Advertisement
ಸುದ್ದಿಗಳು

ಶಂಭೋ ಶಂಕರನನ್ನು ನೆನೆದು, ಪುನೀತರಾಗುವ ದಿನ ಶಿವರಾತ್ರಿ | ಕೈಲಾಸನಾಥನಿಗಾಗಿ ಪೂಜೆ, ವ್ರತ, ಜಾಗರಣೆ

Share

ಮಹಾಶಿವರಾತ್ರಿ(Shivaratri) ಭಾರತದ್ಯಾಂತ(India) ಆಚರಿಸಲ್ಪಡುವ ವಿಶೇಷ ವ್ರತ. ಮಹಾಶಿವರಾತ್ರಿ ಎಂದರೆ ಶಿವನ ವಿಶ್ರಾಂತಿಯ ಕಾಲ ಮಾಘಮಾಸದ ಕೃಷ್ಣ ಪಕ್ಷ ಚತುರ್ದಶಿ, ಅಂದು ದೇವಲೋಕದಲ್ಲಿ (ಅಲ್ಲಿಯ ಕಾಲ ಗಣನೆಗೆ ಅನುಸಾರವಾಗಿ ಪ್ರತಿದಿನ ಶಿವನು ರಾತ್ರಿಯ ಒಂದು ಪ್ರಹಾರ ವಿಶ್ರಾಂತಿಯನ್ನು ಪಡೆಯುವಾಗ ಅದು ಪೃಥ್ವಿಯ ಮೇಲೆ ವರ್ಷಕ್ಕೊಂದು ಸಲ ಮಹಾಶಿವರಾತ್ರಿ ಎಂದು ಆಚರಿಸಲಾಗುತ್ತದೆ,) ಆ ಮಹಾ ಶಿವರಾತ್ರಿಯು, ಮಾ.8 ರಂದು   ರಾತ್ರಿ12:06 ರಿಂದ 12:58 ರವರೆಗೆ ನಡುರಾತ್ರಿ ಬರುತ್ತದೆ.

Advertisement
Advertisement

ಇಂತಹ ಕಾಲದಲ್ಲಿ ಶಿವ ತತ್ಪದ ಕಾರ್ಯ ನಿಂತು ಹೋಗುತ್ತದೆ. ಅಂದರೆ ಆ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಅವಸ್ಥೆಗೆ ಹೋಗುತ್ತಾನೆ. ಶಿವನ ಸಮಾಧಿ ಸ್ಥಿತಿ ಅಂದರೆ ಶಿವನು ತನಗಾಗಿ ಸಾಧನೆ ಮಾಡುವ ಕಾಲ ಈ ಸಮಯದಲ್ಲಿ ತಿಳಿದು ಅಥವಾ ತಿಳಿಯದೋ ಶಿವ ಪೂಜೆ ಉಪಾಸನೆ ಮಾಡಿದ್ದಲ್ಲಿ ನಮ್ಮ ಜೀವನದ ಎಲ್ಲಾ ಕುಂದು ಕೊರತೆ ಇದ್ದರೂ ಸಹ ಶೇಕಡ 100 % ಪರಿಹಾರವಾಗಿ ಶುಭಫಲ ದೊರೆಯುತ್ತದೆ. ಕಾರಣ ಈ ಕಾಲಾವಧಿಯಲ್ಲಿ ವಿಶ್ವದ ತಮೋ ಗುಣವನ್ನು ಶಿವ ತತ್ವ ಸ್ವೀಕರಿಸುವುದಿಲ್ಲ. ಆದ್ದರಿಂದ ವಿಶ್ವದಲ್ಲಿ ತಮೋ ಗುಣ ಬಹಳ ಹೆಚ್ಚಾಗುತ್ತದೆ. ಅದರ ಪರಿಣಾಮ ನಮ್ಮ ಮೇಲಾಗಬಾರದೆಂದು ಮಹಾಶಿವರಾತ್ರಿಯ ವ್ರತವನ್ನು ಕೈಗೊಂಡು ನಾವು ಶಿವ ತತ್ವವನ್ನು ಆಕರ್ಷಿಸಬೇಕು.

ಮಹಾಶಿವರಾತ್ರಿ ವೃತಕ್ಕೆ, ಉಪವಾಸ, ಪೂಜೆ, ಜಾಗರಣೆ  ಮಾಡುವುದರಿಂದ ಹಾಗೂ ಅಂದು ಚತುರ್ದಶಿ ಎಂದು ಬೆಳಿಗ್ಗೆ ಮಹಾಶಿವರಾತ್ರಿಯ ವ್ರತವನ್ನು ಸಂಕಲ್ಪ ಮಾಡಿ ಸಾಯಂಕಾಲ ನದಿಯಲ್ಲಿ ಅಥವಾ ಕೆರೆಯಲ್ಲಿ ಶಾಸ್ತ್ರೋಕ್ತವಾಗಿ ಸ್ನಾನ ಮಾಡಬೇಕು. ಬಸ್ಮಾ ಮತ್ತು ರುದ್ರಾಕ್ಷಿಗಳನ್ನು ಧರಿಸಬೇಕು.ಪ್ರದೋಷ ಕಾಲದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಿ ದೇವರ ಧ್ಯಾನವನ್ನು ಶಿವಪಂಚಾಕ್ಷರಿ ಮಂತ್ರದಿಂದ ಧ್ಯಾನ ಮಾಡುವುದರ ಮೂಲಕ, ಶಿವ ತ್ತತ್ವವನ್ನು ಆಕರ್ಷಿಸಬೇಕು.

