ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ

September 16, 2026
3:41 PM
ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ ರಾಜಸ್ಥಾನದಿಂದ ಆರಂಭವಾಗುವ ಸಾಧ್ಯತೆಯಿದೆ. ಆದರೆ ಬಂಗಾಳ ಕೊಲ್ಲಿಯಲ್ಲಿ ಮುಂದಿನ ವಾರ ಚಂಡಮಾರುತದಂತಹ ವ್ಯವಸ್ಥೆ ರೂಪುಗೊಳ್ಳುವ ಸಾಧ್ಯತೆ ಇರುವುದರಿಂದ ಮಧ್ಯ ಮತ್ತು ಪೂರ್ವ ಭಾರತದಿಂದ ಮುಂಗಾರು ಹಿಂದೆ ಸರಿಯುವ ಮುಂದಿನ ಹಂತದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌ ಹೇಳಿದೆ.

ಈ ವರ್ಷದ ನೈಋತ್ಯ ಮುಂಗಾರು ಹಂತ ಹಂತವಾಗಿ ಹಿಂದೆ ಸರಿಯಲು ಸಜ್ಜಾಗುತ್ತಿದೆ. ಪಶ್ಚಿಮ ರಾಜಸ್ಥಾನದಿಂದ ಸೆಪ್ಟೆಂಬರ್‌ 17ರ ವೇಳೆಗೆ ಮುಂಗಾರು ಹಿಂದೆ ಸರಿಯಲು ಆರಂಭವಾಗುವ ಪೂರಕ ವಾತಾವರಣ ನಿರ್ಮಾಣವಾಗುತ್ತಿದೆ. ಆದರೆ, ಹಿಂದೆ ಸರಿಯುವುದನ್ನು ಘೋಷಿಸುವುದು ಕೆಲವು ದಿನಗಳ ಕಾಲದ ಅಗತ್ಯ ಹವಾಮಾನ ಪರಿಸ್ಥಿತಿಗಳನ್ನು ಗಮನಿಸಿದ ನಂತರವೇ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌ ಹೇಳಿದೆ.

ಮುಂಗಾರು ಹಿಂದೆ ಸರಿಯುವುದು ಅಂದರೆ ಮುಖ್ಯವಾಗಿ ಮಳೆಯ ಪ್ರಮಾಣ ಕಡಿಮೆಯಾಗುವುದು, ವಾತಾವರಣದಲ್ಲಿನ ತೇವಾಂಶ ಇಳಿಕೆಯಾಗುವುದು, ತಾಪಮಾನ ಏರಿಕೆಯಾಗುವುದು, ಗಾಳಿಯ ದಿಕ್ಕಿನಲ್ಲಿ ಬದಲಾವಣೆ ಹಾಗೂ ಆಕಾಶ ಶುಭ್ರವಾಗುವುದು ಮುಂತಾದ ಅಂಶಗಳನ್ನು ಪರಿಗಣಿಸಲಾಗುತ್ತದೆ. ಈ ಪರಿಸ್ಥಿತಿಗಳು ನಿರಂತರವಾಗಿ ಕಂಡುಬಂದ ಬಳಿಕವೇ ಮುಂಗಾರು ಹಿಂದೆ ಸರಿದಿದೆ ಎಂದು ಅಧಿಕೃತವಾಗಿ ಘೋಷಿಸಲಾಗುತ್ತದೆ.

ಮುಂಗಾರು ಹಿಂದೆ ಸರಿಯುವುದು ಸಾಮಾನ್ಯವಾಗಿ ಒಮ್ಮೆಲೇ ನಡೆಯುವುದಿಲ್ಲ. ಮಳೆ ಕೆಲ ದಿನಗಳ ಕಾಲ ವಿರಾಮ ಕಂಡುಬಂದ ಬಳಿಕ ಮತ್ತೆ ವೇಗವಾಗಿ ಮುಂದುವರಿಯುವ ಸಾಧ್ಯತೆಯಿದೆ. ಅಲ್ಲದೆ, ಒಂದು ಪ್ರದೇಶದಿಂದ ಮುಂಗಾರು ಹಿಂದೆ ಸರಿಯುವುದು ಎಂದ ಮಾತ್ರಕ್ಕೆ ಅಲ್ಲಿ ಮಳೆ ಸಂಪೂರ್ಣವಾಗಿ ನಿಲ್ಲುತ್ತದೆ ಎಂದರ್ಥವಲ್ಲ. ಸ್ಥಳೀಯ ಹವಾಮಾನ ವ್ಯವಸ್ಥೆಗಳಿಂದ ಅಲ್ಲಲ್ಲಿ ಮಳೆ ಮುಂದುವರಿಯಬಹುದು.

