ಸಕ್ಕರೆ ಕಾಯಿ ಅಥವಾ ಶುಗರ್ ಎಂದೆಲ್ಲಾ ಕರೆಯುವ ಆರೋಗ್ಯದ ಸಮಸ್ಯೆ ಕಂಡುಬರುವುದೇ ನಮ್ಮ ಆಹಾರದಲ್ಲಿ. ನವಜಾತ ಶಿಶುಗಳಲ್ಲಿಯೂ ಈ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ. ಏಕೆಂದರೆ ತುಂಬು ಗರ್ಣಿಣಿಯರಾದ ಬಳಿಕ ಬಯಕೆ ಎಂಬ ನೆಪ ಇಟ್ಟುಕೊಂಡು ಸಿಕ್ಕಿದೆಲ್ಲ ತಿನ್ನುವ ಹವ್ಯಾಸಗಳು ಮುಂದೊಂದಿನ ಪ್ರಾಣಕ್ಕೆ ಕುತ್ತು ತರುತ್ತದೆ. ನಾಲಗೆಯ ರುಚಿಗೆಂದು ಹೆಚ್ಚು ಸಿಹಿಯನ್ನು ತಿಂದರೆ ಇದೇ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ಸಕ್ಕರೆ ಕಾಯಿಲೆಗಳನ್ನು ಸೀಮಿತದಲ್ಲಿಟ್ಟುಕೊಳ್ಳಲು ನಮ್ಮ ಮನೆಯ ಮದ್ದುವೆ ಸಾಕು ಅವುಗಳೆಂದರೆ:
ನೆನೆಸಿದ ಮೆಂತ್ಯೆ ಕಾಳು: ರಾತ್ರಿ ಒಂದು ಲೋಟ ನೀರಿಗೆ ಒಂದು ಚಮಚ ಮೆಂತ್ಯೆ ಕಾಳುವನ್ನು ನೀರಿನಲ್ಲಿ ನೆನೆಸಿ ಮರುದಿನ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಅದರಲ್ಲಿರುವ ಫೈಬರ್ ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಇದು ಮುಖದ ಸೌಂದರ್ಯ ವನ್ನು ಹೆಚ್ಚಿಸಲೂ ಸಹಾಕಾರಿ.
ಬಾರ್ಲಿ: ಬೇಸಿಗೆ ಸಮಯದಲ್ಲಿ ಬಾರ್ಲಿ ಗಂಜಿ ಅಥವಾ ಬಾರ್ಲಿ ನೀರನ್ನು ಸೇವಿಸುವುದರಿಂದ ಬೀಟಾ-ಗ್ಲುಕನ್ ಇನ್ಸುಲಿನ್ ಪ್ರತಿಕ್ರಿಯೆಯನ್ನು ಸುಧಾರಿಸುತ್ತದೆ.
ಕರಿಬೇವಿನ ಸೊಪ್ಪು: ದೈನಂದಿನ ಆಹಾರದಲ್ಲಿ ಕರಿಬೇವು ಸೇರಿಸಿಕೊಳ್ಳುವುದು ಉತ್ತಮ. ಏಕೆಂದರೆ ಇದರ ಎಲೆ ಆಂಟಿ-ಡಯಾಬೆಟಿಕ್ ಅನ್ನು ಹೊಂದಿಕೊಂಡಿದೆ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಿಂದ ಜಗಿಯುವುದರಿಂದ ಹೊಟ್ಟೆ ಹಾಗೂ ಕೂದಲಿನ ಸಮಸ್ಯೆಗಳು ನಿವಾರಿಸುತ್ತದೆ.
ನೆಲ್ಲಿಕಾಯಿ: ಬೆಟ್ಟದ ನೆಲ್ಲಿಕಾಯಿ ಇದರಲ್ಲಿ ಕ್ರೋಮಿಯಂ ಅಂಶವುಇನ್ಸುಲಿನ್ ಕಾರ್ಯಕ್ಕೆ ಬೆಂಬಲ ನೀಡುತ್ತದೆ ಮತ್ತು ಕಾರ್ಬೋಹೈಡ್ರೇಟ್ಗಳ ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ. ಮಾತ್ರವಲ್ಲ ಕೂದಲಿನ ಸಮಸ್ಯೆಗೂ ಸಹಾಕಾರಿ.
