ಮಣ್ಣಿನ ದಿನ | ವಿಶ್ವ ಮಣ್ಣಿನ ದಿನಾಚರಣೆ | ಆರೋಗ್ಯಕರ ಮಣ್ಣಿನ ಮಹತ್ವದ ಕುರಿತು ಜಾಗೃತಿ ಮೂಡಿಸುವುದು |

December 5, 2021
9:00 AM

ಮಗಳು ಸೀಮಂತ ಮುಗಿಸಿ ನಿನ್ನೆಯಷ್ಟೇ ತವರು ಮನೆ ಸೇರಿದ್ದಳು. ಹೆತ್ತವರಿಗೆ ಅಜ್ಜ, ಅಜ್ಜಿಯಾಗುವ ಸಂಭ್ರಮ. ಬಹಳ ಖುಷಿಯಲ್ಲಿದ್ದರು. ದೂರದ ಬೆಂಗಳೂರು ನಗರದಲ್ಲಿರುವ ಮಗಳ ಮನೆಗೆ ಹೋಗುವುದೆಂದರೆ ಹಳ್ಳಿಯಲ್ಲಿರುವ ಹೆತ್ತವರಿಗೆ ಬಹಳ ಕಷ್ಟವಾಗುತ್ತಿತ್ತು. ಗದ್ದೆ, ತೋಟಗಳ ಉಸ್ತುವಾರಿಯನ್ನು ನಿಭಾಯಿಸ ಬೇಕಲ್ಲಾ. ಅಲ್ಲದೆ ಆಯಾ ಕಾಲದ ಕೃಷಿ ಕೆಲಸಗಳು ಕೈ ತುಂಬಾ ಇರುವ ಕಾರಣ ಸಣ್ಣ ಎರಡು ಮೂರು ದಿನಗಳ ಪ್ರಯಾಣವೂ ಕನಸೇ ಸರಿ. ಬೇಜಾರಿಲ್ಲ. ಅದರಲ್ಲೇ ಖುಷಿ ನೆಮ್ಮದಿ ಕಾಣುವ ರೈತಾಪಿ ಜನರಿಗೆ ಮಣ್ಣಿನ ಮಕ್ಕಳೆಂಬ ಹೆಮ್ಮೆ ಯಾವಾಗಲೂ ಜೀವಂತ.

Advertisement
Advertisement
Advertisement
Advertisement
Advertisement

ಮೊದಲ ಮಳೆಯ ಸಿಂಚನ. ಮನೆಗೆ ಬಂದ ಚೊಚ್ಚಲ ಬಸುರಿ ಕಾಣಿಸುತ್ತಿಲ್ಲವಲ್ಲ ಎಂಬ ಆತಂಕ ಅಮ್ಮನಿಗೆ. ಸಣ್ಣಗೆ ಸುರುವಾದ ಮಳೆ ತನ್ನ ಬಿರುಸನ್ನು ಹೆಚ್ಚಿಸಿತ್ತು. ಮಗಳನ್ನು ಹುಡುಕ ಹೊರಟ ಅಮ್ಮನಿಗೆ ದನದ ಕೊಟ್ಟಿಗೆಯಲ್ಲಿ ಪುಟ್ಟ ಕರು ಅಧಿತಿಯ ಮೈಸವರುತ್ತಾ ಕಣ್ಣು ಮುಚ್ಚಿ ಏನನ್ನೋ ಆಘ್ರಾಣಿಸುವ ಭಂಗಿಯಲ್ಲಿದ್ದ ಮಗಳು…. ಒಂದು ಅರ್ಥವಾಗಲಿಲ್ಕ ಏನಮ್ಮಾ ಇದೇನು ಮಾಡುತ್ತಿದ್ದಿ, ಮಳೆ ಬರುತ್ತಿದೆ, ಒಳಗೆ ನಡಿ ಎಂದು ಅಮ್ಮ ಕೇಳಿದಾಗ ಮಗಳದ್ದು ಒಂದೇ ಉತ್ತರ. ತೊಂದರೆ ಕೊಡ ಬೇಡ. ಮಣ್ಣಿನ ಪರಿಮಳ ತೆಗೆದು ಕೊಳ್ಳುತ್ತಿದ್ದೇನೆ. ಸುಮ್ಮನೆ ಉಪದ್ರ ಮಾಡ ಬೇಡ ಎಂದ ಮಗಳ ಮಾತಿಗೆ ತಲೆದೂಗಿದ ಅಮ್ಮ ಮೆಲ್ಲನೆ ಒಳ ಹೋದಳು.

Advertisement

ಮಣ್ಣಿನ ಪರಿಮಳ, ನಾವು, ಮಣ್ಣಿನೊಂದಿಗೇ ಮಿಳಿತವಾಗಿರುವವರು. ಮಣ್ಣು , ನಾವು ಬೇರೆಯಲ್ಲ. ನಮ್ಮ ಹುಟ್ಟು, ಬೆಳವಣಿಗೆ, ಬದುಕು ಎಲ್ಲವೂ ಮಣ್ಣಿನೊಂದಿಗೆ ಸೇರಿದೆ.

ಪರಿಸರದ ಗಿಡಮರಗಳೆಲ್ಲವೂ ನಮ್ಮ ಬಾಳಿನೇರಿಳಿತಗಳಲ್ಲಿ ನೇರ ಪಾಲುದಾರರು. ಅವುಗಳೆಲ್ಲ ಸರಿಯಿದ್ದರೆ ನಮಗೆ ಆರೋಗ್ಯ, ಜೀವನಕ್ಕೆ ಆಧಾರ. ಫಲವತ್ತಾದ ಮಣ್ಣು ಉತ್ತಮ ಪರಿಸರವನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಅಗತ್ಯವಾದ ಪೋಷಕಾಂಶಗಳಿಂದ ಸಮೃದ್ಧವಾದ ಮಣ್ಣು ಇರುವ ಭೂಮಿ ನಮಗೆ ದೊರೆತುದು ಪುಣ್ಯವೇ.

Advertisement

ಇಂದು ಅತಿಯಾದ ಸಂಪನ್ಮೂಲಗಳ ಬಳಕೆಯ ನೇರ ಪರಿಣಾಮವಾಗುತ್ತಿರುವುದು ಮಣ್ಣಿನ ಮೇಲೆ ಅಂದರೆ ಭೂಮಿಯ ಮೇಲೆ. ಹಲವು ರೀತಿಯ ಕಲ್ಮಶಗಳನ್ನು ನೇರವಾಗಿ ಮಣ್ಣಿನ ಮೇಲೆ ಸುರಿದು ಹಾಳು ಮಾಡುತ್ತಿದ್ದೇವೆ. ಮಾಲಿನ್ಯ ವನ್ನು ನಿಯಂತ್ರಿಸುವ ಅಗತ್ಯ ವಿದೆ. ಸಕಾಲದಲ್ಲಿ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ಮಣ್ಣಿನೊಂದಿಗೆ ಭೂಮಿಯನ್ನು ಕಳೆದುಕೊಳ್ಳ ಬೇಕಾಗುತ್ತದೆ. ಹಾಗಾಗಿ ಮಣ್ಣಿನ ಜೀವ ವೈವಿಧ್ಯ ವನ್ನು ರಕ್ಷಿಸಿ. ಆರೋಗ್ಯಕರ ಮಣ್ಣಿನ ಪರಿಸರ ವ್ಯವಸ್ಥೆಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.‌

ಡಿಸೆಂಬರ್ 5 ರನ್ನು ವಿಶ್ವ ಮಣ್ಣಿನ ದಿನವಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. 2014 ರಲ್ಲಿ ಮೊದಲ ಬಾರಿಗೆ ಈ ಆಚರಣೆ ಆರಂಭವಾಯಿತು. ಆರೋಗ್ಯಕರ ಮಣ್ಣಿನ ಮಹತ್ವದ ಕುರಿತು ಜಾಗೃತಿ ಮೂಡಿಸುವುದು ಹಾಗೂ ಸಂಪನ್ಮೂಲಗಳ ದೀರ್ಘಕಾಲದ ನಿರ್ವಹಣೆಯ ಕುರಿತು ಜಾಗೃತಿಗಾಗಿ ಈ ಆಚರಣೆ.

Advertisement
ಈ ಆಚರಣೆಯ ರುವಾರಿ ಥಾಯ್ಲೆಂಡ್ ನ ರಾಜ ಭೂಮಿಬಲ ಅತುಲ್ಯ ತೇಜ. ಒಂಬತ್ತನೇ ರಾಮನೆಂದೇ ಗುರುತಿಸಿಕೊಂಡವರು. ಮಣ್ಷಿನ ಬಗ್ಗೆ ಅದಮ್ಯ ಪ್ರೀತಿ ಹಾಗೂ ಅಪಾರ ಜ್ಞಾನ ಇದ್ದವರು. ಮಣ್ಣಿನ ಪ್ರಾಮುಖ್ಯತೆಯನ್ನು, ಸಸ್ಯದ ಬೆಳವಣಿಗೆಯಲ್ಲಿ ಮಣ್ಣಿನ ಪಾತ್ರದ ಬಗ್ಗೆ ಬಹಳ ಆಸ್ಥೆ ವಹಿಸಿದ್ದರು.‌ ಹಾಗಾಗಿ ಈ ಆಚರಣೆಯ ಪ್ರಸ್ತಾಪ ಮಾಡಿದವರು ಥಾಯ್ಲ್ಯಾಂಡ್ ರಾಜ. ಅವರ ಜನ್ಮ ದಿನ ಡಿಸೆಂಬರ್ 5. ಹಾಗಾಗಿ ಅದೇ ದಿನವನ್ನು ಮಣ್ಣಿನ ದಿನಾಚರಣೆಗೆ ಸೂಕ್ತವೆಂದು ಆಯ್ದುಕೊಳ್ಳಲಾಯಿತು. ಪ್ರತಿ ವರುಷದಂತೆ ಈ ವರುಷವೂ ದು ಧ್ಯೇಯ ವಾಕ್ಯವನ್ನು ಸೂಚಿಸಲಾಗಿದೆ. ಈ ಬಾರಿಯ ಧ್ಯೇಯ ವಾಕ್ಯ ” ಮಣ್ಣಿನ ಲವಣಾಂಶ ನಿಲ್ಲಿಸುವುದು, ಮಣ್ಣಿನ ಉತ್ಪಾದನೆ ಹೆಚ್ಚಿಸುವುದು. ನಮಗಾಗಿ , ಮುಂದಿನ ಪೀಳಿಗೆಗಾಗಿ ಆರೋಗ್ಯ ಕರವಾದ ಮಣ್ಣನ್ನು ಉಳಿಸಿಕೊಳ್ಳೋಣ.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಮಾರ್ಚ್ ಆರಂಭದಲ್ಲೇ ರಾಜ್ಯದ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚಳ
March 4, 2025
10:11 PM
by: The Rural Mirror ಸುದ್ದಿಜಾಲ
ಅಡಿಕೆ ಎಲೆಚುಕ್ಕಿ ರೋಗ | ಸರ್ಕಾರದಿಂದ ಪ್ರತ್ಯೇಕ ಪರಿಹಾರ ಇಲ್ಲ | ಡಿಸೀಸ್‌ ಫಾರ್ಕಾಸ್ಟ್‌ ಮಾಡಲು ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಬೊಟ್ಯಾಡಿ ಒತ್ತಾಯ |
March 4, 2025
3:30 PM
by: ದ ರೂರಲ್ ಮಿರರ್.ಕಾಂ
ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ
March 4, 2025
2:33 PM
by: The Rural Mirror ಸುದ್ದಿಜಾಲ
ಚಿಕ್ಕಮಗಳೂರಿನ ಅರಣ್ಯದಲ್ಲಿ ಕಾಡ್ಗಿಚ್ಚು | 20 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ
March 3, 2025
7:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror