ಸೀನುವುದು ಮತ್ತು ಕೆಮ್ಮುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ | ಯಾಕೆ ಗೊತ್ತಾ..?

July 9, 2024
6:42 PM

ಸೀನು(Sneezing) ಇದೊಂದು ನೈಸರ್ಗಿಕ ಕ್ರಿಯೆ(Natural Process) ಮತ್ತು ಜೀವನದಲ್ಲಿ ಪ್ರತಿಯೊಬ್ಬರೂ ಆಗಾಗ ಅನುಭವಿಸುವಂತಹ ಸಂಗತಿ. ಇದು ಹೇಳದೇ ಕೇಳದೆ ತಡೆಯಲು ಸಾಧ್ಯವಲ್ಲದ ಅಕಸ್ಮಾತ್ ಬಂದು ಬಿಡುವ ಒಂದು ಹಠಾತ್ ಕ್ರಿಯೆ. ಸಾಮಾನ್ಯವಾಗಿ ಸೀನು ಅನಾರೋಗ್ಯದ(Unhealthy) ಲಕ್ಷಣವೆಂದು ನಾವು ಭಾವಿಸುತ್ತೇವೆ. ಆದರೆ, ಸೀನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಅನೇಕರಿಗೆ ತಿಳಿದಿಲ್ಲ. ಆಯುರ್ವೇದ(Ayurveda) ಸಹ ಇದನ್ನು ಪ್ರತಿಪಾದಿಸುತ್ತದೆ.

Advertisement
Advertisement
  1. ಸೀನುವಿಕೆಯು ಹೃದಯದಿಂದ ಮೆದುಳು ಮತ್ತು ಹೊಟ್ಟೆಗೆ ಹಠಾತ್ ಒತ್ತಡದ ಬಲವನ್ನು ಉಂಟುಮಾಡುತ್ತದೆ, ಇದು ಇಡೀ ದೇಹದಲ್ಲಿನ ರಕ್ತದೊತ್ತಡವನ್ನು ಮುಂದಕ್ಕೆ ಏರುವಂತೆ ಮಾಡುತ್ತದೆ. ಇದು ರಕ್ತದ ಹರಿವಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ, ರಕ್ತನಾಳಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ತಲೆ ಹಗುರವಾಗುತ್ತದೆ.
  2. ಒಂದೆರಡು ದಶಕಗಳ ಹಿಂದಿನವರೆಗೂ ಅನೇಕ ಹಳೆಯ ಜನರು ತಂಬಾಕನ್ನು ಮೂಗಿನೊಳಗೆ ಎಳೆದುಕೊಂಡು (ನಸ್ಯ) ಕೃತಕವಾಗಿ ಸೀನಿ ತಲೆಯನ್ನು ಹಗುರಗೊಳಿಸಿಕೊಳ್ಳುತ್ತಿದ್ದರು.
  3. ಈಗ ಜನರು ಸೀನುವುದು ಒಂದು ಅಪರಾಧವೆಂಬಂತೆ ಅರ್ಥೈಸಿಕೊಂಡು ‘ಸಾರಿ’ ಎಂದು ಹೇಳುತ್ತಾರೆ. ಆದರೆ ಇದೊಂದು ಸಹಜ ಕ್ರಿಯೆ.
  4. ದೈನಂದಿನ ಜೀವನದಲ್ಲಿ ಹೃದ್ರೋಗದ ಸಂಭವವು ಪುರುಷರಿಗಿಂತ ಮಹಿಳೆಯರಲ್ಲಿ ಕಡಿಮೆಯಾಗಿದೆ, ಏಕೆಂದರೆ ಮಹಿಳೆಯರು ಅಡುಗೆ ಮಾಡುವಾಗ ಅಥವಾ ಮನೆಯನ್ನು ಸ್ವಚ್ಛಗೊಳಿಸುವಾಗ ನಿರಂತರವಾಗಿ ಸೀನುತ್ತಾರೆ. ಆದರೆ ಕಡಿಮೆ ಸೀನುವ ಮಹಿಳೆಯರ ಆರೋಗ್ಯವು ಯಾವುದೇ ಕಾರಣವಿಲ್ಲದೆ ಸ್ಥೂಲವಾಗಿರುತ್ತದೆ. ಸೀನುವಿಕೆಯು ಹೊಟ್ಟೆಯ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಕಿಬ್ಬೊಟ್ಟೆಯ ಸ್ನಾಯುಗಳನ್ನು ಸಂಕುಚಿತಗೊಳಿಸುತ್ತದೆ ಮತ್ತು ಹೀಗೆ ಕಪಾಲಭಾತಿ ಪ್ರಾಣಾಯಾಮವನ್ನು ಮಾಡಿದ ಪರಿಣಾಮವನ್ನು ಬೀರುತ್ತದೆ.
