ಸುದ್ದಿಗಳು

ರಾಜ್ಯದಲ್ಲಿ ಉಂಟಾದ ಹಾಲಿನ ಕೊರತೆ : ಸಮಸ್ಯೆ ನೀಗಿಸಲು KMF ಸೂಪರ್ ಐಡಿಯಾ..

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್-KMF  ) ನಂದಿನಿ ಬ್ರ್ಯಾಂಡ್ ಪೂರ್ಣ ಕೆನೆಭರಿತ ಹಾಲಿನ ದರವನ್ನು ಹೆಚ್ಚಿಸಿದೆ. ಹಾಲು 6% ಕೊಬ್ಬು ಹಾಗೂ 9% SNF (ಕೊಬ್ಬುರಹಿತ ಘನಪದಾರ್ಥ ಹಾಲಿನಲ್ಲಿರುವ ಪೋಷಕಾಂಶದ ಭಾಗವು ಹಾಲಿನ ಕೊಬ್ಬು ಮತ್ತು ನೀರನ್ನು ಹೊರತುಪಡಿಸಿ ಬೇರೆಯಾಗಿರುತ್ತದೆ) ಅನ್ನು ಒಳಗೊಂಡಿದ್ದು ಹಿಂದೆ ಗ್ರಾಹಕರಿಗೆ ಒಂದು ಲೀಟರ್ಗೆ ರೂ 50 ಹಾಗೂ ಅರ್ಧಲೀಟರ್ಗೆ ರೂ 24 ಕ್ಕೆ ದೊರೆಯುತ್ತಿತ್ತು. ಆದರೀಗ ಗ್ರಾಹಕರು  ಅದೇ ಬೆಲೆಯನ್ನು ನೀಡಿ 900 ಮಿಲಿ ಹಾಗೂ 450 ಮಿಲಿ ಹಾಲಿನ ಪ್ಯಾಕ್ಗಳನ್ನು ಖರೀದಿಸುವಂತಾಗಿದ್ದು ಕೆಎಂಎಫ್ ಹಾಲಿನ ಕೊರತೆಯನ್ನು ನೀಗಿಸಲು ತಂತ್ರ ಹೂಡಿದೆ.

Advertisement
Advertisement

ಅದೇ ಬೆಲೆ ಪ್ರಮಾಣ ಮಾತ್ರ ಕಡಿಮೆ:ಸಾಬೂನು, ಶ್ಯಾಂಪೂ, ಬಿಸ್ಕತ್ತು, ತಂಪು ಪಾನೀಯಗಳಿಗೆ ಅದೇ ದರವನ್ನು ವಿಧಿಸುತ್ತಾರೆ ಆದರೆ ಉತ್ಪನ್ನ ಪ್ರಮಾಣ ಮಾತ್ರ ಕಡಿಮೆಯಾಗಿರುತ್ತದೆ. ಇಂತಹ ಮಾರುಕಟ್ಟೆ ತಂತ್ರವನ್ನು ಹಲವಾರು ಗ್ರಾಹಕ ಸರಕುಗಳ ಕಂಪನಿಗಳು ವರ್ಷಗಳಿಂದ ಅನುಸರಿಸುತ್ತಿದ್ದರೂ ಈ ರೀತಿಯ ತತ್ವವನ್ನು ಹಾಲಿಗೆ ಅಳವಡಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಬೆಲೆ ಅದೇ ಆಗಿರುತ್ತದೆ ಆದರೆ ಪ್ರಮಾಣದಲ್ಲಿ ಮಾತ್ರ ವ್ಯತ್ಯಾಸವಿರುತ್ತದೆ.

ಹಾಲಿನ ಹಾಗೂ ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಳ:KMF ನವೆಂಬರ್ 24 ರಿಂದ ತನ್ನ ಎಲ್ಲಾ ರೀತಿಯ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂಪಾಯಿಗಳಷ್ಟು ಹೆಚ್ಚಿಸಿತ್ತು. ಸರಬರಾಜು ನಿಂತು ಹೋಗಿರುವುದರಿಂದ ಹೆಚ್ಚಿನ ಒತ್ತಡ ಉಂಟಾಗುತ್ತಿದೆ. ವಿಶೇಷವಾಗಿ ಕೊಬ್ಬಿನ ಕೊರತೆ ಇರುವುದರಿಂದ ಪೂರ್ಣ ಕೆನೆಭರಿತ ಹಾಲಿನ ದರ ಹೆಚ್ಚಿಸಲು ಹಾಗೂ ಕರ್ನಾಟಕದ ಹೊರಗೆ ತುಪ್ಪದ ಮಾರಾಟವನ್ನು ನಿಲ್ಲಿಸಲಾಯಿತು ಎಂದು ಉದ್ಯಮದ ಮೂಲಗಳು ತಿಳಿಸಿವೆ.

