ಕೃಷಿ

ಎಲ್ಲವೂ ಬದಲಾಗುತ್ತಿದೆ – ಮಣ್ಣು ನಿಸ್ಸಾರವಾಗುತ್ತಿದೆ | ಹೈಬ್ರಿಡ್ ಬೀಜಗಳು ಮೇಳೈಸಿವೆ…! |

Share

ಬದಲಾವಣೆ ಜಗದ ನಿಯಮ.. ಹಾಗಂತ ಎಲ್ಲವೂ ಬದಲಾದರೆ..? ಇಡೀ ಜಗತ್ತೇ ಬದಲಾಗುತ್ತದೆ. ದಿನಿತ್ಯದ ಚಟುವಟಿಕೆಯಲ್ಲೂ ಬದಲಾವಣೆ ಕಾಣುತ್ತದೆ. ಆದರೆ ಅದು ಎಷ್ಟು ಸೂಕ್ತ. ಈ ಬದಲಾವಣೆಯಿಂದ ಪರಿಸರದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ. ಅದನ್ನು ಪರಿಸರರಕ್ಕೆ ತಡೆದುಕೊಳ್ಳುವ ಶಕ್ತಿ ಇದೆಯೇ..? ಅದರಿಂದ ನಮ್ಮ ಮೇಲೆ ಯಾವ ರೀತಿಯಾದ ಪರಿಣಾಮ ಬೀರಬಹುದು.. ? ಈ ಎಲ್ಲಾ ಬದಲಾವಣೆಗಳ ಬಗ್ಗೆ ಸಂಜಯ್ ಹೊಯ್ಸಳ ಅವರು ಬರೆದ ಲೇಖನ ಇಂದಿಗೆ ಖಂಡಿತ ಪ್ರಸ್ತುತ ಎಂದೇ ಹೇಳಬಹುದು.

Advertisement

ಭೂಮಿ ಮೇಲೆ ಮಾನವ ಎಂಬ ಒಂದೇ ಒಂದು ಜೀವಿಯ ಸಂಖ್ಯೆ ಬಿಲಿಯನ್ ಲೆಕ್ಕದಲ್ಲಿ ಏರಿದಂತೆ ಉಳಿದ ಅಸಂಖ್ಯಾತ ಜೀವಿಗಳು ಒಂದೊಂದೆ ಶಾಶ್ವತವಾಗಿ ಕಣ್ಮರೆಯಾಗುತ್ತಿವೆ. ಹಿಂದೆ ಕೃಷಿ ಭೂಮಿಯಲ್ಲೂ ಎಲ್ಲೆಲ್ಲೂ‌ ಕಾಣುತ್ತಿದ್ದ ನರಿ, ಮೊಲ, ಕಾಡು ಬೆಕ್ಕು, ಕಬ್ಬೆಕ್ಕು, ಕಬ್ರುಜೋಳ (ಸಹಸ್ರಪದಿ), ಸಾವಿರ ಸಾವಿರ ಸಂಖ್ಯೆಯ ಸರೀಸೃಪಗಳು, ಲಕ್ಷೋಪಾದಿಯ ವೈವಿಧ್ಯಮಯ ಹಕ್ಕಿಗಳು…  ‘ತುಂಬಿದ ಕೊಡ’ದಂತ ಕೃಷಿ ಭೂಮಿಯಲ್ಲಿ ಸಂತೃಪ್ತವಾಗಿದ್ದವು. ಇಂದು ಗಿಡ ಮರಗಳಿಲ್ಲದೆ ಬರಿದಾದ ಉದ್ದುದ್ದದ ‘ಖಾಲಿ ಕೊಡ’ದಂತ ಕೃಷಿ ಭೂಮಿಯಲ್ಲಿ ಮಣ್ಣು ಬಿಟ್ಟರೇ ಬೇರೇನೂ ಇಲ್ಲದಾಗಿದೆ! ಆ ಮಣ್ಣು ಕೂಡ ದಿನೇ ದಿನೆ ನಿಸ್ಸಾರವಾಗುತ್ತಿದೆ!!

ವ್ಯವಸಾಯದ ಪ್ರತಿ ಹಂತದಲ್ಲೂ ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸಿಕೊಂಡು ನಡೆಯುತ್ತಿದ್ದ ಸಾಂಪ್ರದಾಯಿಕ ಕೃಷಿ ಪದ್ದತಿಯ ಜಾಗವನ್ನು ಯಾಂತ್ರಿಕ ಕೃಷಿ ಆವರಿಸಿಕೊಂಡ ನಂತರ ತಿಪ್ಪೆ ಗೊಬ್ಬರ, ಕೃಷಿ ಭೂಮಿಯಲ್ಲಿ ಬೆಳೆಯುತ್ತಿದ್ದ ತರೇವರಿ ಗಿಡಮರಗಳು, ವೈವಿಧ್ಯಮಯ ಬೆಳೆಗಳು, ಉದ್ಯಮ ಸ್ವರೂಪ ಕಾಣದ ಕೃಷಿಯೊಂದಿಗೆ ಬೆರತುಹೋಗಿದ್ದ ಹೈನುಗಾರಿಕೆ… ಎಲ್ಲವೂ ಬದಲಾಗಿ  ಪ್ರತಿಹಂತದಲ್ಲೂ ರಾಸಾಯನಿಕ ಕೃಷಿ, ಏಕಬೆಳೆ ಕೃಷಿ, ಮೂಲ ತಳಿಯ ತರೇವಾರಿ ಬೀಜ ತಳಿಗಳ‌ ಜಾಗದಲ್ಲಿ ಏಕರೀತಿಯ ಹೈಬ್ರೀಡ್ ಬೀಜಗಳು ಮೇಳೈಸಿದವು.

