ಚುನಾವಣಾ ಕಣ | Sullia | ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿ | ಏನಾದೀತು ಸುಳ್ಯದಲ್ಲಿ | ಇದುವರೆಗಿನ Updates … |

April 20, 2023
11:17 AM

ಸುಳ್ಯ ವಿಧಾನ ಸಭಾ ಕ್ಷೇತ್ರವು ಈ ಬಾರಿ ಕುತೂಹಲದ ಕ್ಷೇತ್ರಗಳಲ್ಲಿ  ಒಂದು. 30 ವರ್ಷಗಳಿಂದ ಶಾಸಕರಾಗಿ, ಕಳೆದ ಬಾರಿ ಸಚಿವರಾಗಿದ್ದ ಅಂಗಾರ ಅವರ ಬದಲಾವಣೆ ಬಳಿಕದ ಕ್ಷೇತ್ರ. ಕಳೆದ ಕೆಲವು ಸಮಯಗಳಿಂದ ಜನರಿಂದ ಮತದಾನ ಬಹಿಷ್ಕಾರ ಕೇಳಿರುವ ಕ್ಷೇತ್ರ. ಕಾಂಗ್ರೆಸ್‌ ಈ ಬಾರಿಯಾದರೂ ಗೆಲ್ಲಲೇಬೇಕೆಂದು ಹಠ ಹಿಡಿದಿರುವ ಕ್ಷೇತ್ರ. ಮೊದಲ ಬಾರಿಗೆ ಆಮ್‌ ಆದ್ಮಿ ಪಕ್ಷವು ಪೈಪೋಟಿಗೆ ಇಳಿದಿರುವ ಕ್ಷೇತ್ರ… ಹೀಗೇ ಈ ಎಲ್ಲಾ ಬೆಳವಣಿಗೆಗಳ ಕಾರಣದಿಂದ ಸುಳ್ಯ ಈ ಬಾರಿ ಕುತೂಹಲ ಮೂಡಿಸಿದೆ. ಇದುವರೆಗಿನ ಬೆಳವಣಿಗೆ ಹೇಗಿದೆ , ಹಾಗಿದ್ದರೆ?

Advertisement

ಸುಳ್ಯದಲ್ಲಿ ಕಳೆದ 30 ವರ್ಷಗಳಿಂದ ಬಿಜೆಪಿ ಗೆಲುವು ಸಾಧಿಸುತ್ತಿದೆ. ಕಳೆದ 5 ವರ್ಷಗಳಿಂದ ಇಲ್ಲಿ ಅಭಿವೃದ್ಧಿಯ ಬಗ್ಗೆ ಚರ್ಚೆ ಆರಂಭವಾಯಿತು. ಈಚೆಗೆ ಎರಡು ವರ್ಷಗಳಿಂದ ಅಭಿವೃದ್ಧಿಯ ಬಗ್ಗೆಯೇ ಹೋರಾಟ ನಡೆಯಿತು. ಅಭಿವೃದ್ಧಿ ಆಗದೇ ಇರಲು ಶಾಸಕರೇ ಕಾರಣ ಎಂದೂ ವಿರೋಧ ಆರಂಭವಾಯಿತು, ಈಚೆಗೆ ಸುಮಾರು 18 ಕಡೆಗಳಲ್ಲಿ ಮತದಾನ ಬಹಿಷ್ಕಾರ ಸೇರಿದಂತೆ ಪ್ರತಿಭಟನೆಗಳು ಕಂಡುಬಂದವು. ಕೊನೆಗೆ ಅಭ್ಯರ್ಥಿ ಬದಲಾವಣೆ ನಡೆಯಿತು. ಅದಾದ ಬಳಿಕ ಇನ್ನೊಂದು ಬೆಳವಣಿಗೆ ನಡೆಯಿತು. ಅಂಗಾರ ಅವರೇ ಅಸಮಾಧಾನ ಹೊರಹಾಕಿ, ಆ ಬಳಿಕ ಮತ್ತೆ ಸಕ್ರಿಯವಾಗುತ್ತೇನೆ ಎನ್ನುವ ಮೂಲಕ ಪ್ರಕರಣ ತಣ್ಣಗಾದರೂ, ಒಳಗಿನ ಲೆಕ್ಕಾಚಾರಗಳು ಬೇರೆಯೇ ನಡೆಯುತ್ತಿದೆ. ಈಗಾಗಲೇ ಸಮುದಾಯದ ಆಧಾರದಲ್ಲಿ ಚರ್ಚೆ ನಡೆಯಲು ಆರಂಭವಾಗಿದೆ. ಪಕ್ಷೇತರವಾಗಿಯೂ ಅಭ್ಯರ್ಥಿಗಳು ಕಣಕ್ಕೆ ಇಳಿಯುವ ಸೂಚನೆ ಲಭ್ಯವಾಗಿದೆ.

ಕ್ಷೇತ್ರದಲ್ಲಿ ಹಾಲಿ ಶಾಸಕರ ವಿರುದ್ಧವಾಗಿ ಬಲವಾದ ವಿರೋಧ ಕಂಡುಬಂದರೂ ಕಾಂಗ್ರೆಸ್‌ ಮತ ಸೆಳೆಯುವಲ್ಲಿ, ಜನರ ಪರವಾಗಿ ಧ್ವನಿ ಎತ್ತುವಲ್ಲಿ ವಿಫಲವಾಗಿತ್ತು. ಹಾಗಿದ್ದರೂ ಈ ಬಾರಿ ಕಾಂಗ್ರೆಸ್‌ ಪರವಾದ ಒಲವು ಹಲವು ಕಡೆ ಇತ್ತು. ಆದರೆ  ಕಾಂಗ್ರೆಸ್‌ ಒಳಗಿನ ಭಿನ್ನಾಭಿಪ್ರಾಯವು ಈ ಅವಕಾಶ ಪಡೆಯುವಲ್ಲಿ ಹಿನ್ನಡೆ ಅನುಭವಿಸಿದೆ. ಈಗ ಒಂದಾಗಿ ಪ್ರಚಾರ ಕಾರ್ಯ ನಡೆಸುತ್ತಿದ್ದರೂ ಒಳಗಿನ ಬೇಗುದಿ ಕಂಡುಬರುತ್ತಿದೆ. ಹೀಗಾಗಿ ಈಗ ಕಾಂಗ್ರೆಸ್‌ ವ್ಯವಸ್ಥಿತ ರೀತಿಯಲ್ಲಿ ಒಂದಾಗಿ ಪ್ರಚಾರ ಕಾರ್ಯ ನಡೆಸಿದರೆ ಈ ಬಾರಿ ಸುಳ್ಯದಲ್ಲಿ ಬದಲಾವಣೆಯ ವಾತಾವರಣ ಇದೆ.

ಇನ್ನು ಆಮ್‌ ಆದ್ಮಿ ಪಕ್ಷವು ಹೊಸ ರಾಜಕೀಯ ಅಲೆಯನ್ನು ಸೃಷ್ಟಿ ಮಾಡುತ್ತಿದೆ. ತನ್ನದೇ ಆದ ಮತದಾರರನ್ನು ಹೊಂದಿದೆ. ಎರಡೂ ಪಕ್ಷಗಳಿಂದ ಬೇಸತ್ತ ಮತದಾರರು ಎಎಪಿಯ ಕಡೆಗೆ ಒಲವು ಹೊಂದಿದ್ದಾರೆ. ಈ ಮತಗಳೂ ಎಎಪಿ ಬೆಳವಣಿಗೆಗೆ ಕಾರಣವಾಗಲಿದೆ. ಮೊದಲ ಚುನಾವಣೆಯಲ್ಲಿಯೇ ಉತ್ತಮ ಸ್ಪಂದನೆಯನ್ನು ಎಎಪಿ ಹೊಂದಿದೆ.

ಜೆಡಿಎಸ್‌ , ಪ್ರಜಾಕೀಯ ಪಕ್ಷಗಳು ಕೂಡಾ ಸುಳ್ಯದಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಈ ನಡುವೆ ಪಕ್ಷೇತರ ಅಭ್ಯರ್ಥಿ ಕಣಕ್ಕೆ ಇಳಿಯುವ ಸೂಚನೆ ಇದೆ. ಸೋಮವಾರದಿಂದ ಚುನಾವಣಾ ಕಣದಲ್ಲಿನ ಸ್ಪಷ್ಟ ಚಿತ್ರಣಗಳು ಗೋಚರವಾಗಲಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಕ್ತರಿಗಾಗಿ ತೆರೆದ ಕೇದಾರನಾಥ ದ್ವಾರ | ಮೊದಲ ದಿನ ಸುಮಾರು 10 ಸಾವಿರ ಜನರಿಂದ ದೇವರ ದರ್ಶನ
May 2, 2025
9:13 PM
by: The Rural Mirror ಸುದ್ದಿಜಾಲ
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ | ಆರೋಪಿಗಳ ಪತ್ತೆಗೆ 4  ಪ್ರತ್ಯೇಕ ತಂಡ ರಚನೆ | ದಕ್ಷಿಣ ಕನ್ನಡದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಬದ್ಧ
May 2, 2025
8:59 PM
by: ದ ರೂರಲ್ ಮಿರರ್.ಕಾಂ
ಆನೆ-ಮಾನವ ಸಂಘರ್ಷ ನಿಯಂತ್ರಣಕ್ಕೆ ಕ್ರಮ | ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ
May 2, 2025
8:50 PM
by: The Rural Mirror ಸುದ್ದಿಜಾಲ
ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಅವಧಿ ವಿಸ್ತರಣೆ
May 2, 2025
8:22 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group