KMF ಭಾರತದ ಎರಡನೇ ಅತಿದೊಡ್ಡ ಡೈರಿ ಸಂಸ್ಥೆ:271.34 LKPD ಹಾಲನ್ನು ಸಂಗ್ರಹಿಸುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಅಮೂಲ್‌ನ ನಂತರ KMF ಭಾರತದ ಎರಡನೇ ಅತಿದೊಡ್ಡ ಡೈರಿ ಸಂಸ್ಥೆಯಾಗಿದ್ದು, ಅದರ ಜಿಲ್ಲಾ ಒಕ್ಕೂಟಗಳು 2021-22 ರಲ್ಲಿ ದಿನಕ್ಕೆ ಸರಾಸರಿ 81.64 ಲಕ್ಷ ಕೆಜಿ (LKPD) ಹಾಲನ್ನು ಸಂಗ್ರಹಿಸುತ್ತವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೆಎಂಎಫ್‌ನ ಸಂಗ್ರಹಣೆಯು 9-10 ಎಲ್‌ಕೆಪಿಡಿ ಕಡಿಮೆಯಾಗಿದೆ. ಇದೀಗ ಸಂಸ್ಥೆಯು ಹೋಟೆಲ್ ಹಾಗೂ ಇತರ ಬೃಹತ್ ಗ್ರಾಹಕರಿಗೆ ಹಾಲು ಸರಬರಾಜು ಮಾಡುವುದನ್ನು ನಿಲ್ಲಿಸಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ದೇಶಕ್ಕೆ ತಟ್ಟಿದೆ ಹಾಲಿನ ಕೊರತೆಯ ಬಿಸಿ:ಹಾಲಿನ ಕೊರತೆ ಬರಿಯ ಕರ್ನಾಟಕಕ್ಕೆ ಮಾತ್ರ ತಟ್ಟಿದ ಸಮಸ್ಯೆಯಲ್ಲ ಬದಲಿಗೆ ದೇಶದಾದ್ಯಂತ ಹಾಲಿನ ಕೊರತೆ ಇದೆ. ಮೊಸರು, ಲಸ್ಸಿ ಮತ್ತು ಐಸ್‌ಕ್ರೀಮ್‌ಗೆ ಬೇಡಿಕೆಯೊಂದಿಗೆ, ಏಪ್ರಿಲ್-ಜೂನ್ ಅವಧಿಯಲ್ಲಿ, ಪ್ರಸ್ತುತ ಕೊರತೆಯು ತೀವ್ರಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.  ಕಳೆದ ವರ್ಷ ಮೇವು ಹಾಗೂ ಇನ್ನಿತರ ಮೇವಿನ ಉತ್ಪನ್ನಗಳ ಬೆಲೆ ಹೆಚ್ಚಾದುದೇ ಇದಕ್ಕೆ ಕಾರಣ.

Advertisement

ಮೇವು ಹಾಗೂ ಇನ್ನಿತರ ಉತ್ಪನ್ನಗಳ ಬೆಲೆ ಹೆಚ್ಚಳ:ಬೆಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ ರೈತರು ಹಿಂಡಿಯ ಪ್ರಮಾಣವನ್ನು ಗರ್ಭಿಣಿ ಹಸು ಹಾಗೂ ಕರುಗಳಿಗೆ ಕಡಿಮೆ ಮಾಡಿದರು. ಅಂತೆಯೇ ಕಡಿಮೆ ಮೇವು ನೀಡುತ್ತಿದ್ದರು. ಇದರಿಂದ ಹಾಲಿನ ಗುಣಮಟ್ಟ ಕುಸಿಯಿತು, ಅಂತೆಯೇ ಜಾನುವಾರುಗಳನ್ನು ಕಾಡಿದ್ದ ಮುದ್ದೆ ಚರ್ಮ ಕಾಯಿಲೆ (ಲಂಪಿ ಸ್ಕಿನ್ ಡಿಸೀಸ್) ಹಾಲಿನ ಉತ್ಪಾದನೆಯಲ್ಲಿ ಇನ್ನಷ್ಟು ಕುಸಿತವನ್ನುಂಟು ಮಾಡಿದವು. ಕೋವಿಡ್ ನಂತರ ಹಾಲಿಗೆ ಬೇಡಿಕೆ ಹೆಚ್ಚಿದರೂ ಕೆಲವೊಂದು ಕಾರಣಗಳಿಂದ ಹಾಲಿನ ಗುಣಮಟ್ಟ ಕುಸಿಯಲಾರಂಭಿಸಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹೊಸರುಚಿ | ಹಲಸಿನ ಹಣ್ಣಿನ ಜಾಮ್

ಹಲಸಿನ ಹಣ್ಣಿನ ಜಾಮ್ ಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣು 3…

6 hours ago

ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?

ಅಡಿಕೆಗೆ ಸಂಬಂಧಿಸಿ ಸುಮಾರು 7 ಸಮಿತಿಗಳು-ವರದಿಗಳು ಆಗಿವೆ. ಎಲ್ಲಾ ಸಂದರ್ಭದಲ್ಲೂ ಅಡಿಕೆಯ ಪರ್ಯಾಯ…

7 hours ago

ಮೇ ಕೊನೆಯ ವಾರದಂದು ಈ ಐದು ರಾಶಿಯವರಿಗೆ ಶುಕ್ರ ದೆಸೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

7 hours ago

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ

ಕೆಲ ದೇವಾಲಯಗಳು ತಮ್ಮ ಶಿಲ್ಪಕಲೆ, ಇತಿಹಾಸ, ಸೌಂದರ್ಯಕ್ಕೆ ಹೆಸರಾದರೆ ಮತ್ತೆ ಕೆಲವು ಭಕ್ತರ…

16 hours ago

ಕಾಯಕ ಗ್ರಾಮ  ಯೋಜನೆ | ಹಿಂದುಳಿದ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸಲಹೆ

ʼಕಾಯಕ ಗ್ರಾಮʼ ಯೋಜನೆಯಡಿ ಹಿಂದುಳಿ ದಿರುವ  ಗ್ರಾಮ ಪಂಚಾಯತಿಯನ್ನು  ದತ್ತು ಸ್ವೀಕಾರ ಮಾಡಬೇಕೆಂದು…

16 hours ago

ಡೆಂಘೀ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರದ ಸೂಚನೆ

ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ದೃಷ್ಟಿಯಿಂದ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು…

16 hours ago