ಅಂದಿನ ರಾತ್ರಿಯ ನಾಲ್ಕು ಪ್ರಹಾರಗಳಲ್ಲಿ ನಾಲ್ಕು ಪೂಜೆಗಳನ್ನು ಮಾಡಬೇಕೆಂದು ವಿಧಾನವಿದೆ. ಅದಕ್ಕೆ ಯಾಮ ಪೂಜೆ ಎನ್ನುತ್ತಾರೆ. ದೇವರಿಗೆ ಅಭಂಗ್ಯ ಸ್ನಾನ ಮಾಡಿಸಬೇಕು, ಅನು ಲೇಪನ ಮಾಡಿ ಮಾವಿನ ಹಾಗೂ ಬಿಲ್ವಪತ್ರೆಗಳನ್ನು ಅರ್ಪಿಸಬೇಕು. ಅಕ್ಕಿಯ ಹಿಟ್ಟಿನ 26 ದೀಪಗಳನ್ನು ಮಾಡಿ ಅವುಗಳನ್ನು ದೇವರಿಗೆ ಬೆಳಗಬೇಕು. ಈ ರೀತಿಯಾಗಿ ನಿರಂತರ ಸಂಪೂರ್ಣ ರಾತ್ರಿ ಮಾಡಿದ ನಂತರ ವ್ರತದ ಸಮಾಪ್ತಿಯನ್ನು ಮಾಡಬೇಕು.

ಅಂದಿನ ದಿನ, ದಿನವಿಡೀ ಶಿವನ ನಾಮ ಜಪ ಮಾಡಿ, ಸಾಧ್ಯವಾದರೆ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿ, ಶಿವನಿಗೆ ಬಿಳಿ ಅಕ್ಷತೆ ಬಿಳಿ ಹೂವು ಬಿಲ್ವಪತ್ರೆಯನ್ನು ಅರ್ಪಿಸಿ ಶಿವನ ದೇವಸ್ಥಾನಕ್ಕೆ ಹೋಗಿ ಶಿವನ ದರ್ಶನವನ್ನು ಮಾಡಿ, ಸಂತೃಪ್ತಿಯಿಂದ ಭಕ್ತಿಯಿಂದ ಶಿವರಾತ್ರಿಯ ಆಚರಣೆ ಮಾಡಿ ಪುನೀತರಾಗಿ.

ಮೂಲ : ಡಿಜಿಟಲ್‌ ಮೀಡಿಯ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಣ್ಣಿಲ್ಲದೇ ಅವಕಾಡೊ ಬೆಳೆ..! ಜೇನು ಸೇರಿಸಿದ ಕೃಷಿ ಈಗ ಹೊಸ ಟ್ರೆಂಡ್

2026 ರಲ್ಲಿ ಹೈಡ್ರೋಪೋನಿಕ್ ಅವಕಾಡೊ ಕೃಷಿ ಮತ್ತು ಜೇನು ಪರಾಗಸ್ಪರ್ಶದ ಸಂಯೋಜನೆ ಹೊಸ…

22 hours ago

ರೇಷ್ಮೆ ಗೂಡಿಗೆ 800 ರೂ.ವರೆಗೆ ಬೆಲೆ | ಚಾಮರಾಜನಗರದಲ್ಲಿ ರೈತರಿಗೆ ಲಾಭದಾಯಕ ಹಾದಿ

ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಗೂಡಿಗೆ ಕೆಜಿಗೆ 750ರಿಂದ 800 ರೂಪಾಯಿವರೆಗೆ ಬೆಲೆ ಸಿಗುತ್ತಿದೆ.…

22 hours ago

ಸ್ಥಳೀಯ ಚುನಾವಣೆಗಳಲ್ಲಿ ಇವಿಎಂಗೆ ಬ್ರೇಕ್ | ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಸಚಿವ ಸಂಪುಟ ಹಸಿರು ನಿಶಾನೆ

ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಮತದಾನ…

23 hours ago

ಕೇಂದ್ರವು ಕೇರಳದ ರಬ್ಬರ್ ಕ್ಷೇತ್ರವನ್ನು ದುರ್ಬಲಗೊಳಿಸುತ್ತಿದೆ – ಆರೋಪ

ಕೇಂದ್ರ ಸರ್ಕಾರವು ರಾಜ್ಯದ ರಬ್ಬರ್ ಕೃಷಿಯನ್ನು ಈಶಾನ್ಯಕ್ಕೆ ಸ್ಥಳಾಂತರಿಸುವ ಮೂಲಕ ರಬ್ಬರ್ ಕ್ಷೇತ್ರವನ್ನು…

23 hours ago

ಅಡಿಕೆ ಮಾರುಕಟ್ಟೆ ಸಮೀಕರಣ : ಬೆಲೆ ನಿರ್ಧಾರದ ಹಿಂದಿನ ಅರ್ಥಶಾಸ್ತ್ರ ಮತ್ತು ಮನೋವಿಜ್ಞಾನ

ಅಡಿಕೆ ಮಾರುಕಟ್ಟೆ ಎಂದರೆ ಕೇವಲ ಕೃಷಿ ಉತ್ಪನ್ನಗಳ ವಿನಿಮಯ ಕೇಂದ್ರವಲ್ಲ; ಅದೊಂದು ಸಂಕೀರ್ಣವಾದ…

1 day ago

ಅಡಿಕೆ ಕಳ್ಳಸಾಗಣೆ ಜಾಲಕ್ಕೆ ಮಿಝೋರಂ ಸರ್ಕಾರದ ಬಿಗಿ ಹಿಡಿತ – ಅಡಿಕೆ ಮಾರುಕಟ್ಟೆ ಚೇತರಿಕೆ ಸಾಧ್ಯತೆ

ಮಿಝೋರಂ ಸರ್ಕಾರವು ಅಡಿಕೆ ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ. ಯಾವುದೇ…

1 day ago