  5. ನೀವು ಬೆಳಿಗ್ಗೆ ಎದ್ದಾಗ ಮತ್ತು ರಾತ್ರಿ ಮಲಗುವಾಗ ಈ ಎರಡು ಸಮಯದಲ್ಲಿ ಸೀನುವಿಕೆಗೆ ಕ್ರಮಬದ್ಧವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೆ, ದೇಹವು ಆರೋಗ್ಯವಾಗಿರುವುದಲ್ಲದೆ, ಹೊಟ್ಟೆ ಮತ್ತು ತಲೆನೋವು ಶಾಶ್ವತವಾಗಿ ನಿಲ್ಲುತ್ತದೆ.
  6. ಕೃತಕ ಸೀನುವಿಕೆಗೆ ಮೂಗಿನಲ್ಲಿ ಸ್ವಚ್ಛವಾದ ದಾರವನ್ನು ಸ್ಪರ್ಶಿಸಿದರೆ ಸೀನು ಸುಲಭವಾಗಿ ಬರುತ್ತದೆ, ಇದಕ್ಕೆ ನಸ್ಯ ಬಳಸುವ ಅಗತ್ಯವಿಲ್ಲ.
  7. ಸೀನುವುದರಿಂದ ಮೂಗು ಮತ್ತು ಗಂಟಲನ್ನು ಸ್ವಚ್ಛವಾಗಿಡುತ್ತದೆ ಮತ್ತು ಮಾನಸಿಕ ಒತ್ತಡವನ್ನೂ ಕಡಿಮೆ ಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ಹೃದ್ರೋಗ ತಡೆಯಲು ರಾಮಬಾಣವೂ ಹೌದು. ಈ ಕ್ರಿಯೆಯನ್ನು ಪ್ರಕೃತಿ ಚಿಕಿತ್ಸೆ ವ್ಯವಸ್ಥೆಯಲ್ಲಿ ನೀಡಲಾಗಿದೆ.
  8.  ವಿದ್ಯಾರ್ಥಿಗಳು ಓದಿಕೊಳ್ಳುವಾಗ ನಿದ್ರೆ ಬರುತ್ತಿದ್ದರೆ ಮಧ್ಯ-ಮಧ್ಯ ಸೀನುವುದರಿಂದ ನಿದ್ರೆ ಹೊರಟು ಹೋಗುತ್ತದೆ ಮತ್ತು ಮೆದುಳು ಸಕ್ರಿಯವಾಗುತ್ತದೆ.
  9. ಸೀನುವುದರಿಂದ ಮುಖ ಸ್ವಲ್ಪ ಕೆಂಪಾಗುತ್ತದೆ ಮತ್ತು ಕಣ್ಣುಗಳು ಕೂಡ ಆರೋಗ್ಯಕರವಾಗಿರುತ್ತದೆ. ಮುಖವು ಕಾಂತಿಯುತವಾಗುತ್ತದೆ ಮತ್ತು ಕಣ್ಣುಗಳು ಸ್ಪಷ್ಟವಾಗುತ್ತವೆ.
  10.  ಸೀನುವಿಕೆಯು ತಲೆಯಲ್ಲಿನ ಆಲೋಚನಾ ಚಕ್ರವನ್ನು ಒಡೆಯುತ್ತದೆ ಮತ್ತು ಹೊಸ ಆಲೋಚನಾ ಚಕ್ರವು ಮತ್ತೆ ಪ್ರಾರಂಭವಾದಾಗ, ಮೆದುಳು ಉಲ್ಲಾಸಗೊಳ್ಳುತ್ತದೆ.
  11. ನಿರಂತರ ಶೀತ/ನೆಗಡಿಯಾಗುತ್ತಿದ್ದರೆ, ಅದು ಸೀನುವಿಕೆಯಿಂದ ಕಡಿಮೆಯಾಗುತ್ತದೆ. ಸ್ವಲ್ಪ ಸಮಯದ ನಂತರ ಅಂತಹ ನಿರಂತರ ಶೀತ ನಿಲ್ಲುತ್ತದೆ. ಸೀನುವಿಕೆಯು ಅಂತಹ ಅನೇಕ ಉಪಯುಕ್ತ ವಿಷಯಗಳೊಂದಿಗೆ ಸಂಬಂಧಿಸಿದೆ. ಹಠಾತ್ ಮತ್ತು ತಡೆಯಲಾಗದ ಸೀನುವಿಕೆ ಈ ಜೀವನದ ದೇವರ ಕೊಡುಗೆ.