ಹಾಗಲಕಾಯಿ: ಇದರಲ್ಲಿ ಚರಾಂತಿನ್ ಮತ್ತು ಪೀನ್ಸುಲೀನ್ ಎಂಬ ಸಕ್ರಿಯ ಪದಾರ್ಥಗಳಿವೆ. ಇವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ನೇರವಾಗಿ ಸಹಾಯ ಮಾಡುತ್ತದೆ.
ಅಗಸೆ ಬೀಜ: ಒಮೆಗಾ-3ಮತ್ತು ಫೈಬರ್ ಅನ್ನು ಒದಗಿಸುತ್ತವೆ, ಇದು ಸಕ್ಕರೆ ನಿಯಂತ್ರಣಕ್ಕೆ ಉತ್ತಮ.
ಅರಶಿನ: ಕಕ್ರ್ಯುಮಿನ್ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಇದನ್ನು ಆಡುಗೆಯಲ್ಲಿ ಬಳಸುವುದು ಅಥವಾ ರಾತ್ರಿ ಮಲಗುವ ಮುಂಚೆ ಒಂದು ಲೋಟ ಹಾಳಿಗೆ ಒಂದು ಚಿಟಿಕೆಯಷ್ಟು ಅರಶಿನ ಹುಡಿ ಹಾಕಿ ಕುಡಿಯುವುದರಿಂದ ದೇಹಕ್ಕೆ ತುಂಬ ಉತ್ತಿಮ.
ಈ ರೀತಿಯಲ್ಲಿ ಆಡುಗೆ ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳು ನಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟಕೊಳ್ಳುವುತ್ತದೆ. ಆದರೆ ನಮ್ಮ ಮನಸ್ಸು ಹಾಗೂ ನಾಲಗೆ ಹೊರಗಿನ ತಿಂಡಿಯನ್ನು ಬೇಡುವುದು ತುಂಬ ಕೆಟ್ಟದು. ಆರೋಗ್ಯವೇ ಜೀವನ ಎಂಬ ಮಾತನ್ನು ಗಮನದಲ್ಲಿಟ್ಟು ಕೊಂಡು ಆಹಾರಪದ್ಧತಿಯನ್ನು ಬದಲಾಗಿಸಿಕೊಂಡು ಹೋಗುವುದು ತುಂಬಾನೆ ಉತ್ತಮ.
ದೇಶೀಯ ಗ್ರಾಹಕರಿಗೆ ಸಿಎನ್ಜಿ, ಪಿಎನ್ಜಿ ಹಾಗೂ ಎಲ್ಪಿಜಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆ…
Bio Innovations APAC 2026 ಸಮಾವೇಶದಲ್ಲಿ ಗೋಡಾವರಿ ಬಯೋರೆಫೈನರೀಸ್ ತನ್ನ ಜೈವಿಕ ಉತ್ಪಾದನಾ…
ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತವಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಉತ್ತಮ ದರದ ಕಾರಣ…
ರಾಜ್ಯದಲ್ಲಿ ಗೃಹಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ಸಚಿವ…
ಅಡಿಕೆ ಇಳುವರಿ ಕುಸಿತಕ್ಕೆ ಎಲೆಚುಕ್ಕೆ, ಕೊಳೆ ರೋಗ ಹಾಗೂ ಹವಾಮಾನ ವೈಪರೀತ್ಯ ಪ್ರಮುಖ…
ಹೋಟೆಲ್ಗಳಲ್ಲಿ ಪ್ಲಾಸ್ಟಿಕ್ ಹಾಗೂ ಪತ್ರಿಕೆಗಳಲ್ಲಿ ಬಿಸಿ ಆಹಾರ ಪಾರ್ಸೆಲ್ ಮಾಡುವುದನ್ನು ನಿಷೇಧಿಸಲು ಅಧಿಕಾರಿಗಳಿಗೆ…