ಕಡಿಮೆ ಒತ್ತಡದಿಂದ ವಿಳಂಬ : ಈ ಬಾರಿ ಪಶ್ಚಿಮ ರಾಜಸ್ಥಾನದಲ್ಲಿ ಮುಂಗಾರು ಹಿಂದೆ ಸರಿಯುವುದು ವಿಳಂಬವಾಗಲು ಗುಜರಾತ್‌ ಮತ್ತು ರಾಜಸ್ಥಾನದ ಭಾಗದಲ್ಲಿದ್ದ ಕಡಿಮೆ ಒತ್ತಡದ ಪ್ರದೇಶ ಪ್ರಮುಖ ಕಾರಣವಾಗಿತ್ತು. ಇದೀಗ ಆ ಹವಾಮಾನ ವ್ಯವಸ್ಥೆ ಅಲ್ಲಿಂದ ಹೊರಬಂದಿರುವುದರಿಂದ ಹಿಂದೆ ಸರಿಯಲು ಪೂರಕ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಆದರೆ ಮುಂದಿನ ದಿನಗಳಲ್ಲಿ ಮತ್ತೊಂದು ಹವಾಮಾನ ವ್ಯವಸ್ಥೆ ಗಮನ ಸೆಳೆಯುತ್ತಿದೆ. ಮುಂದಿನ ವಾರ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಉಂಟಾಗುವ ಸಾಧ್ಯತೆ ಇದ್ದು, ಇದರ ಬೆಳವಣಿಗೆ ಮುಂಗಾರು ಹಿಂದೆ ಸರಿಯುವ ಮುಂದಿನ ಹಂತದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ವಿಶೇಷವಾಗಿ ಮಧ್ಯ ಮತ್ತು ಪೂರ್ವ ಭಾರತದಿಂದ ಮುಂಗಾರು ಮತ್ತಷ್ಟು ಹಿಂದೆ ಸರಿಯುವ ಪ್ರಕ್ರಿಯೆ ಈ ಹವಾಮಾನ ವ್ಯವಸ್ಥೆಯ ಬೆಳವಣಿಗೆ ಹಾಗೂ ಅದರ ಚಲನೆಯ ಮೇಲೆ ಅವಲಂಬಿತವಾಗಿರಬಹುದು.

ಹೀಗಾಗಿ ಮುಂಗಾರು ಹಿಂದೆ ಸರಿಯುವ ಸೂಚನೆಗಳು ಕಾಣಿಸಿಕೊಂಡಿದ್ದರೂ, ದೇಶದ ಎಲ್ಲ ಭಾಗಗಳಿಂದ ಮಳೆ ತಕ್ಷಣವೇ ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸುವಂತಿಲ್ಲ. ಮುಂದಿನ ಕೆಲವು ದಿನಗಳ ಹವಾಮಾನ ಬೆಳವಣಿಗೆಗಳು ನಿರ್ಣಾಯಕವಾಗಲಿವೆ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

The Southwest Monsoon is showing signs of preparing for withdrawal, with conditions becoming favourable for the process to begin from West Rajasthan around September 17. Withdrawal is confirmed only after reduced rainfall and humidity, rising temperatures, changing wind patterns and clearer skies persist for several days. The retreat can occur in pauses and advances rather than continuously, and isolated showers may continue even after withdrawal. A low-pressure system over Gujarat and Rajasthan had delayed the process, while a possible cyclonic storm over the Bay of Bengal next week could influence the further withdrawal of the monsoon from central and eastern India.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 16-09-2026 | ಕರಾವಳಿಯಲ್ಲಿ ಸೆಖೆ, ಸಂಜೆ ಅಲ್ಲಲ್ಲಿ ಮಳೆ ನಿರೀಕ್ಷೆ
September 16, 2026
2:18 PM
by: ಸಾಯಿಶೇಖರ್ ಕರಿಕಳ
ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?
September 16, 2026
7:17 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ
September 15, 2026
11:12 PM
by: ದ ರೂರಲ್ ಮಿರರ್.ಕಾಂ
ಮಳೆಗೆ ಬೆಂಗಳೂರು ತತ್ತರ – ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ
September 15, 2026
10:09 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror