ಹಸಿರು ಹಾವಿನ ಅಪರೂಪದ ಚಿತ್ರವನ್ನು ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಕಲ್ಮಡ್ಕ ಅವರು ಸೆರೆಹಿಡಿದಿದ್ದಾರೆ. ನಮ್ಮ ತೋಟಗಳಲ್ಲಿ ಸರ್ವೇಸಾಮಾನ್ಯವಾಗಿ ಕಾಣುವ ಹಸಿರುವ ಹಾವು ಎಲ್ಲರಿಗೂ ಮಾಮೂಲಿಯೇ. ಆದರೆ ಆ ಹಾವುಗಳು ತನ್ನ ವೈರಿಯನ್ನು ಹಿಮ್ಮೆಟ್ಟಿಸಲು ಭಯಪಡಿಸುತ್ತವೆ. ಅಂತಹ ಸಂದರ್ಭದ ಒಂದು ಅಪರೂಪ ಕ್ಷಣದ ಫೋಟೊವನ್ನು ಶಿವಸುಬ್ರಹ್ಮಣ್ಯ ಅವರು ಸೆರೆಹಿಡಿದ್ದಾರೆ.
ಈ ಹಾವಿನ ಚಿತ್ರ ತೆಗೆದಿರುವ ಬಗ್ಗೆ ಶಿವಸುಬ್ರಹ್ಮಣ್ಯ ಕಲ್ಮಡ್ಕ ಹೀಗೆ ಹೇಳಿದ್ದಾರೆ,
ನನ್ನ ತೋಟದಲ್ಲಿ ಅದೆಷ್ಟೋ ಬಾರಿ ಹಸಿರು ಹಾವನ್ನು ನೋಡಿದ್ದರೂ ಫೊಟೋ ತೆಗೆಯಲಾಗಲಿಲ್ಲ. ಕ್ಣಣದಲ್ಲೇ ಮಾಯವಾಗುತ್ತಿತ್ತು. ಪಶ್ಚಿಮ ಘಟ್ಟದಲ್ಲಿ ಮಿಸ್ ಆಗಿದ್ದು, ಈಗ ಚಿಕ್ಕಬಳ್ಳಾಪುರದ ಶ್ರೀನಿವಾಸಸಾಗರ ಜಲಾಶಯದ ದಂಡೆಯಲ್ಲೇ ಸಿಕ್ಕಿತು. ವಿಷಕಾರಿ ಹಾವು ಇದಲ್ಲ. ಧೈರ್ಯದಿಂದಲೇ ಹತ್ತಿರ ಹೋಗಿ ಕ್ಲಿಕ್ ಮಾಡುತ್ತಿದ್ದಂತೆ ಹಾವಿಗೆ ಸಿಟ್ಟು ಬಂದು, ರಕ್ಷಣಾತ್ಮಕವಾಗಿ , ವೈರಿಯನ್ನು ಹೆದರಿಸುವ ಭಂಗಿಯಲ್ಲಿ ಕೆಲವು ಸೆಕೆಂಡ್ ಗಳ ಕಾಲ ನಿಂತಿತು. ನೀಲಾಕಾಶದ ಹಿನ್ನೋಟದಲ್ಲಿ ಹಾವು ಯಾವುದೋ ಅನಿಮೇಷನ್ ಸಿನಿಮಾದಲ್ಲಿ ಇದ್ದಂತೆ ಕಾಣುತ್ತಿದೆ.
ಒಂದು ಔಷಧವು ಮಾರುಕಟ್ಟೆಗಿಳಿಯಲು ಹಲವು ಪರೀಕ್ಷೆಗೆ ಒಡ್ಡಿಕೊಂಡು, ಸರಕಾರದಿಂದ ಮಾನ್ಯತೆ ಪಡೆದಾಗ ಮಾತ್ರ…
ನಿಮ್ಮ ಮನೆಯು ಕೇವಲ ಒಂದು ಇಟ್ಟಿಗೆಯ ಗೋಡೆಗಳ ಸಮೂಹವಲ್ಲ; ಇದು ನಿಮ್ಮ ಜೀವನದ…
ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾದಿಂದ ಸ್ಪೇನ್, ಫ್ರಾನ್ಸ್ ಮತ್ತು ಸೈಬೀರಿಯಾದವರೆಗೆ ಭೀಕರ ಮಳೆ,…
ದೇಶದ ಕೃಷಿ ಹಾಗೂ ಪೂರಕ ವಲಯಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸಚಿವ ಸಂಪುಟ…
ರಾಜ್ಯದಲ್ಲಿ ನೆನೆಗುದ್ದಿಗೆ ಬಿದ್ದಿದ್ದ ಸುಮಾರು 43 ಸಾವಿರ ಕೋಟಿ ರೂಪಾಯಿ ವೆಚ್ಚದ ರೈಲ್ವೆ…
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರೀ ಮಳೆಯ…