ತರಕಾರಿ ಬೀಜಗಳನ್ನು ಯಾವ ತಿಂಗಳು ವಾರಗಳಲ್ಲಿ ಬಿತ್ತನೆ ಮಾಡಬೇಕು | ನಿರ್ವಿಷ ನಿರಂತರ ತರಕಾರಿ ಕ್ಯಾಲೆಂಡರ್

July 25, 2024
5:45 PM

ರೈತರು ಭತ್ತ ನಾಟಿ‌ ಮಾಡಬೇಕಾದರೆ ದಿನ‌ ನೋಡುವ ವಾಡಿಕೆ ಇದೆ. ಅದೇ ರೀತಿ ತರಕಾರಿ ಬೀಜ ಬಿತ್ತಲು ದಿನ, ವಾರ ಇದೆ. ನಮಗೆ ಮನಸ್ಸು‌ ಬಂದ ಹಾಗೆ ಬಿತ್ತಿದರೆ ಫಲ ಸರಿಯಾಗಿ ಕೈ ಸೇರುವುದಿಲ್ಲ. ಅದಕ್ಕೆಂದೇ ದಿನ, ತಿಥಿ ಇದೆ.. ಶಿವಪ್ರಸಾದ್ ಮುರ್ಮುಡಿಯವರು ನಿಖರವಾದ ವಾರ, ದಿನ ತಿಥಿಗಳನ್ನು ಹೇಳುತ್ತಾರೆ. ಅದರಂತೆ ತರಕಾರಿ ಬೀಜ ಬಿತ್ತಿದರೆ ಫಲಸು ಕೈ ಹಿಡಿಯುವುದು ಖಂಡಿತ.

Advertisement
Advertisement
  1. April ತಿಂಗಳ 20 ನೇ ತಾರೀಕಿನ ನಂತ್ರ ಬರುವ ಅಮಾವಾಸ್ಯೆಯ ಹಿಂದೆ ಮುಂದಾಗಿ ಶನಿವಾರ/ಬುಧವಾರ,ಮಿ/ ತಿಥಿ ಬಿಟ್ಟು ಗೊಬ್ರಗಳಿಂದ ಮಣ್ಣು ಹದಮಾಡಿದ ಏರು ಮಡಿಗಳಲ್ಲಿ ಎರಡಿಂದ ಮೂರು ಇಂಚು ಆಳದಲ್ಲಿ ಈ ಕೆಳಗಿನ ತರಕಾರಿ ಬೀಜಗಳನ್ನು ಬಿತ್ತುವುದು. ನೀರು ಖಂಡಿತಾ ಹಾಕಲೇಬಾರದು. ಮಳೆ ಬಂದು ಅದರಷ್ಟಕ್ಕೆ ಸ್ವಾಭಾವಿಕವಾಗಿ ಹುಟ್ಟಬೇಕು. 1.ಸೊರೆ.2.ಪಡುವಲ. 3.ದಾರಳೆ. 4.ಋಷಿಕೇಶದಾರಳೆ. 5.ಹಾಗಲ. 6.ಅಳಸಂಡೆ. 7.ಕುಂಬಳ. 8.ಚೀನಿಕಾಯಿ, ಬೆಂಡೆ ಹಾಕಬೇಡಿ.
  2.  May ತಿಂಗಳ ಅಖೇರಿಗೆ ಬರುವ ಅಮವಾಸ್ಯೆ ಯ ಅಕ್ಕ ಪಕ್ಕ , ಮಿ/ ತಿಥಿ ಬಿಟ್ಟು ಶನಿವಾರ/ ಬುಧವಾರ ದಂದು ಬೆಂಡೆ ಬೀಜ ಬಿತ್ತಿ.
  3. ಮಳೆಗಾಲ ಬಂದ ತಕ್ಷಣ ಬೇಸಿಗೆಯ ಬದನೆ ಗಿಡಗಳ ಗೆಲ್ಲುಗಳನ್ನು ಸವರಿ ಸಾಲುಬಿಡಿಸಿ ಗೊಬ್ರ ಕೊಡಿ,ಸಮೃದ್ಧ ಬೆಳೆ.
  4. June Last week/ July First week ಬರುವ ಅಮವಾಸ್ಯೆ (ಆರ್ಧ್ರಾ ನಕ್ಷತ್ರ ) ಮುಳ್ಳು ಸೌತೆ,ಬೀಜ ಹಾಕುದು.
  5. July last week/ August first week ಬರುವ ಆಟಿ ಅಮವಾಸ್ಯೆ ಹತ್ರ ಸೌತೆ,ಕುಂಬಳ ಚೀನಿಕಾಯಿ ಬೀಜ ಬಿತ್ತುವುದು. ಬಸಾಳೆ ನಡುವುದು.
  6. ಮೇಲಿನ ದಿನವೇ ಬದನೆ ಬೀಜ ಬಿತ್ತುವುದು. Oct ನಲ್ಲಿ ನಡಲು ತಯಾರಿಗಾಗಿ.
  7. August last ಗೆ ತೊಂಡೆ ಬಳ್ಳಿ ನಡುವುದು,/ ಬಳ್ಳಿ ಕತ್ತರಿಸುವುದು.8. Oct 20 ರಿಂದ 30 ರ ಅಂದಾಜು ಬದನೆ ಗಿಡ ನಡುವುದು.
  8. Nov last week ಬೆಂಡೆ ಬೀಜ ಹಾಕುವುದು.
  9. Nov last week/Dec first week ಆಟಿಸೌತೆ ಮಾಡಿದ ಸಾಲನ್ನು ಹರಡಿ , ಕೊಚ್ಚಿ ಹರಿವೆ ಬೀಜ ಬಿತ್ತುವುದು.
  10. Dec last week ಅಳಸಂಡೆ, ಪಡುವಲ,ಹಾಗಲ,ದಾರಳೆ ಸಾಲು ಕಣಿ ಮಾಡಿವಬೀಜ ಬಿತ್ತುವುದು.
  11. Feb 25/30 ಅಂದಾಜು ಸೌತೆಕಾಯಿ, ಕುಂಬಳ,ಸೊರೆ,ಚೀನಿಕಾಯಿ, ಮುಳ್ಳುಸೌತೆ, ಬೆಂಡೆ ಬೀಜ ಬಿತ್ತುವುದು.
  12. April last week/Mayfirt week ಅಳಸಂಡೆ,ಮುಳ್ಳುಸೌತೆ, ಸೌತೆ, ಬೆಂಡೆ ಬೀಜ ಬಿತ್ತುವುದು.

ವಿ.ಸೂ.: ಎಲ್ಲಾಬೀಜ ಬಿತ್ತುವ ದಿನ ಮಿ ಯಿಂದ ಅಂತ್ಯಗೊಳ್ಳುವ ತಿಥಿ ಬಿಡಿ.( ಸಪ್ತಮಿ,ಅಷ್ಟಮಿ,ನವಮಿ……..)
ವಾರ : ಶನಿವಾರ,ಬುಧವಾರ, ಬೀಜ ಬಿತ್ತನೆಗೆ ಅತ್ಯಂತ ಯೋಗ್ಯ ಇವಿಷ್ಟು ಅನುಸರಿಸಿದರೆ ಬೆಳೆ ಸಮೃದ್ಧ. ರೋಗಭಾದೆ ಕಡಿಮೆ.
ನೆಲಬಸಾಳೆ, ಗಡ್ಡೆ ತರಕಾರಿ ಜೊತೆಯಲ್ಲಿರಲಿ.

ಮಾಹಿತಿ : ಪಿ. ಶಿವಪ್ರಸಾದ, ವರ್ಮುಡಿ (ಸಮೃದ್ಧಿ ಗಿಡಗೆಳೆತನ ಸಂಘದ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ )

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಫಸಲ್ ಭೀಮಾ ಯೋಜನೆ ಹಣ ಬಿಡುಗಡೆ | ಕಲಬುರಗಿ ಜಿಲ್ಲೆಗೆ ಹೆಚ್ಚಿನ ಬೆಳೆ ವಿಮೆ
July 26, 2025
3:56 PM
by: The Rural Mirror ಸುದ್ದಿಜಾಲ
ಲಡಾಖ್‌ನ ದ್ರಾಸುದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ| ವೀರಯೋಧರಿಗೆ ಪಾದಯಾತ್ರೆ ಮೂಲಕ ಗೌರವ
July 26, 2025
3:16 PM
by: The Rural Mirror ಸುದ್ದಿಜಾಲ
ಬದುಕಿಗೆ ಧರ್ಮದ ತಳಹದಿ ಅಗತ್ಯ : ರಾಘವೇಶ್ವರ ಶ್ರೀ
July 26, 2025
2:08 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 26-07-2025 | ಜುಲೈ ಅಂತ್ಯದವರೆಗೂ ಸಾಮಾನ್ಯ ಮಳೆ | ಕಾರಣ ಏನು ?
July 26, 2025
11:18 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group