ್ಲಿ ಜೀವಂತ ಕೋಳಿಯನ್ನು ಅಡಿಕೆ ಹಾಳೆಯಿಂದ ನಿಮಿ೯ಸಿದ ದೈವದ ಅಣಿ ಮತ್ತುದೈವಕ್ಕೆ ಜೀವಂತ ಕೋಳಿ ಹಾರಿಸುವ ಪದ್ದತಿ ಇದೆ.ಹಾರಿಸಿದ ಕೋಳಿಗಳನ್ನು ನತ೯ಕ ಕುಟುಂಬಸ್ಥರು ಸಾಕಾಣಿಕೆ ಮಾಡುತ್ತಾರೆ.ಜೋಡಿ ದೈವಗಳಿಗೆ ಕೋಳಿ ಹಾರಿಸುದಾಗಿ ಪ್ರಾಥಿ೯ಸಿದರೆ ಸಂಕಷ್ಠ ದೂರವಾಗುವುದೆಂದು ನಂಬಿಕೆ ಇದೆ.

ಸಾಕು ಪ್ರಾಣಿಗಳಿಗೆ,ಪಶುಗಳಿಗೆ,ಮನುಷ್ಯರಿಗೆ ಸಂಕಟ ಬಂದಾಗ ಕಿಲಮರಿತ್ತಾಯ ಜೋಡಿ ದೈವಗಳಿಗೆ ನೇಮದ ಕೊನೆಯ ಹಂತದಲ್ಲಿ ಜೀವಂತ ಕೋಳಿಯನ್ನು ಅಡಿಕೆ ಹಾಳೆಯಿಂದ ನಿಮಿ೯ಸಿದ ದೈವದ ಅಣಿ ಮತ್ತುದೈವಕ್ಕೆ ಜೀವಂತ ಕೋಳಿ ಹಾರಿಸುತ್ತಾರೆ.

ಬರಹ :
ಸಮನ್ವಯ

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 23-06-2025 | ಜೂ.29 ರಿಂದ ಬೆಳೆಗಳಿಗೆ ಔಷಧಿ ಸಿಂಪಡಣೆಗೆ ಅವಕಾಶ ಸಿಗಬಹುದೇ..? | ಜೂನ್ ಕೊನೆಯಲ್ಲಿ ಮುಂಗಾರು ದುರ್ಬಲಗೊಳ್ಳಬಹುದಾ..?
June 23, 2025
1:26 PM
by: ಸಾಯಿಶೇಖರ್ ಕರಿಕಳ
ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ
June 23, 2025
1:18 PM
by: ದ ರೂರಲ್ ಮಿರರ್.ಕಾಂ
ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವಕ್ಕೆ ಆದ್ಯತೆ | ಮಹಿಳಾ ನೇತೃತ್ವದ ಅಭಿವೃದ್ಧಿಗೆ ಮುನ್ನುಡಿ
June 23, 2025
12:03 PM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಳ
June 23, 2025
11:40 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group