ನಾಡಿನೆಲ್ಲೆಡೆ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ವಿಶೇಷ ಆಚರಣೆಗಳು, ಪೂಜೆಗಳು ನಡೆದವು. ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಲ್ಲಿರುವ ವಿಶ್ವವಿಖ್ಯಾತ ಬಯಲು ಆಲಯದ ಗಣಪನನ್ನು ಕಣ್ತುಂಬಿಸಿಕೊಳ್ಳಲು ಸುಮಾರು ಒಂದುವರೆ ಲಕ್ಷಕ್ಕಿಂತಲೂ ಅಧಿಕ ಭಕ್ತಾದಿಗಳು ಆಗಮಿಸಿದ್ದರು.ವಿಶೇಷವಾದ ಪೂಜೆ ಗಣಪನಿಗೆ ನಡೆಯಿತು.
ದೇವಳದಲ್ಲಿ ದಿನ ಮುಂಚಿತವಾಗಿ ಮೋದಕ ಅಪ್ಪಕಜ್ಜಾಯ ಪ್ರಸಾದಗಳನ್ನು ಸಾಕಷ್ಟು ತಯಾರಿಸಲಾಗಿತ್ತು. ಮಧ್ಯಾಹ್ನ ಅನ್ನ ಸಂಪರ್ಪಣೆಯಲ್ಲಿ ಸುಮಾರು 10,000 ಕ್ಕಿಂತಲೂ ಅಧಿಕ ಭಕ್ತಾದಿಗಳು ಭೋಜನ ಪ್ರಸಾದವನ್ನು ಸ್ವೀಕರಿಸಿದರು. ಬೆಳಗ್ಗೆ 5:30 ರಿಂದ ಸೇವೆಗಳು ಆರಂಭಗೊಂಡಿದ್ದು ರಾತ್ರಿ 7:30 ತನಕ ನಡೆಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel