ರಾಜ್ಯ ಸರಕಾರದ ನೂತನ ಯೋಜನೆಯಂತೆ ಮಾಸಿಕ 200 ಯೂನಿಟ್ ನ ಉಚಿತ ಕೊಡುಗೆ ಘೋಷಿಸಿದೆ. ಗೃಹ ಜ್ಯೋತಿʼ #GruhaJyothi ಯೋಜನೆ ಜಾರಿಯಾಗುತ್ತಲೇ ಬೆಸ್ಕಾಂ ಇನ್ನೊಂದು ಕಡೆಯಲ್ಲಿ ಅಲರ್ಟ್ ಆಗಿದೆ. ಇದರ ಬೆನ್ನಲ್ಲೇ ಬೆಸ್ಕಾಂ #Bescom ವಿದ್ಯುತ್ ಕಳ್ಳತನ ಹಾಗೂ ದುರುಪಯೋಗ ತಡೆಯಲು ವಿಶೇಷ ಸ್ಕ್ಯಾಡ್ ಅನ್ನ ಅಲರ್ಟ್ ಗೊಳಿಸಿದೆ. ಈ ಮೂಲಕ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ 11 ಸ್ಥಳಗಳಲ್ಲಿ ವಿಶೇಷ ಜಾಗೃತ ದಳವನ್ನು ನಿಯೋಜಿಸಿ ಕಾರ್ಯೋನ್ಮುಖಗೊಳಿಸಿದೆ. ಈ ಮೂಲಕ ವಿದ್ಯುತ್ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಬೆಸ್ಕಾಂ ಮೊದಲ ಹೆಜ್ಜೆ ಇಟ್ಟಿದೆ.
ವಿದ್ಯುತ್ ಕಳ್ಳತನಕ್ಕೆ ತಕ್ಕ ಶಾಸ್ತಿ: ವಿದ್ಯುತ್ ರೀಡಿಂಗ್ ಮೀಟರ್ ನಲ್ಲಿ ಹಸ್ತಕ್ಷೇಪ ನಡೆಸಿ ಯಾಂತ್ರಿಕವಾಗಿ ಚಾಲ್ತಿಯಲ್ಲಿರುವ ಮೀಟರ್ ಅನ್ನ ಸ್ಥಗಿತಗೊಳ್ಳುವಂತೆ ಮಾಡುವ ಮೂಲಕ ಹೆಚ್ಚುವರಿ ಕರೆಂಟ್ ಬಾರದಂತೆ ಅಥವಾ ಕಡಿಮೆ ವಿದ್ಯುತ್ ಬಿಲ್ ಬರುವಂತೆ ಮಾಡುವುದು ಮತ್ತು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯುವುದು. ಪೂರ್ವನುಮತಿ ಇಲ್ಲದೇ ಪ್ರವಹಿಸುವ ವಿದ್ಯುತ್ ಕಂಬಗಳಿಂದ ಸಂಪರ್ಕ ಪಡೆಯುವುದು, ಇದು ಕಾನೂನಿನ್ವಯ ಗಂಭೀರ ಅಪರಾಧವಾಗಿದೆ. “ಭಾರತೀಯ ವಿದ್ಯುತ್ ಕಾಯ್ದೆ 2003”ರ ಅನ್ವಯ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…
ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್ ಫ್ರುಟ್(ಕಮಲಂ) ಹಾಗೂ…
ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…