Advertisement
ಸುದ್ದಿಗಳು

ರಸ್ತೆಗಳ ಬಳಿಕ ಈಗ ಸುಳ್ಯದಲ್ಲಿ ವಿದ್ಯುತ್‌ ಸಮಸ್ಯೆ ನಿವಾರಣೆಯ ಕಡೆಗೆ ಹೆಜ್ಜೆ | 110 ಕೆವಿ ವಿದ್ಯುತ್‌ ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿಗೆ ಟೆಂಡರ್‌ |

Share

ಹಲವು ಸಮಯಗಳ ಬಳಿಕ ಸುಳ್ಯ ಅಭಿವೃದ್ಧಿಯ ಕಡೆಗೆ ಹೆಜ್ಜೆ ಹಾಕುತ್ತಿದೆ. ತಾಲೂಕಿನ 172 ರಸ್ತೆಗಳಿಗೆ ಟೆಂಡರ್‌ ಪ್ರಕ್ರಿಯೆ ನಡೆದ ಬಳಿಕ ಇದೀಗ ಸುಳ್ಯದ ಅನೇಕ ಸಮಯಗಳ ಬೇಡಿಕೆಯಾಗಿದ್ದ 110 ಕೆ.ವಿ. ವಿದ್ಯುತ್ ಸಬ್ ಸ್ಟೇಷನ್ ಹಾಗು 110 ಕೆ.ವಿ.ವಿದ್ಯುತ್ ಲೈನ್ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ. ಈ ಬಗ್ಗೆ ಈಗಾಗಲೇ ಪತ್ರಿಕೆಗಳಲ್ಲಿ ಟೆಂಡರ್‌ ಪ್ರಕ್ರಿಯೆಯೂ ಆರಂಭವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸುಳ್ಯದಲ್ಲಿ 33 / 11 ಕೆ.ವಿ . ವಿದ್ಯುತ್ ಉಪಕೇಂದ್ರವನ್ನು 110 / 11 ಕೆವಿ ವಿದ್ಯುತ್ ಉಪಕೇಂದ್ರವನ್ನಾಗಿ ಉನ್ನತೀಕರಿಸುವುದು ಹಾಗು ಸಂಬಂಧಿತ ಪ್ರಸರಣ ಮಾರ್ಗದೊಂದಿಗೆ ನಿರ್ಮಿಸುವುದಕ್ಕಾಗಿ ಪತ್ರಿಕೆಯಲ್ಲಿ ಟೆಂಡರ್‌ ಆಹ್ವಾನ ಮಾಡಲಾಗಿದೆ. ಈ ಮೂಲಕ ಸುಳ್ಯದ ಇನ್ನೊಂದು ಪ್ರಮುಖ ಬೇಡಿಕೆಯೂ ಈಡೇರಿಕೆಯಾಗುತ್ತಿದೆ.

ಸುಳ್ಯದ ವಿದ್ಯುತ್‌ ಸಮಸ್ಯೆ ಹಲವು ಸಮಯಗಳಿಂದ ಕಾಡುತ್ತಿತ್ತು. ಈ ಬಗ್ಗೆ ಅನೇಕ ಹೋರಾಟಗಳು, ಮನವಿಗಳೂ ನಡೆದಿತ್ತು. ಕೃಷಿ ಸಂಘಟನೆಯಾದ ಭಾರತೀಯ ಕಿಸಾನ್‌ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಈ ಬಗ್ಗೆ ಹಲವು ಸುತ್ತಿನ ಪ್ರಯತ್ನ ನಡೆಸಿದ್ದವು.  ಇದೀಗ ಸುಳ್ಯದ ಬಹುವರ್ಷದ ಬೇಡಿಕೆಯೊಂದು ಈಡೇರಿಕೆಯಾಗುತ್ತಿದೆ.‌‌ ಜಿಲ್ಲಾ ಉಸ್ತುವಾರಿ ಸಚಿವ, ಇಂಧನ ಸಚಿವ ಸುನಿಲ್‌ ಕುಮಾರ್ ಅವರು ಸುಳ್ಯದ ವಿದ್ಯುತ್‌ ಸಮಸ್ಯೆ ಬಗ್ಗೆ ಸಭೆ ನಡೆಸಿದ್ದರು ಹಾಗೂ ಸುಳ್ಯದ ಹಲವು ಮೂಲಭೂತ ಸಮಸ್ಯೆಗಳ ನಿವಾರಣೆ ಕಡೆಗೆ ವಿಶೇಷ ಕಾಳಜಿ ವಹಿಸಿದ್ದರು. ಸುಳ್ಯದ ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ ಕಳೆದ ತಿಂಗಳು ಟೆಂಡರ್‌ ಪ್ರಕ್ರಿಯೆ ಆರಂಭವಾಗಿತ್ತು.172 ರಸ್ತೆಗಳಿಗೆ ಟೆಂಡರ್‌ ಕರೆಯಲಾಗಿತ್ತು.

ಇದೀಗ ಸುಳ್ಯದಲ್ಲಿ ಕೃಷಿಕರ ವಿದ್ಯುತ್‌ ಶುಲ್ಕ ಸಂಪೂರ್ಣ ಮನ್ನಾದ ಬಳಿಕವೂ ಕೃಷಿಕರ ಖಾತೆಯಲ್ಲಿ ಬಾಕಿ ಎಂದು ನಮೂದಾಗಿತ್ತು.  ದ ಕ ಜಿಲ್ಲೆಯ ಉಳಿದ ಎಲ್ಲಾ ತಾಲೂಕುಗಳಲ್ಲಿ ಈ ಸಮಸ್ಯೆ ನಿವಾರಣೆಯಾದರೂ ಹಲವು ವರ್ಷಗಳಿಂದ ಸುಳ್ಯದಲ್ಲಿ ಮಾತ್ರಾ ಈ ಸಮಸ್ಯೆ ಕಾಡುತ್ತಿದೆ. ಇದಕ್ಕಾಗಿ ಇಂಧನ ಸಚಿವ ಸುನಿಲ್‌ ಕುಮಾರ್‌ ಅವರು ವಿಶೇಷ ಗಮನಹರಿಸುವ ಭರವಸೆಯನ್ನೂ ಈಚೆಗೆ ಭೇಟಿ ನೀಡಿದ ಭಾರತೀಯ ಕಿಸಾನ್‌ ಸಂಘದ ನಿಯೋಗಕ್ಕೆ ಭರವಸೆ  ನೀಡಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬೆಳೆ ವೈರಸ್‌ ರೋಗಗಳಿಗೆ ಇನ್ನೂ ವ್ಯಾಕ್ಸಿನ್‌ ಇಲ್ಲ..! – ರೋಗ ನಿರೋಧಕ ತಳಿಗಳೇ ಭವಿಷ್ಯದ ಆಶಾಕಿರಣ

ಬೆಳೆ ವೈರಸ್‌ ರೋಗಗಳಿಗೆ ಇನ್ನೂ ವ್ಯಾಕ್ಸಿನ್‌ ಇಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ರೋಗ…

58 minutes ago

ಹವಾಮಾನ ವರದಿ | 30.05.2026 | ಕರಾವಳಿಯಲ್ಲಿ ತುಂತುರು ಮಳೆ, ಜೂ.7ರ ಸುಮಾರಿಗೆ ಮುಂಗಾರು ಪ್ರವೇಶ ಸಾಧ್ಯತೆ| ಆರಂಭ ದುರ್ಬಲವಾಗುವ ಲಕ್ಷಣ

31.05.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ, ರಾಜ್ಯದ ವಿವಿಧ…

9 hours ago

ಅಡಿಕೆ ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರದ ಭರವಸೆ..! ಟಿಶ್ಯೂ ಕಲ್ಚರ್‌ನಲ್ಲಿ ಮೊದಲ ಹಂತದ ಅಡಿಕೆ ಗಿಡಗಳು ನಾಟಿಗೆ ಸಿದ್ಧ

ಅಡಿಕೆ ಹಳದಿ ಎಲೆ ರೋಗ ನಿರೋಧಕ ಟಿಶ್ಯೂ ಕಲ್ಚರ್‌ ತಳಿ ಅಭಿವೃದ್ಧಿಯಲ್ಲಿ ಸಿಪಿಸಿಆರ್‌ಐ…

17 hours ago

ಈ ಬಾರಿಯ ಮುಂಗಾರು ದುರ್ಬಲವೇ..? ಐಎಂಡಿ ಎರಡನೇ ಮುನ್ಸೂಚನೆ ಬಿಡುಗಡೆ – 11 ವರ್ಷಗಳಲ್ಲೇ ಅತೀ ದುರ್ಬಲ ಮುಂಗಾರು ಸಾಧ್ಯತೆ..?

ಐಎಂಡಿ ಬಿಡುಗಡೆ ಮಾಡಿದ ಎರಡನೇ ಮುಂಗಾರು ಮುನ್ಸೂಚನೆಯಲ್ಲಿ ದೇಶದಲ್ಲಿ ಕೇವಲ 90% ಮಳೆಯ…

1 day ago

ಹವಾಮಾನ ವರದಿ | 29.05.2026 | ಕರ್ನಾಟಕಕ್ಕೆ ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ | ಜೂನ್ 7 ಬಳಿಕ ಕರಾವಳಿಯಲ್ಲಿ ಭಾರೀ ಮಳೆಯ ಸೂಚನೆ!

ಕರ್ನಾಟಕದಲ್ಲಿ ಮುಂಗಾರು ಪ್ರವೇಶದ ನಿರೀಕ್ಷೆ ಹೆಚ್ಚಾಗುತ್ತಿದ್ದು, ಸದ್ಯ ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲು…

1 day ago

ಭಾರತದಲ್ಲಿ 191 ಜಾತಿಯ ಜಿರಳೆಗಳು ದಾಖಲೆ – ವಿಜ್ಞಾನಿಗಳ ಹೊಸ ಅಧ್ಯಯನದಲ್ಲಿ ಬಹಿರಂಗವಾದ ಅಚ್ಚರಿಯ ಜೀವ ವೈವಿಧ್ಯ

ಭಾರತದಲ್ಲಿ 191 ಜಾತಿಯ ಜಿರಳೆಗಳು ದಾಖಲಾಗಿದ್ದು, ZSI ವಿಜ್ಞಾನಿಗಳು ದೇಶದ ಮೊದಲ ದೊಡ್ಡ…

2 days ago