Advertisement
ಸುದ್ದಿಗಳು

#SuccessStory | ಭತ್ತದ ಜೊತೆ ಸುಗಂಧರಾಜ ಹೂವಿನ ಬೆಳೆ | ಜೀವನಕ್ಕಾಗಿ ಅಪ್ಪನ ಕೃಷಿ, ಮಗನ ಗಾಣ |

Share

ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಕೃಷಿಯನ್ನು ಜೀವನಕ್ಕಾಗಿ ನಂಬಿದ್ದರು. ಅದರಲ್ಲಿ ಲಾಭ, ನಷ್ಟದ ಮಾತೇ ಇರಲಿಲ್ಲ. ಆದರೆ ಈಗ ಹಾಗಲ್ಲ. ತನಗೆ ಮಾತ್ರವಲ್ಲ, ಅದೊಂದು ಉದ್ಯಮವಾಗಬೇಕು, ಭರಪೂರ ಬೆಳೆ ಬರಬೇಕು ಅನ್ನೊದೊಂದೇ ಕೃಷಿ ಎನ್ನಿಸಿಕೊಂಡಿದೆ. ಅಂದುಕೊಂಡಂತೆ ಕೃಷಿ ಕೈ ಹಿಡಿಯದಿದ್ದರೆ ಆತ್ಮಹತ್ಯೆ, ಕೃಷಿ ಮೇಲೆ ಜಿಗುಪ್ಸೆ ಹುಟ್ಟುತ್ತದೆ. ಇಂದಿನ ಅಪ್ಡೇಟ್‌ ಯುಗದಲ್ಲಿ ಕೃಷಿಯೂ ಅಪ್ಡೇಟ್‌ ಆಗಿದೆ.

ಇಲ್ಲೊಂದು ಮೈಸೂರಿನ ಕುಟುಂಬ ಜೀವನಕ್ಕಾಗಿ ಕೃಷಿ #Agriculture ಮಾಡುತ್ತಿದೆ. ಹಾಗೆ ಉಳಿದವರ ಹಿತಾಸಕ್ತಿಯನ್ನು ನೋಡುತ್ತಿದೆ.  ಒಂದೆಡೆ ಸೊಂಪಾಗಿ ಬೆಳೆದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರೋ ಭತ್ತದ ಹೊಲ, ಅದರ ಪಕ್ಕದಲ್ಲಿ ಮೊಗ್ಗು ಅರಳಿಸಿಕೊಂಡು ನಿಂತಿರೋ ಸುಗಂಧ ರಾಜ ಹೂಗಳು. ಇನ್ನೂ ಮನೆಯಲ್ಲಿ ನೈಸರ್ಗಿಕ ಗಾಣದ ಸದ್ದು. ಹೀಗೆ ಅಪ್ಪ-ಮಗನ ಜೋಡಿ  ಕೃಷಿ ಮಾಡಿ ಅದ್ಭುತ ಸಾಧನೆ ಮಾಡಿದ್ದಾರೆ

ಮೈಸೂರಿನ ಟಿ. ನರಸೀಪುರ ತಾಲೂಕಿನ ಕಯಂಬಳ್ಳಿಯ ರೈತ ಬಸಪ್ಪ ಅತೀ ಕಡಿಮೆ ಖರ್ಚಿನಲ್ಲಿ ಭತ್ತ ಬೆಳೆಯುತ್ತಾರೆ. ಇದಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ತರಬೇತಿ ಪಡೆದಿರುವ ಬಸಪ್ಪ ಅವರು ಊರಿನಲ್ಲಿ ಅದೇ ಪ್ರಕಾರ ನಾಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಧರ್ಮಸ್ಥಳ ಸಂಸ್ಥೆಯ ಮಷಿನ್​ನಿಂದ ನಾಟಿ ಮಾಡಿಸುವ ಬಸಪ್ಪ ಅವರು, ಕೇವಲ ಎರಡೂವರೆ ಸಾವಿರ ರೂಪಾಯಿಯಲ್ಲಿ 2 ಎಕರೆಯಲ್ಲಿ ಭತ್ತ ಬೆಳೆಯುತ್ತಾರೆ. ಇನ್ನು ಸುಗಂಧರಾಜವನ್ನು ಅರ್ಧ ಎಕರೆಯಲ್ಲಿ ಬೆಳೆದಿರುವ ಬಸಪ್ಪ ಅವರು, ಅದ್ರಿಂದಾಗಿ ದಿನಕ್ಕೆ 6 ರಿಂದ 7 ಸಾವಿರ ಆದಾಯವನ್ನು ಪಡೆಯುತ್ತಿರುವುದು ವಿಶೇಷ. ನೇರವಾಗಿ ತಾವು ಬೆಳೆದ ಹೂಗಳನ್ನು ಮಾರುಕಟ್ಟೆಗೆ ಕೊಂಡೊಯ್ಯುವ ಬಸಪ್ಪನವರು ಅಲ್ಲಿ ಮಾರಾಟ ಮಾಡುತ್ತಾರೆ. ಹೀಗೆ 3 ಎಕರೆ ಜಮೀನಿನಲ್ಲಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಗಾಣದಿಂದ ಎಣ್ಣೆ ತಯಾರಿ: ಬಸಪ್ಪ ಪುತ್ರ ಹರ್ಷ ಅವರು ಮನೆಯಲ್ಲಿಯೇ ಗಾಣದಿಂದ ಎಣ್ಣೆ ತಯಾರಿಸುತ್ತಾರೆ. ಎತ್ತುಗಳ ಸಹಾಯದಿಂದ ಮಾಡುವ ನೈಸರ್ಗಿಕ ಎಣ್ಣೆ ಗಾಣ ಇದಾಗಿದ್ದು, ಪಟ್ಟಣ ಪ್ರದೇಶದಿಂದಲೂ ಗ್ರಾಹಕರು ಹುಡುಕಿಕೊಂಡು ಇಲ್ಲಿಗೆ ಬರುತ್ತಾರೆ.ಕೊಬ್ಬರಿ, ಹರಳೆಣ್ಣೆ, ಕಡಲೆ ಎಣ್ಣೆ ಹೀಗೆ ಹಲವು ಬಗೆಯ ಎಣ್ಣೆಗಳನ್ನೂ ಇಲ್ಲಿ ತಯಾರಿಸಲಾಗುತ್ತೆ.  ಜನರು ಗುಣಮಟ್ಟ ನೋಡಿ ಎಣ್ಣೆ ಖರೀದಿಸುತ್ತಾರೆ. ಹೀಗೆ ಅಪ್ಪ, ಮಗನ ಜೋಡಿಯ ಈ ಕೃಷಿ ಸಾಧನೆ ಕಂಡು ಗ್ರಾಮದ ಹಲವರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸೋ ಇವರು ಜೀವನಕ್ಕಾಗಿ ಕೃಷಿಯನ್ನು ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ.

(ಕೃಪೆ : ಅಂತರ್ಜಾಲ )
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಎಲೆಯ ಫೋಟೋ ತೆಗೆದರೆ AI ಕೀಟ ಯಾವುದೆಂದು ಹೇಳುತ್ತದೆ…! – 73 ಬೆಳೆಗಳ ಮೇಲೆ ಭಾರತದ ಹೊಸ ಕೃಷಿ ಕಣ್ಗಾವಲು

ಭಾರತದ ರಾಷ್ಟ್ರೀಯ ಕೀಟ ಕಣ್ಗಾವಲು ವ್ಯವಸ್ಥೆ ಈಗ 73 ಬೆಳೆಗಳು ಮತ್ತು 436…

3 hours ago

ಹವಾಮಾನ ವರದಿ | 24-08-2026 | ಕರಾವಳಿಯಲ್ಲಿ ಮಳೆ ಮುಂದುವರಿಕೆ – ಕರ್ನಾಟಕದಲ್ಲಿ ಮಳೆ ಪರಿಸ್ಥಿತಿ ಹೇಗೆ..?

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 26ರವರೆಗೆ ಮೋಡ ಮತ್ತು ಅಲ್ಲಲ್ಲಿ ಬಿಟ್ಟುಬಿಟ್ಟು…

13 hours ago

ಉದ್ಯೋಗಗಳಿಲ್ಲವೇ? ಅಥವಾ ಉದ್ಯೋಗಕ್ಕೆ ಬೇಕಾದ ಕೌಶಲ್ಯವಿರುವವರು ಇಲ್ಲವೇ?

ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…

18 hours ago

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ

ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…

1 day ago

ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…

1 day ago