ನಶೆ ತಲೆಗೇರಿ ಪೊಲೀಸ್‌ ಅತಿಥಿಯಾದ… ! | ತಲವಾರು ಹಿಡಿದು ಓಡಾಡಿದವನ ಕತೆ…! |

August 10, 2022
2:16 PM

ಅಮಲು ತಲೆಗೇರಿದರೆ ಏನಾಗುತ್ತದೆ..? ಪೊಲೀಸ್‌ ಅತಿಥಿಯಾಗಬೇಕಾಗುತ್ತದೆ…!. ಹೀಗೆ ಒಂದು ಪ್ರಶ್ನೆ… ಒಂದು ಉತ್ತರ. ಇದಕ್ಕೆ ಕಾರಣ ಇದೆ. ಸುಳ್ಯದ ಕನಕಮಜಲಿನಲ್ಲಿ ಯುವಕನೊಬ್ಬ ತಲವಾರು ಹಿಡಿದು ರಸ್ತೆಯಲ್ಲಿ ಓಡಾಡಿದ. ಅದರ ವಿಡಿಯೋ ವೈರಲ್‌ ಆಯಿತು. ಈಗ ಪೊಲೀಸ್‌ ಅತಿಥಿಯಾದ. ನಶೆ ಇಳಿದಾಗ ಮಾಡಿದ ತಪ್ಪು ಅರಿವಾಯ್ತು…!

Advertisement
Advertisement
Advertisement
Advertisement

ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಸುಣ್ಣಮೂಲೆ ಎಂಬಲ್ಲಿ ತಲವಾರು ಹಿಡಿದು ಯುವಕನೊಬ್ಬ ರಸ್ತೆಯಲ್ಲಿ ಸುತ್ತಾಡಿದ. ಈ ಯುವಕನ ಹೆಸರು ಸಂದೀಪ್.‌ ಈತ ತಲವಾರು ಹಿಡಿದು ಓಡಾಡುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಯ್ತು. ಅದು ಸಾಮಾಜಿಕ ತಾಲತಾಣಗಳಲ್ಲಿ ವೈರಲ್‌ ಆಯ್ತು. ಪೊಲೀಸ್‌ ಠಾಣೆಗೂ ಸುದ್ದಿ ತಲಪಿತು. ದ ಕ ಜಿಲ್ಲೆ ಮೊದಲೇ ಸೂಕ್ಷ್ಮ ಪ್ರದೇಶವಾಗಿದೆ. ಈಗಾಗಲೇ ಅಶಾಂತಿಯ ವಾತಾವರಣ ತಣ್ಣಗಾಗುತ್ತಿದೆ. ಈ ನಡುವೆಯೇ ತಲವಾರು ಹಿಡಿದು ಓಡಾಟದ ದೃಶ್ಯ ಕಂಡು ಬಂದ ತಕ್ಷಣವೇ ಪೊಲೀಸರು ಜಾಗೃತರಾಗದರು. ಯುವಕ ಸಂದೀಪ್‌ ನನ್ನು ಬಂಧಿಸಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದರು.

Advertisement

ವಿಚಾರಣೆ ವೇಳೆ, ಆತ ಉದ್ದೇಶಪೂರ್ವಕವಾಗಿ ಹೀಗೆ ತಲವಾರು ಹಿಡಿದು ಓಡಿದ್ದಲ್ಲ. ತಲೆಗೆ ಅಮಲು ಏರಿದ್ದರ ಪರಿಣಾಮ ಹೀಗಾಗಿದೆ. ಈಗ ಕೆಲವು ಸಮಯಗಳಿಂದ ಮದ್ಯಪಾನ ಬಿಟ್ಟಿದ್ದ. ನಿನ್ನೆ ಮತ್ತೆ ಮದ್ಯ ಸೇವಿಸಿದ ಪರಿಣಾಮ ತಲೆಗೆ ಒಮ್ಮೆಲೇ ನಶೆ ಏರಿದೆ. ಇದರ ಪರಿಣಾಮವಾಗಿ ಆತ ತಲವಾರು ಹಿಡಿದು ಓಡಾಡಿದ. ಸದ್ಯ ಪೊಲೀಸ್‌ ಅತಿಥಿಯಾಗಿದ ಯುವಕನನ್ನು ವಿಚಾರಣೆ ನಡೆಸಿದ್ದಾರೆ ಪೊಲೀಸರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ
January 31, 2025
10:23 PM
by: The Rural Mirror ಸುದ್ದಿಜಾಲ
ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ
January 31, 2025
10:11 PM
by: The Rural Mirror ಸುದ್ದಿಜಾಲ
ಎಲ್ಲಾ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಕಾನೂನು ಜಾರಿಗೆ ರಾಜ್ಯ ರೈತ ಸಂಘಟನೆಗಳ ಮನವಿ
January 31, 2025
10:08 PM
by: The Rural Mirror ಸುದ್ದಿಜಾಲ
ಗ್ರೇಟರ್ ಹೆಸರಗಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ ಶುದ್ಧ ಪರಿಸರಕ್ಕೆ ಸಹಕಾರಿ | ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ
January 31, 2025
10:05 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror