Opinion

ಸಕ್ಕರೆ, ಬೆಲ್ಲ, ಜೇನುತುಪ್ಪ ಅಥವಾ ಕಂದು ಸಕ್ಕರೆ | ಯಾವ ಆಹಾರವು ನಿಮಗೆ ಸೂಕ್ತವಾಗಿದೆ? | ತಜ್ಞರ ಅಭಿಪ್ರಾಯ ಹೀಗಿದೆ….

Share

ನಮ್ಮಲ್ಲಿ ಹೆಚ್ಚಿನವರು ತಮ್ಮ ಬೆಳಗಿನ ದಿನಚರಿಯನ್ನು ಒಂದು ಕಪ್ ಚಹಾ(Tea), ಕಾಫಿ(Coffee)ಯೊಂದಿಗೆ ಪ್ರಾರಂಭಿಸುತ್ತಾರೆ. ಇದರಲ್ಲಿ ಸಕ್ಕರೆಯನ್ನು(Sugar) ಬಳಸುವುದರಿಂದ ಬೆಳಗ್ಗೆ ಎದ್ದ ಕೂಡಲೇ ಕುಡಿಯಬೇಕೋ ಬೇಡವೋ ಎಂಬ ಗೊಂದಲವಿದೆ. ಅನೇಕರು ಆರೋಗ್ಯ ಪ್ರಜ್ಞೆಯನ್ನು (Health conscious) ಹೊಂದಿದ್ದಾರೆ ಮತ್ತು ಈ ಬಗ್ಗೆ ಬಹಳ ಜಾಗರೂಕರಾಗಿದ್ದಾರೆ. ಸಕ್ಕರೆ ಸೇವನೆಯು ನಮ್ಮ ಒಟ್ಟಾರೆ ಆರೋಗ್ಯಕ್ಕೆ ವಿಶೇಷವಾಗಿ ಮಧುಮೇಹಿಗಳಿಗೆ(Diabetes) ಅಪಾಯಕಾರಿ(Danger) ಎಂದು ಪರಿಗಣಿಸಲಾಗಿದೆ. ಆದರೆ, ಈಗ ಸಕ್ಕರೆಗೆ ಪರ್ಯಾಯವಾಗಿ ಬೆಲ್ಲ(jaggery), ಜೇನು(Honey) ಮತ್ತು ಬ್ರೌನ್ ಶುಗರ್(Brown sugar) ಇವೆ. ಆದರೆ, ಈ ವಿಧಗಳಲ್ಲಿ ಯಾವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು….?

Advertisement

ಈ ಆಹಾರಗಳಲ್ಲಿ ಒಂದನ್ನು ಸಕ್ಕರೆ ಬದಲಿಯಾಗಿ ಆಯ್ಕೆಮಾಡುವ ಮೊದಲು, ಒಂದು ವಿಷಯವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಅಂದರೆ, ಈ ಎಲ್ಲಾ ರೀತಿಯ ಸಿಹಿತಿಂಡಿಗಳು ಹೆಚ್ಚು ಕಡಿಮೆ ಒಂದೇ ಪ್ರಮಾಣದ ಕ್ಯಾಲೊರಿಗಳನ್ನು ಹೊಂದಿರುತ್ತವೆ. ಅದರ ಪೌಷ್ಠಿಕಾಂಶದ ಸಂಯೋಜನೆ ಮತ್ತು ಪ್ರಕ್ರಿಯೆಗಳು ಸ್ವಲ್ಪ ವಿಭಿನ್ನವಾಗಿವೆ. ತಜ್ಞರು ಅದೇ ಹೇಳುತ್ತಾರೆ. ಸಕ್ಕರೆ, ಕಂದು ಸಕ್ಕರೆ, ಬೆಲ್ಲ ಎಲ್ಲವನ್ನೂ ಕಬ್ಬಿನಿಂದ ತಯಾರಿಸಲಾಗುತ್ತದೆ ಎಂದು ಪ್ರತಿಯೊಬ್ಬರೂ ತಿಳಿದಿರಬೇಕು. ಆದರೆ, ಇವುಗಳಲ್ಲಿ ನಿಮಗೆ ಯಾವುದು ಹಿತ? ಇದರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪೌಷ್ಟಿಕತಜ್ಞ ಗರಿಮಾ ಗೋಯಲ್ ಹೇಳಿದ್ದಾರೆ.

ಸಕ್ಕರೆಯೂ ಕಬ್ಬಿನ ರಸವನ್ನು ಸಂಪೂರ್ಣವಾಗಿ ಸಂಸ್ಕರಿಸಿ ತಯಾರಿಸಲಾದ ಅಂತಿಮ ಉತ್ಪನ್ನವಾಗಿದೆ. ಬ್ರೌನ್ ಶುಗರ್ ಅನ್ನು ಕೂಡ ಸಂಸ್ಕರಿಸಲಾಗುತ್ತದೆ, ಆದರೆ ಕಾಕಂಬಿಯನ್ನು ಬೇರ್ಪಡಿಸಲಾಗುತ್ತದೆ, ಆದರೆ ಕಾಕಂಬಿಯನ್ನು ನಂತರ ಸೇರಿಸಲಾಗುತ್ತದೆ. ಸಕ್ಕರೆಗೂ ಬ್ರೌನ್ ವಿಶೇಷ ವ್ಯತ್ಯಾಸವಿಲ್ಲ. ಕ್ಯಾಲೋರಿಗಳ ಕುರಿತು ಮಾತನಾಡಿದ ಪೌಷ್ಟಿಕತಜ್ಞ ಗರಿಮಾ ಗೋಯಲ್, ನೀವು ಒಂದು ಚಮಚ ಸಕ್ಕರೆ, ಬ್ರೌನ್ ಶುಗರ್ ಅಥವಾ ಬೆಲ್ಲವನ್ನು ತೆಗೆದುಕೊಂಡರೂ, ಈ ಮೂರು ಆಹಾರಗಳು ಬಹುತೇಕ ಒಂದೇ ಪ್ರಮಾಣದ ಕ್ಯಾಲೊರಿಗಳನ್ನು ಹೊಂದಿರುತ್ತವೆ.

ಸಕ್ಕರೆಯು ಅತಿಯಾಗಿ ಸಂಸ್ಕರಿಸಿದ ಪದಾರ್ಥವಾಗಿದೆ. ಇದರಲ್ಲಿ ಸಕ್ಕರೆ (ಗ್ಲುಕೋಸ್) ಹೊರತು ಇನ್ನಾವ ಪೌಷ್ಟಿಕಾಂಶ ಇರುವುದಿಲ್ಲ. ಮೇಲಾಗಿ, ಸಕ್ಕರೆಯನ್ನು ತಯಾರಿಸಲು ಅನೇಕ ರಾಸಾಯನಿಕ ಪ್ರಕ್ರಿಯೆಗಳನ್ನು ಮಾಡುತ್ತಾರೆ. ಈ ರಾಸಾಯನಿಕಗಳು ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತವೆ. ಸಾವಯವ ಪದ್ಧತಿಯಿಂದ ತಯಾರಿಸಿದ ಬೆಲ್ಲವು ಸಕ್ಕರೆಗಿಂತ ಎಷ್ಟೋ ಪಾಲು ಉತ್ತಮ. ಅದರಲ್ಲಿ, ಕ್ಯಾಲೋರಿಗಳು ಸಕ್ಕರೆಯಂತೆ ಇರಬಹುದು. ಆದರೆ, ಇತರ ಖನಿಜಾಂಶಗಳು ಮತ್ತು ಪೋಷಕಾಂಶಗಳು ಇರುವುದರಿಂದ ಬೆಲ್ಲವು ಆರೋಗ್ಯಕ್ಕೆ ಕೆಲವು ಲಾಭಗಳನ್ನು ನೀಡುತ್ತದೆ. ಬೆಲ್ಲವು ಸಕ್ಕರೆಗಿಂತ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿರುತ್ತದೆ. ತಾಳೆ ಬೆಲ್ಲವು (ಪಾಮ್ ಜಾಗರಿ) ಕಬ್ಬಿನ ಬೆಲ್ಲಕ್ಕಿಂತಲೂ ಹೆಚ್ಚು ಪ್ರಯೋಜನಕಾರಿಯಾಗಿದೆ.

ಶುದ್ಧ ಜೇನನ್ನು ಸಹ ಸಿಹಿಕಾರಕವಾಗಿ ಬಳಸಬಹುದು. ಇದು ಸಕ್ಕರೆ ಮತ್ತು ಬೆಲ್ಲಗಳಿಗಿಂತಲೂ ಒಳ್ಳೆಯ ಪರ್ಯಾಯವಾಗಿದೆ. ಏಕೆಂದರೆ, ಇದು ಹೂವುಗಳ ಮಕರಂದದಿಂದ ತಯಾರಾಗುತ್ತದೆ. ಇದರಲ್ಲಿ, ಪೋಷಕಾಂಶಗಳ ಪ್ರಮಾಣ ಹೆಚ್ಚು ಇರುತ್ತದೆ ಮತ್ತು ಇತರ ಕೆಲವು ಪೋಷಕಾಂಶಗಳು ಹಾಗೂ ಕಿಣ್ವಗಳು ಇರುವುದರಿಂದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ.

ಪರ್ಯಾಯವಾಗಿ ನೀವು ಖರ್ಜೂರ ಅಥವಾ ಖರ್ಜೂರದ ರಸವನ್ನು ಸಿಹಿಕಾರಕವಾಗಿ ಬಳಸಬಹುದು. ಇದರಲ್ಲಿ ಗ್ಲುಕೋಸ್ ಗಿಂತಲೂ ಫ್ರುಕ್ಟೋಜ್ ಪ್ರಮಾಣ ಹೆಚ್ಚಾಗಿ ಇರುವುದರಿಂದ ಇದು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವುದಿಲ್ಲ. ಆದ್ದರಿಂದ, ಮಧುಮೇಹಿಗಳಿಗೆ ಉಪಯುಕ್ತವಾಗಿದೆ. ಆದರೆ, ಅತಿಯಾದ ಫ್ರುಕ್ಟೋಸ್ ಸೇವನೆ ದೇಹದಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗಬಹುದು. ಸಕ್ಕರೆ ಆಹಾರಗಳ ಅತಿಯಾದ ಸೇವನೆಯು ದೇಹದಲ್ಲಿ ಹೆಚ್ಚುವರಿ ಕ್ಯಾಲೊರಿಗಳನ್ನು ಉಂಟುಮಾಡುತ್ತದೆ ಮತ್ತು ತೂಕ ಮತ್ತು ಕೊಬ್ಬನ್ನು ಹೆಚ್ಚಿಸುತ್ತದೆ. ಸಕ್ಕರೆ ತುಂಬಾ ಸಿಹಿಯಾಗಿರುವುದರಿಂದ ಇದು ಕ್ಯಾರಮೆಲ್ ರುಚಿಯನ್ನು ನೀಡಲು ಸಾಧ್ಯವಿಲ್ಲ ಎಂದು ಡಾ. ಅಗರ್ವಾಲ್ ಹೇಳಿದರು. ನೀವು ಈ ಸಿಹಿ ಆಹಾರಗಳಲ್ಲಿ ಯಾವುದನ್ನೂ ಅತಿಯಾಗಿ ಬಳಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಆಹಾರದ ಬಗ್ಗೆ ಗಮನ ಹರಿಸುವುದು ಮುಖ್ಯ ಎಂದು ಡಯೆಟಿಷಿಯನ್‌ಗಳು ಹೇಳಿತ್ತಾರೆ.

ಸಂಕಲನೆ: ಡಾ. ಪ್ರ. ಅ. ಕುಲಕರ್ಣಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಂಭವ | ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಒಂದೆರೆಡು ಕಡೆ ಮಳೆಯಾಗಿದೆ. ಉತ್ತರ ಕನ್ನಡ, ಉಡುಪಿ,…

43 minutes ago

ಹಾವೇರಿ ಜಿಲ್ಲೆಯಲ್ಲಿ ಬಾಡಿಗೆ ಕೊಳವೆಬಾವಿಗಳಿಂದ ನೀರು ಪೂರೈಕೆ

ಹಾವೇರಿ ಜಿಲ್ಲೆಯಲ್ಲಿರುವ 17 ಗ್ರಾಮ ಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳಿಗೆ 21 ಬಾಡಿಗೆ…

53 minutes ago

ಶುಕ್ರ ನೇರ ಸಂಚಾರದ ಪರಿಣಾಮ : ಕೆಲ ರಾಶಿಗಳ ಮೇಲೆ ಪ್ರಭಾವ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

1 hour ago

ಹವಾಮಾನ ವರದಿ | 10-04-2025 | ಎ.18 ರ ತನಕವೂ ಕರಾವಳಿ ಭಾಗಗಳಲ್ಲಿ ಅಲ್ಲಲ್ಲಿ ಮಳೆ

11.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

16 hours ago

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಆಮದು | ಮಿಜೋರಾಂ ಅಡಿಕೆ ಬೆಳೆಗಾರರಿಗೆ ಸವಾಲು

ಆಮದು ಕಾರಣದಿಂದ ಮಿಜೋರಾಂ ಅಡಿಕೆ ಬೆಳೆಗಾರರು ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ…

21 hours ago

ಈಗ ಮನಸುಗಳಿಗೇ ಒಂದು ಬ್ರಹ್ಮಕಲಶ ಯಾಕಾಗಬೇಕು…?

ಇಂದು ಯಾವುದೇ ಪ್ರಮುಖ ಕ್ಷೇತ್ರಗಳನ್ನು ಗಮನಿಸಿ, ಅಲ್ಲೊಂದು ವಿವಾದ ಇಲ್ಲದೇ ಇರುವುದೇ ಇಲ್ಲ.…

22 hours ago