ಎಲ್ಲಾ ಕ್ಷೇತ್ರದಲ್ಲಿಯೂ ಲಾಭವೇ ಮುಖ್ಯವಾಗಿರುವಾಗ, ಆರ್ಥಿಕತೆಯೇ ಬದುಕೆಂಬ ‘ಕತೆ’ಯ ಜೀವಾಳವಾಗಿರುವಾಗ ಇವೆಲ್ಲವೂ ಅನಿವಾರ್ಯ ಎನ್ನುವಂತಾಗಿರುವುದು ಮಾತ್ರ ಸತ್ಯ! ಉಳಿದವರು ಎಲ್ಲವನ್ನು ಉಡಾಯಿಸಿ ಅಕ್ರಮ, ಭ್ರಷ್ಟತೆಯ ಮೂಲಕ ಐಶಾರಾಮಿ ಜೀವನ ನಡೆಸುವಾಗ, ರೈತರು ಮಾತ್ರ ‘ಪರಿಶುದ್ಧ’ ವಾಗಿರಬೇಕೆಂಬುದು ಎಷ್ಟು ನ್ಯಾಯ!? ಹಾಗಾಗಿ ಈ ವಿಷಯದಲ್ಲಿ ಎಲ್ಲಾ ಹಂತದಲ್ಲೂ ಬದಲಾವಣೆಯಾಗಬೇಕಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬುಧನ ಚಲನೆ | 3 ರಾಶಿಗೆ ಸಂಪತ್ತಿನ ಮಳೆ, ಯಶಸ್ಸು

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

51 minutes ago

ಹರಿಯಾಣ | 800 ಮೆ.ವ್ಯಾ.ವಿದ್ಯುತ್ ಉತ್ಪಾದನಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ

ಹರಿಯಾಣ ಪ್ರವಾಸದಲ್ಲಿರುವ  ಪ್ರಧಾನಿ ನರೇಂದ್ರ ಮೋದಿ ಯಮುನಾ ನಗರದಲ್ಲಿ ಇಂದು ಧೀನಬಂಧು ಚೋಟು…

13 hours ago

ಚಾಮರಾಜನಗರ ಜಿಲ್ಲೆ ಸಿದ್ದಾಪುರ ಜಮೀನು ವಿವಾದ | ರೈತರು ಆತಂಕಪಡುವ ಅಗತ್ಯವಿಲ್ಲ

ಚಾಮರಾಜನಗರ ಜಿಲ್ಲೆಯ ಸಿದ್ದಾಪುರ ಗ್ರಾಮದ ಸಾವಿರಾರು ಎಕರೆ ಜಮೀನು ರಾಜವಂಶಸ್ಥರಿಗೆ ಸೇರಿದ್ದು, ಅದನ್ನು…

13 hours ago

ಹವಾಮಾನ ವರದಿ |14.04.2025 | ಕರಾವಳಿ ಕೆಲವು ಕಡೆ ಗುಡುಗು ಸಹಿತ ಮಳೆ | ಎ.19ರ ನಂತರ ಮಳೆಯ ಪ್ರಮಾಣ ತೀರಾ ಕಡಿಮೆ |

15.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

20 hours ago

ಅನುಭವದ ಕೃಷಿಯಿಂದ ಡಾಟಾ ಆಧಾರಿತ “ಸ್ಮಾರ್ಟ್ ಫಾರ್ಮಿಂಗ್ “‌ ಕಡೆಗೆ ಆಧುನಿಕ ಕೃಷಿ

ಸ್ಮಾರ್ಟ್ ಕೃಷಿಯು ಕೃಷಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ. ತಂತ್ರಜ್ಞಾನ, ಯಾಂತ್ರೀಕರಣ ಮತ್ತು…

1 day ago

ಜೂ.30 ರಿಂದ ಮಂಡ್ಯ ಮೈಶುಗರ್ ಕಾರ್ಖಾನೆಯಲ್ಲಿ  ಕಬ್ಬು ಅರೆಯುವ ಪ್ರಕ್ರಿಯೆ ಆರಂಭ

ಮಂಡ್ಯ ಮೈಷುಗರ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಪ್ರಕ್ರಿಯೆ ಜೂನ್ 30ರಿಂದ…

1 day ago