ಹಸಿರು ಹಾವಿನ ಅಪರೂಪದ ಚಿತ್ರವನ್ನು ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಕಲ್ಮಡ್ಕ ಅವರು ಸೆರೆಹಿಡಿದಿದ್ದಾರೆ. ನಮ್ಮ ತೋಟಗಳಲ್ಲಿ ಸರ್ವೇಸಾಮಾನ್ಯವಾಗಿ ಕಾಣುವ ಹಸಿರುವ ಹಾವು ಎಲ್ಲರಿಗೂ ಮಾಮೂಲಿಯೇ. ಆದರೆ ಆ ಹಾವುಗಳು ತನ್ನ ವೈರಿಯನ್ನು ಹಿಮ್ಮೆಟ್ಟಿಸಲು ಭಯಪಡಿಸುತ್ತವೆ. ಅಂತಹ ಸಂದರ್ಭದ ಒಂದು ಅಪರೂಪ ಕ್ಷಣದ ಫೋಟೊವನ್ನು ಶಿವಸುಬ್ರಹ್ಮಣ್ಯ ಅವರು ಸೆರೆಹಿಡಿದ್ದಾರೆ.
ಈ ಹಾವಿನ ಚಿತ್ರ ತೆಗೆದಿರುವ ಬಗ್ಗೆ ಶಿವಸುಬ್ರಹ್ಮಣ್ಯ ಕಲ್ಮಡ್ಕ ಹೀಗೆ ಹೇಳಿದ್ದಾರೆ,
ನನ್ನ ತೋಟದಲ್ಲಿ ಅದೆಷ್ಟೋ ಬಾರಿ ಹಸಿರು ಹಾವನ್ನು ನೋಡಿದ್ದರೂ ಫೊಟೋ ತೆಗೆಯಲಾಗಲಿಲ್ಲ. ಕ್ಣಣದಲ್ಲೇ ಮಾಯವಾಗುತ್ತಿತ್ತು. ಪಶ್ಚಿಮ ಘಟ್ಟದಲ್ಲಿ ಮಿಸ್ ಆಗಿದ್ದು, ಈಗ ಚಿಕ್ಕಬಳ್ಳಾಪುರದ ಶ್ರೀನಿವಾಸಸಾಗರ ಜಲಾಶಯದ ದಂಡೆಯಲ್ಲೇ ಸಿಕ್ಕಿತು. ವಿಷಕಾರಿ ಹಾವು ಇದಲ್ಲ. ಧೈರ್ಯದಿಂದಲೇ ಹತ್ತಿರ ಹೋಗಿ ಕ್ಲಿಕ್ ಮಾಡುತ್ತಿದ್ದಂತೆ ಹಾವಿಗೆ ಸಿಟ್ಟು ಬಂದು, ರಕ್ಷಣಾತ್ಮಕವಾಗಿ , ವೈರಿಯನ್ನು ಹೆದರಿಸುವ ಭಂಗಿಯಲ್ಲಿ ಕೆಲವು ಸೆಕೆಂಡ್ ಗಳ ಕಾಲ ನಿಂತಿತು. ನೀಲಾಕಾಶದ ಹಿನ್ನೋಟದಲ್ಲಿ ಹಾವು ಯಾವುದೋ ಅನಿಮೇಷನ್ ಸಿನಿಮಾದಲ್ಲಿ ಇದ್ದಂತೆ ಕಾಣುತ್ತಿದೆ.
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…
ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…