Advertisement
ಸುದ್ದಿಗಳು

53,200 ದ್ವೇಷ ಭಾಷಣಗಳನ್ನು ಪತ್ತೆಹಚ್ಚಿದ ಫೇಸ್‌ಬುಕ್ …! |

Share

ಸಾಮಾಜಿಕ ಜಾಲತಾಣಗಳ ಬಳಕೆ ಈಚೆಗೆ ಹೆಚ್ಚಾಗಿದೆ. ಅದರಲ್ಲೂ ಪೇಸ್‌ಬುಕ್‌, ಟ್ವಿಟ್ಟರ್‌,ಇನ್‌ಸ್ಟಾಗ್ರಾಂ ಬಳಕೆಯಲ್ಲಿ ಯುವಜನತೆ ಮುಂದಿದ್ದಾರೆ. ಇಂದಿನ ಬಹುತೇಕ ಚರ್ಚೆಗಳೂ ಸಾಮಾಜಿಕ ಜಾಲತಾಣಗಳ ಮೂಲಕ ನಡೆದು ಬಹಿರಂಗ ಚರ್ಚೆಗೆ ಕಾರಣವಾಗುತ್ತಿದೆ. ಅದರಲ್ಲೂ ದ್ವೇಷ ಭಾಷಣ, ಚರ್ಚೆ, ಅತ್ಯಂತ ಕೆಟ್ಟ ಪದಪ್ರಯೋಗಗಳೂ ಇಲ್ಲೇ ಆಗುತ್ತವೆ. ಮೆಟಾ ಬಿಡುಗಡೆ ಮಾಡಿರುವ ವರದಿ ಪ್ರಕಾರ ಎಪ್ರಿಲ್‌ನಲ್ಲಿ ಫೇಸ್‌ಬುಕ್  53,200 ದ್ವೇಷ ಭಾಷಣಗಳನ್ನು ಪತ್ತೆಹಚ್ಚಿದೆ ಹಾಗೂ ಕ್ರಮ ಕೈಗೊಂಡಿದೆ.

ಮೆಟಾ ಬಿಡುಗಡೆ ಮಾಡಿರುವ ವರದಿ ಪ್ರಕಾರ ಈಚೆಗೆ  ಫೇಸ್‌ಬುಕ್‌ ಬಳಕೆ ಹೆಚ್ಚಾಗಿದೆ. ಅದರ ಜೊತೆಗೆ ಸುಮಾರು 37.82 ರಷ್ಟು ಫೇಸ್‌ಬುಕ್‌ ನಲ್ಲಿ ಹಾಗೂ ಶೇಕಡಾ 86 ರಷ್ಟು ಇನ್‌ಸ್ಟಾಗ್ರಾಮ್‌ನಲ್ಲಿ ಹಿಂಸಾತ್ಮಕ ಮತ್ತು ಪ್ರಚೋದಿಸುವ ವಿಷಯಗಳು ನಡೆದಿದೆ. ಮೇ 31 ರಂದು ಬಿಡುಗಡೆಯಾದ ವರದಿಯ ಪ್ರಕಾರ, ಫೇಸ್‌ಬುಕ್ ಏಪ್ರಿಲ್‌ನಲ್ಲಿ 53,200 ದ್ವೇಷ ಭಾಷಣಗಳನ್ನು ಪತ್ತೆಹಚ್ಚಿದೆ, ಇದು ಮಾರ್ಚ್‌ನಲ್ಲಿ ಪತ್ತೆಯಾದ 38,600 ಕ್ಕೆ ಹೋಲಿಸಿದರೆ 37.82 ಶೇಕಡಾ ಹೆಚ್ಚಾಗಿದೆ.

ಮಾರ್ಚ್‌ನಲ್ಲಿ ಇನ್ಸ್ಟಾಗ್ರಾಮ್ ನಲ್ಲಿ‌ 41,300 ಹಿಂಸಾಚಾರ ಮತ್ತು ಪ್ರಚೋದನೆ-ಸಂಬಂಧಿತ ವಿಷಯ ವರದಿಯಾಗಿತ್ತು.  ಏಪ್ರಿಲ್‌ನಲ್ಲಿ 77,000 ಪ್ರಕರಣ ವರದಿಯಾಗಿದೆ.

ಅದರ ಜೊತೆಗೆ ಆತ್ಮಹತ್ಯೆ ಮತ್ತು ಗಾಯಗಳ ವರದಿಯೂ ಏರಿಕೆ ಕಂಡಿದ್ದು 7.15 ಲಕ್ಷ ಪ್ರಕರಣ ವರದಿಯಾಗಿದೆ.ಅಪಾಯಕಾರಿ ಸಂಘಟನೆ ಹಾಗೂ ವ್ಯಕ್ತಿಗಳಿಗೆ ಸಂಬಂಧಿಸಿ 85 ಸಾವಿರ ಪ್ರಕರಣ ದಾಖಲಾಗಿದೆ. ಅಪಾಯಕಾರಿ ಸಂಘಟನೆ ಹಾಗೂ ಸಂಸ್ಥೆಗಳು, ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿ 1.13 ಲಕ್ಷ ಪ್ರಕರಣವನ್ನು ಪೇಸ್‌ ಬುಕ್‌ ಪತ್ತೆ ಮಾಡಿದೆ. ಇದರ ಜೊತೆಗೆ ಲೈಂಗಿಕ ಪ್ರಕರಣ, ಮಕ್ಕಳಿಗೆ ಕಿರುಕುಳ, ಮಕ್ಕಳ ದುರ್ಬಳಕೆ ಇತ್ಯಾದಿ ಪ್ರಕರಣಗಳು ಹೆಚ್ಚಾಗಿ ನಡೆದಿದ್ದು  ಅಂತಹ ಘಟನೆಗಳನ್ನು ಪತ್ತೆ ಮಾಡಿದ ಪೇಸ್‌ ಬುಕ್‌ ತಕ್ಷಣವೇ ಕ್ರಮ ಕೈಗೊಂಡಿದೆ ಎಂದು ವರದಿ ಮಾಡಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

18 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

20 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

20 hours ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

23 hours ago

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

1 day ago