  12. ಸೀನು ಮತ್ತು ಕೆಮ್ಮು ಎರಡು ನೈಸರ್ಗಿಕ ಪ್ರಕ್ರಿಯೆಗಳು ಅವು ದೇಹದ ಮೇಲೆ ಬೀರುವ ಪರಿಣಾಮಗಳಲ್ಲಿ ಸಾಕಷ್ಟು ಸಾಮ್ಯವಿದೆ ಹಾಗೂ ಸ್ವಲ್ಪಮಟ್ಟಿಗೆ ಭಿನ್ನತೆಯೂ ಇದೆ.
  13. ಮುಖ್ಯವಾಗಿ ಸೀನು ಮತ್ತು ಕೆಮ್ಮು ಏಕೆ ಬರುತ್ತವೆ ಎಂಬುದನ್ನು ಅರಿತುಕೊಳ್ಳಬೇಕು. ನಮ್ಮ ದೇಹಕ್ಕೆ ಅಪಾಯಕಾರಿಯ ಅಥವಾ ಬೇಡವಾದ ಸೂಕ್ಷ್ಮ ಪದಾರ್ಥಗಳು ನಮ್ಮ ಸ್ವಾಸನಾಳಗಳ ಮೂಲಕ ಒಳ ಸೇರಲು ಪ್ರಯತ್ನಿಸಿದಾಗ ಈ ಸೀನು ಮತ್ತು ಕೆಮ್ಮು ಅವುಗಳನ್ನು ರಭಸವಾಗಿ ಹೊರದಬ್ಬಿ ದೇಹವನ್ನು ರಕ್ಷಿಸುವ ಸಲುವಾಗಿ ಸೃಷ್ಟಿಕರ್ತನು ನಿರ್ಮಿಸಿದ ಕ್ರಿಯೆಗಳು.
  14. ಉದಾಹರಣೆಗೆ, ಮೂಗಿನಲ್ಲಿ ಧೂಳು ಅಥವಾ ಸೂಕ್ಷ್ಮಾಣುಗಳು ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಚಿಕ್ಕ ಇರುವೆ ಸೇರಿಕೊಂಡಾಗ ನಾವು ಸೀನದೇ ಇದ್ದರೆ ಏನಾದೀತು? ಊಹಿಸಿಕೊಳ್ಳಿ! ಈ ಬೇಡವಾದ ಪದಾರ್ಥಗಳು ನಮ್ಮ ಶ್ವಸನ ವ್ಯವಸ್ಥೆಯಲ್ಲಿ ಸೇರಿ ಅನಾರೋಗ್ಯವನ್ನು ಉಂಟುಮಾಡುತ್ತವೆ.
  15.  ಮೂಗಿನ ಮೂಲಕ ಹೋಗದೆ ಧೂಳು, ಸೂಕ್ಷ್ಮಾಣುಗಳು ನೇರವಾಗಿ ಗಂಟಲಿನ ಮೂಲಕ ಶ್ವಾಸನಾಳವನ್ನು ಪ್ರವೇಶಿಸಲು ಯತ್ನಿಸಿದಾಗ ಕೆಮ್ಮು ಬರುತ್ತದೆ. ಇದರಿಂದಾಗಿ, ಈ ಬೇಡದ ಪದಾರ್ಥಗಳು ರಭಸವಾಗಿ ಹೊರದೂಡಲ್ಪಡುತ್ತವೆ. ಅಲ್ಲದೆ, ಮೂಗು ಅಥವಾ ಶ್ವಾಸನಾಳಗಳಲ್ಲಿ ಕಫ (ಲೋಳೆ) ಶೇಖರಣೆಯಾಗಿದ್ದರೆ ಸೀನು ಅಥವಾ ಕೆಮ್ಮು ಬಂದಾಗ ಅದು ಸ್ವಚ್ಛವಾಗುತ್ತದೆ.
  16.  ಆದ್ದರಿಂದ ಆಗಾಗ ಕೆಮ್ಮು ಮತ್ತು ಸೀನು ಬರುವುದು ಅನಾರೋಗ್ಯದ ಲಕ್ಷಣವಲ್ಲ. ಆದರೆ, ಅದು ಸುರಕ್ಷಿತತೆಯ ಲಕ್ಷಣ.
  17. ಸೀನುವಾಗ ಮತ್ತು ಕೆಮ್ಮುವಾಗ ರಕ್ತವು ರಭಸದಿಂದ ದೇಹದಾದ್ಯಂತ ನೂಕಲ್ಪಡುತ್ತದೆ. ಇದರಿಂದ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮಗಳು ಉಂಟಾಗುತ್ತವೆ. ವಿಶೇಷವಾಗಿ ಹೃದಯದ ಅವರೋಧಗಳನ್ನು (ಹಾರ್ಟ್ ಬ್ಲಾಕೆಜ್ ಅನ್ನು) ತಡೆಯುವಲ್ಲಿ ಸೀನು ಮತ್ತು ಕೆಮ್ಮು ಬಹಳ ಉಪಯುಕ್ತ ನೈಸರ್ಗಿಕ ಕ್ರಿಯೆಗಳಾಗಿವೆ. ಇಇಸಿಪಿ ಎಂಬ ಆಧುನಿಕ ಚಿಕಿತ್ಸಾ ಪದ್ಧತಿಯಲ್ಲಿ ಇಂಥದೇ ಪ್ರಕ್ರಿಯೆಯ ಮೂಲಕ ಹೃದಯದ ಅವರೋದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಆಂಜಿಯೋಪ್ಲಾಸ್ಟಿಕ ಮತ್ತು ಬೈಪಾಸ್ ಶಸ್ತ್ರ ಚಿಕಿತ್ಸೆಯನ್ನು ತಪ್ಪಿಸಬಹುದು.
  18. ಸೀನುವಾಗ ಮತ್ತು ಕೆಮ್ಮುವಾಗ ಉಸಿರಿನ ರಭಸದ ಚಲನೆಯಿಂದ ಶ್ವಾಸಕೋಶಗಳಿಗೂ ಪ್ರಯೋಜನವಾಗುತ್ತದೆ. ಸಾಮಾನ್ಯ ಉಸಿರಾಟದಲ್ಲಿ ನಾವು ಶ್ವಾಸಕೋಶಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸುವುದಿಲ್ಲ. ಇದರಿಂದ ಶ್ವಾಸಕೋಶಗಳ ಅಡಿಭಾಗ ಮತ್ತು ಅಗ್ರಭಾಗದಲ್ಲಿ ಗಾಳಿಯ ಸಂಚಲನೆ ಸರಿಯಾಗಿ ಆಗದೆ ಶ್ವಾಸಕೋಶಗಳ ಕಾಯಿಲೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಸೀನಿದಾಗ ಮತ್ತು ಕೆಮ್ಮಿದಾಗ ಸಂಪೂರ್ಣ ಶ್ವಾಸಕೋಶಗಳಲ್ಲಿ ಗಾಳಿಯ ಚಲನೆಯಿಂದ ಶ್ವಾಸಕೋಶಗಳು ಸ್ವಚ್ಛವಾಗುತ್ತವೆ.
  19. ಆದ್ದರಿಂದ, ಸೀನು ಮತ್ತು ಕೆಮ್ಮನ್ನು ಔಷಧಿಗಳನ್ನು ಸೇವಿಸಿ ತಕ್ಷಣ ನಿಲ್ಲಿಸಲು ಪ್ರಯತ್ನಿಸುವುದು ಆರೋಗ್ಯಕ್ಕೆ ಹಾನಿಕಾರಕವೇ ಆಗುತ್ತದೆ.
  20.  ಸೀನು ಅಥವಾ ಕೆಮ್ಮು ವಿಪರೀತವಾಗಿದ್ದರೆ, ದೀರ್ಘಕಾಲ ಉಳಿದಿದ್ದರೆ, ಕಲುಷಿತ ಕಫ ಬರುತ್ತಿದ್ದರೆ ಅಥವಾ ಬೇರಾವುದೋ ಕಾಯಿಲೆಯ ಲಕ್ಷಣವಾಗಿದ್ದರೆ ಖಂಡಿತ ನಿರ್ಲಕ್ಷಿಸಬಾರದು; ಕೂಡಲೇ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು.

ಸೀನು ಮತ್ತು ಕೆಮ್ಮಿನ ದುಷ್ಪರಿಣಾಮಗಳು:  ಸೀನು ಅಥವಾ ಕೆಮ್ಮು ವಿಪರೀತವಾಗಿದ್ದರೆ ಅಥವಾ ದೀರ್ಘಕಾಲ ಉಳಿದರೆ ಇದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಹರ್ನಿಯಾ ಅಥವಾ ಮೂಲವ್ಯಾಧಿ ಕಾಯಿಲೆಗಳು ಉಲ್ಬಣಗೊಳ್ಳುತ್ತವೆ ಅಥವಾ ಇಲ್ಲದವರಿಗೆ ಆರಂಭವಾಗುವುದು ಸಾಧ್ಯವಿದೆ. ರಕ್ತದ ಅಧಿಕ ಒತ್ತಡ ಇರುವವರಿಗೆ ಕೆಲವು ಸಂದರ್ಭಗಳಲ್ಲಿ ಸೀನುವಾಗ ಅಥವಾ ಕೆಮ್ಮುವಾಗ ಮೆದುಳಿನಲ್ಲಿ ರಕ್ತನಾಳ ಒಡೆದು ರಕ್ತಸ್ರಾವವಾಗುವ ಅಥವಾ ಹೃದಯಘಾತವಾಗುವ ಸಂಭವ ಇರುತ್ತದೆ.

Advertisement

– ಹರ್ನಿಯಾ, ಮೂಲವ್ಯಾಧಿ, ವೆರಿಕೋಸ್ ವಿನ್, ರಕ್ತದ ಅಧಿಕ ಒತ್ತಡ, ಇತ್ಯಾದಿ ಕಾಯಿಲೆಗಳು ಇರುವವರು ಮತ್ತು ವೃದ್ಧರು ಸೀನು ಅಥವಾ ಕೆಮ್ಮನ್ನು ನಿರ್ಲಕ್ಷಿಸಬಾರದು. ಸೂಕ್ತ ಚಿಕಿತ್ಸೆಯಿಂದ ಕೂಡಲೇ ಪರಿಹಾರವನ್ನು ಪಡೆಯಬೇಕು.

– ಸೀನುವಾಗ ಮತ್ತು ಕೆಮ್ಮುವಾಗ ಸೋಂಕುಗಳು ಹರಡುವ ಹಾಗೂ ಅಕ್ಕಪಕ್ಕದವರ ಮೈಮೇಲೆ ಸಿಂಪಡಣೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಯಾವಾಗಲೂ ಸೀನುವಾಗ ಮತ್ತು ಕೆಮ್ಮುವಾಗ ಬಾಯಿ, ಮೂಗನ್ನು ಕೈ ವಸ್ತ್ರದಿಂದ ಮುಚ್ಚಿಕೊಳ್ಳಿ. ಉಪಯೋಗಿಸಿದ ಕೈ ವಸ್ತ್ರವನ್ನು ದಿನನಿತ್ಯ ಒಗೆದು ಬಳಸಿ.

Advertisement
ಬರಹ :
ಡಾ. ಪ್ರ. ಅ. ಕುಲಕರ್ಣಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅತೀವೃಷ್ಟಿಯಿಂದ ಹಾನಿಗೊಳಗಾದ ಪ್ರತಿಯೊಬ್ಬ ರೈತರಿಗೂ ಬೆಳೆ ಪರಿಹಾರಕ್ಕೆ ಸೂಚನೆ |
September 21, 2024
2:18 PM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ನೈಋತ್ಯ ಮುಂಗಾರು ದುರ್ಬಲ
September 21, 2024
2:15 PM
by: ದ ರೂರಲ್ ಮಿರರ್.ಕಾಂ
ಪ್ಲಾಸ್ಟಿಕ್ ಪೆಟ್, ಬಾಟಲ್ ಗಳ ಬಳಕೆ ನಿಷೇಧ | ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
September 21, 2024
2:10 PM
by: ದ ರೂರಲ್ ಮಿರರ್.ಕಾಂ
ಅಭಿವೃದ್ಧಿಯಾಗದ ಎರಡು ತಾಲೂಕು ಸಂಪರ್ಕದ ಗ್ರಾಮೀಣ ರಸ್ತೆ | ಪ್ರಧಾನಿ ಕಚೇರಿವರೆಗೂ ತಲಪಿತ್ತು ಬೇಡಿಕೆ | ನೂತನ ಸಂಸದರಿಗೂ ಮನವಿ |
September 21, 2024
12:26 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror