ಸಾಧನೆ ಎನ್ನುವುದು ಏಕಾಏಕಿ ಸಿಗುವ ಫಲವಲ್ಲ. ನಮಗೆ ಕಾಣುವುದು ಫಲಿತಾಂಶಗಳು ಮಾತ್ರಾ. ಅದರ ಹಿಂದಿನ ಶ್ರಮ ಕಾಣದು. “ಅವನು ಮಾಡಿದ, ನಾನೂ ಮಾಡುವೆ” ಎಂದರೆ ಸಾಧ್ಯವಿಲ್ಲ. ಈ ಸಾಧನೆಯು ಪ್ರತಿದಿನದ ಸಣ್ಣ ಪ್ರಯತ್ನಗಳ, ಸೋಲುಗಳಿಂದ ಕಲಿತ ಪಾಠಗಳು ಮತ್ತು ಕೈ ಬಿಡದ ಮನೋಭಾವದ ಫಲ. ಎಲ್ಲರಿಗೂ ಯಶಸ್ಸು ಒಂದೇ ರೀತಿಯಲ್ಲಿ ಬರುವುದಿಲ್ಲ; ಆದರೆ ಪ್ರಯತ್ನ ಮಾಡುವ ಹಕ್ಕು ಎಲ್ಲರಿಗೂ ಸಮಾನ. ಕೆಲವೊಮ್ಮೆ ನಮ್ಮ ಶ್ರಮಕ್ಕೆ ತಕ್ಷಣ ಫಲ ಸಿಗದಿರಬಹುದು. ಆದರೆ ಆ ಕ್ಷಣಗಳೇ ನಮ್ಮೊಳಗಿನ ಶಕ್ತಿಯನ್ನು ಹೆಚ್ಚುಗೊಳಿಸುತ್ತವೆ. ನಿಂತುಬಿಟ್ಟರೆ ಸಾಧನೆ ಇಲ್ಲ; ನಡೆಯುತ್ತಲೇ ಇದ್ದರೆ ದಾರಿ ತಾನಾಗಿಯೇ ಕಾಣುತ್ತದೆ.
ಭಗವದ್ಗೀತೆ ಹೇಳುವಂತೆ, “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ” ಅಂದರೆ, ನಿನಗೆ ಹಕ್ಕಿರುವುದು ಕರ್ಮಕ್ಕೆ ಮಾತ್ರ, ಫಲದ ಮೇಲೆ ಅಲ್ಲ. ಫಲದ ಬಗ್ಗೆ ಅತಿಯಾಗಿ ಚಿಂತಿಸದೆ, ಇಂದಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನೆರವೇರಿಸಿದಾಗ ಯಶಸ್ಸು ತನ್ನ ಸಮಯಕ್ಕೆ ತಾನೇ ಬರುತ್ತದೆ. ಪ್ರತಿದಿನದ ಶ್ರಮವೇ ನಾಳೆಯ ಸಾಧನೆಗೆ ಬೀಜ. ಇಂದು ನಂಬಿಕೆ ಇಟ್ಟು ಮಾಡಿದ ಕೆಲಸವೇ, ನಾಳೆ ಬದುಕಿಗೆ ಹೊಸ ಅರ್ಥ ಕೊಡುತ್ತದೆ. ಅದರ ಜೊತೆಗೇ, ಇನ್ನೊಬ್ಬನ ಸಾಧನೆಗೂ ಅಡ್ಡಿಯಾಗಬೇಡ, ಮರುಗಬೇಡ, ಮತ್ಸರವೂ ಪಡಬೇಡ. ಸಾಧ್ಯವಾದರೆ ಬೆನ್ನುತಟ್ಟು, ಸಾಧನೆಯ ದಾರಿಯನ್ನು ತಿಳಿ, ಅದೂ ಅನುಭವ ಕೊಡುತ್ತದೆ… ಶುಭದಿನ…
2026 ರಲ್ಲಿ ಹೈಡ್ರೋಪೋನಿಕ್ ಅವಕಾಡೊ ಕೃಷಿ ಮತ್ತು ಜೇನು ಪರಾಗಸ್ಪರ್ಶದ ಸಂಯೋಜನೆ ಹೊಸ…
ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಗೂಡಿಗೆ ಕೆಜಿಗೆ 750ರಿಂದ 800 ರೂಪಾಯಿವರೆಗೆ ಬೆಲೆ ಸಿಗುತ್ತಿದೆ.…
ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಮತದಾನ…
ಕೇಂದ್ರ ಸರ್ಕಾರವು ರಾಜ್ಯದ ರಬ್ಬರ್ ಕೃಷಿಯನ್ನು ಈಶಾನ್ಯಕ್ಕೆ ಸ್ಥಳಾಂತರಿಸುವ ಮೂಲಕ ರಬ್ಬರ್ ಕ್ಷೇತ್ರವನ್ನು…
ಅಡಿಕೆ ಮಾರುಕಟ್ಟೆ ಎಂದರೆ ಕೇವಲ ಕೃಷಿ ಉತ್ಪನ್ನಗಳ ವಿನಿಮಯ ಕೇಂದ್ರವಲ್ಲ; ಅದೊಂದು ಸಂಕೀರ್ಣವಾದ…
ಮಿಝೋರಂ ಸರ್ಕಾರವು ಅಡಿಕೆ ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ. ಯಾವುದೇ…