ಕದನ ವಿರಾಮ ಘೋಷಣೆ ಬಳಿಕ ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ರಾಜ್ಯಗಳ ಪರಿಸ್ಧಿತಿ ಸಾಮಾನ್ಯ ಸ್ಧಿತಿಗೆ ಮರುಳುತ್ತಿವೆ. ಪಾಕಿಸ್ತಾನದಿಂದ ಡ್ರೋಣ್ ಹಾಗೂ ಶೆಲ್ ದಾಳಿಗಳಿಗೆ ಸಾಕ್ಷಿಯಾಗಿದ್ದ ಜಮ್ಮು- ಕಾಶ್ಮೀರದ ಕೆಲವು ಜಿಲ್ಲೆಗಳು ಪಂಜಾಬ್, ರಾಜಾಸ್ತಾನ ಹಾಗೂ ಗುಜರಾತಿನ ನಿರ್ಧಿಷ್ಟ ಪ್ರದೇಶಗಳಲ್ಲಿ ಪರಿಸ್ಧಿತಿ ನಿಯಂತ್ರಣದಲ್ಲಿದ್ದು,ಶಾಂತಿ ಸ್ಧಾಪನೆಯ ಉದ್ದೇಶಕ್ಕೆ ಪೂರಕ ವಾತಾವರಣ ಕಂಡು ಬರುತ್ತಿದೆ. ಭದ್ರತಾ ಪಡೆಗಳು ವ್ಯಾಪಕ ನಿಗಾ ವಹಿಸಿದ್ದು, ಜನ ಜೀವನ ಸಹಜ ಸ್ಧಿತಿಗೆ ಮರಳುವ ನಿರೀಕ್ಷೆ ಇದೆ. ಕೆಲವೆಡೆ ಎಂದಿನಂತೆ ವ್ಯಾಪಾರ ವಹಿವಾಟು ಆರಂಭಗೊಂಡಿದೆ. ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿದೆ. ಶ್ರೀನಗರದಲ್ಲಿ ಜನ ಜೀವನ ಸಹಜ ಸ್ಧಿತಿಗೆ ಮರುಳುತ್ತಿದ್ದು, ವ್ಯಾಪಕ ನಿಗಾ ಹಾಗೂ ಕಟ್ಟೆಚ್ಚರ ಮುಂದುವರೆದಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel